ಅಭಿಮಾನಿಯ ಕೊನೆ ಆಸೆ ಈಡೇರಿಸಿದ ಶಾರುಖ್‌ ಖಾನ್‌;ಹೃದಯವಂತ ಎಂದ ಫ್ಯಾನ್ಸ್‌

Shah Rukh Khan : ನಟ-ನಟಿಯರು ಅಂದಮೇಲೆ ಫ್ಯಾನ್ಸ್‌ ಇರೋದು ಕಾಮನ್‌. ಆದರೆ ಡೈ ಹಾರ್ಡ್‌ ಫ್ಯಾನ್ಸ್‌ ಇರೋದು ವಿರಳ. ಹೌದು ನಟನೆಗೆ ಫ್ಯಾನ್ಸ್‌ ಆಗೋದಕ್ಕಿಂತ ಅವರ ಗುಣಕ್ಕೆ ಅವರನ್ನು ಮೆಚ್ಚುವವರೇ ಹೆಚ್ಚು. ಇದೀಗ ಬಾಲಿವುಡ್‌ ನಟ ಶಾರುಖ್‌ಖಾನ್‌ ತಮ್ಮ ಅಭಿಮಾನಿಯ ಕೊನೆ ಆಸೆ ಈಡೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Written by - Zee Kannada News Desk | Last Updated : May 25, 2023, 09:53 AM IST
  • ಅಭಿಮಾನಿಯ ಕೊನೆ ಆಸೆಯನ್ನು ಈಡೇರಿಸಿ ನಟ ಶಾರುಖ್‌ ಖಾನ್‌ ಎಲ್ಲರ ಹೃದಯವನ್ನು ತಲುಪಿದ್ದಾರೆ.
  • ಕ್ಯಾನ್ಸರ್‌ನಿಂದ ಬಳಲುತ್ತಿರುವ 60 ವರ್ಷದ ಶಿವಾನಿ
  • ಶಿವಾನಿ ಪುತ್ರಿಯ ಮದುವೆಗೆ ಆಗಮಿಸುವುದಾಗಿಯೂ ಶಾರುಖ್‌ ಮಾತು ಕೊಟ್ಟಿದ್ದಾರೆ.
ಅಭಿಮಾನಿಯ ಕೊನೆ ಆಸೆ ಈಡೇರಿಸಿದ ಶಾರುಖ್‌ ಖಾನ್‌;ಹೃದಯವಂತ ಎಂದ ಫ್ಯಾನ್ಸ್‌  title=

Bollywood : ಸಾವು ಬದುಕಿನ ಮದ್ಯ ಹೋರಾಡುತ್ತಿರುವ ಅಭಿಮಾನಿಯ ಕೊನೆ ಆಸೆಯನ್ನು ಈಡೇರಿಸಿ ನಟ ಶಾರುಖ್‌ ಖಾನ್‌ ಎಲ್ಲರ ಹೃದಯವನ್ನು ತಲುಪಿದ್ದಾರೆ. ಹೌದು ಕೊಲ್ಕತ್ತಾ ಮೂಲದ ಕ್ಯಾನ್ಸರ್‌ನಿಂದ ಬಳಲುತ್ತಿರುವ 60 ವರ್ಷದ ಶಿವಾನಿ ಎಂಬುವವರು ತಮ್ಮ ಕುಟುಂಬದವರ ಬಳಿ ನೆಚ್ಚಿನ ನಟ ಶಾರುಖ್‌ ಖಾನ್‌ ಅವರನ್ನು ಬೇಟಿಯಾಗಬೇಕು ಎನ್ನುವ ಬಯಕೆಯನ್ನು ಹೇಳಿಕೊಂಡಿದ್ದರು. 

ಈ ವಿಚಾರವನ್ನು ಅವರ ಪುತ್ರಿಯಾದ ಪ್ರಿಯಾ ಎಂಬುವವರು ಸಾಮಾಜಿಕ ಜಾಲತಾಣದ ಮೂಲಕ ಶಾರುಖ್‌ ಅಭಿಮಾನಿಗಳ ಗಮನಕ್ಕೆ ತಂದಿದ್ದರು. ಅವರ ಅಭಮಾನಿಗಳಲ್ಲಿ ಒಬ್ಬರಾದ ಫೈಜಿ ಎಂಬುವರು ಶಿವಾನಿ ಅವರ ಕೊನೆಯ ಆಸೆಯ ಬಗ್ಗೆ ಶಾರುಖ್‌ ಖಾನ್‌ ಅವರಿಗೆ ತಿಳಿಸಿದ್ದಾರೆ. ಸೂಪರ್‌ ಹಿಟ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಶಾರುಖ್‌ ಅವರ ಅಭಿಮಾನಿಯ ವಿಷಯ ತಿಳಿದ ತಕ್ಷಣವೇ ಬಿಡುವು ಮಾಡಿಕೊಂಡು ಶಿವಾನಿ ಅವರಿಗೆ ವಿಡಿಯೋ ಕಾಲ್‌ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ-ಕಿಚ್ಚನ 46ನೇ ಚಿತ್ರಕ್ಕೆ ಕಬಾಲಿ ನಿರ್ಮಾಪಕರ ಬಂಡವಾಳ,ಸಿನಿಮಾ ಟೈಟಲ್‌ ಏನು?

ಜೊತೆಗೆ ಅಭಿಮಾನಿ ಶಿವಾನಿ ಅವರ ಪುತ್ರಿಯ ಜೊತೆಗೂ ಶಾರುಖ್‌ ಖಾನ್‌ ಅರ್ಧ ಗಂಟೆ ಮಾತಾನಾಡಿದ್ದು, ಚಿಕಿತ್ಸೆಗೆ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ. ತಾವು ಕೊಲ್ಕತ್ತಾಗೆ ಹೋದಾಗ ಅವರ ಅಅಭಿಮಾನಿ ಶಿವಾನಿಯವರನ್ನು ಖಂಡಿತವಾಗಿಯೂ ಬೇಟಿಮಾಡುತ್ತೇನೆ ಎಂದು ತಿಳಿಸಿದ್ದಾರೆ. ಮತ್ತು ಶಿವಾನಿ ಪುತ್ರಿಯ ಮದುವೆಗೆ ಆಗಮಿಸುವುದಾಗಿಯೂ ಶಾರುಖ್‌ ಮಾತು ಕೊಟ್ಟಿದ್ದಾರೆ.

ತಮ್ಮ ನೆಚ್ಚಿನ ನಟನೊಂದಿಗೆ ಮಾತನಾಡಿದ ಅನುಭವವನ್ನು ಶಿವಾನಿ ಸೆಲ್ಫಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. "ಶಾರುಖ್‌ ಖಾನ್‌ ನಮಗೆ ವಿಡಿಯೋ ಕಾಲ್‌ ಮಾಡುತ್ತಾರೆ ಎಂದು ನಾವು ನಿಜಕ್ಕೂ ನಿರೀಕ್ಷಿಸಿರಲಿಲ್ಲ. ಅವರ ಜೊತೆ ಮಾತನಾಡಿ ಬಹಳ ಖುಷಿಯಾಗಿದೆ" ಎಂದಿದ್ದಾರೆ. ಶಾರುಖ್‌ ಅವರ ಅಪ್ಪಟ ಅಭಿಮಾನಿ ನಟನ ಸರಳತೆಯನ್ನು ಕೊಂಡಾಡಿದ್ದಾರೆ. ಅಭಿಮಾನಿಗಳ ಮೇಲೆ ಶಾರುಖ್‌ ಹೊಂದಿರುವ ಕಾಳಜಿ ಮತ್ತು ಗೌರವವನ್ನು ನೆಟ್ಟಿಗರು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. 

ಇದನ್ನೂ ಓದಿ-ಮಾಸ್‌ ಮಹಾರಾಜನ ʼಟೈಗರ್‌ ನಾಗೇಶ್ವರ್‌ ರಾವ್‌ʼ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News