ರಾಮಚರಣ್‌ "RC16" ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಪಾತ್ರ ಲೀಕ್.. ಯಾರೂ ಊಹಿಸದ ಗೆಟಪ್‌ನಲ್ಲಿ ಹ್ಯಾಟ್ರಿಕ್‌ ಹಿರೋ!

Shivarajukumar: ರಾಮಚರಣ್ ಅವರ ಮುಂದಿನ ಚಿತ್ರವನ್ನು ಬುಚ್ಚಿ ಬಾಬು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಬ್ಯಾಕ್ ಡ್ರಾಪ್ ಮತ್ತು ಶಿವರಾಜ್ ಕುಮಾರ್ ಅವರ ಪಾತ್ರ ಲೀಕ್ ಆಗಿದೆ.   

Written by - Savita M B | Last Updated : Feb 15, 2024, 08:21 AM IST
  • ರಾಮ್ ಚರಣ್ ಅವರ ಮುಂದಿನ ಚಿತ್ರವನ್ನು ಬುಚ್ಚಿ ಬಾಬು ನಿರ್ದೇಶಿಸಲಿದ್ದಾರೆ
  • ಹಳ್ಳಿಗಾಡಿನ ಕಂಟೆಂಟ್ ಇಟ್ಟುಕೊಂಡು ನಿರ್ದೇಶಕರು ಈ ಸಿನಿಮಾ ಮಾಡುತ್ತಿದ್ದಾರೆ
  • ಇತ್ತೀಚೆಗಷ್ಟೇ ಈ ಸಿನಿಮಾದ ಬ್ಯಾಕ್ ಡ್ರಾಪ್ ಮತ್ತು ಶಿವರಾಜ್ ಕುಮಾರ್ ಅವರ ಪಾತ್ರ ಲೀಕ್ ಆಗಿದೆ.
ರಾಮಚರಣ್‌ "RC16" ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಪಾತ್ರ ಲೀಕ್.. ಯಾರೂ ಊಹಿಸದ ಗೆಟಪ್‌ನಲ್ಲಿ ಹ್ಯಾಟ್ರಿಕ್‌ ಹಿರೋ! title=

RC16 Updates: ರಾಮ್ ಚರಣ್ ಅವರ ಮುಂದಿನ ಚಿತ್ರವನ್ನು ಬುಚ್ಚಿ ಬಾಬು ನಿರ್ದೇಶಿಸಲಿದ್ದಾರೆ. ಹಳ್ಳಿಗಾಡಿನ ಕಂಟೆಂಟ್ ಇಟ್ಟುಕೊಂಡು ನಿರ್ದೇಶಕರು ಈ ಸಿನಿಮಾ ಮಾಡುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಲಾಂಚ್ ಮಾಡಲು ಪ್ಲಾನ್ ಮಾಡಲಾಗಿದ್ದು.. ಸದ್ಯ ಚಿತ್ರತಂಡದ ಆಯ್ಕೆ ನಡೆಯುತ್ತಿದೆ.. ಉತ್ತರಾಂಧ್ರದಲ್ಲಿ ಚಿತ್ರವಿರುವುದರಿಂದ ಅಲ್ಲಿನ ಕಲಾವಿದರಿಗೆ ಚಿತ್ರತಂಡ ಆದ್ಯತೆ ನೀಡುತ್ತಿದೆ.

ಈ ಸಿನಿಮಾದಲ್ಲಿ ಮುಖ್ಯ ಕಾಸ್ಟಿಂಗ್ ಕೂಡ ಅದ್ಧೂರಿಯಾಗಿ ಇರಲಿದೆ ಎಂದು ಗೊತ್ತಾಗಿದೆ. ಇತ್ತೀಚೆಗೆ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು.. ಆದರೆ, ಇದೀಗ "RC16" ಹೆಸರಿನಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಪಾತ್ರ ಏನು ಎಂಬುದು ಕುತೂಹಲ ಮೂಡಿಸಿದೆ. ಈ ಹಿನ್ನಲೆಯಲ್ಲಿ ಕ್ರೇಜಿ ಅಪ್ಡೇಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಇದನ್ನೂ ಓದಿ-ಅಬುದಾಬಿಯಲ್ಲಿ "ಕರಟಕ ದಮನಕ" ಚಿತ್ರದ "ಡೀಗ ಡಿಗರಿ" ಹಾಡು ಬಿಡುಗಡೆ

ಇದರಲ್ಲಿ ಶಿವರಾಜ್ ಕುಮಾರ್ ಕುಸ್ತಿ ತರಬೇತುದಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.. ಈ ಹಿಂದೆ ಈ ಸಿನಿಮಾದಲ್ಲಿ ರಾಮ್ ಚರಣ್ ಕಬಡ್ಡಿ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದು, ಕಬಡ್ಡಿ ಹಿನ್ನಲೆಯಲ್ಲಿ ಸಿನಿಮಾ ಮೂಡಿಬರಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಅದೆಲ್ಲ ಕೇವಲ ವದಂತಿ ಎನ್ನಲಾಗಿತ್ತು..

ಇದನ್ನೂ ಓದಿ-ಒಂದು ಸರಳ ಪ್ರೇಮಕಥೆ ಬಗ್ಗೆ ಅನಿರುದ್ಧ ಹೇಳಿದ್ದೇನು?

ಚಿತ್ರದಲ್ಲಿ ಕ್ರೀಡೆಗೆ ಸಂಬಂಧಿಸಿದ ಅಂಶಗಳಿವೆ, ಆದರೆ ಇದು ಮುಖ್ಯ ಕಥೆ ಯಾವುದು ಎಂಬುದು ಸ್ಪಷ್ಟವಾಗಿಲ್ಲ... ಕಬಡ್ಡಿ ಜತೆಗೆ ಕ್ರಿಕೆಟ್, ಕುಸ್ತಿಯ ಸ್ಪರ್ಶವೂ ಇದೆ. ಕ್ರೀಡಾ ಅಂಶಗಳು ಸಂದರ್ಭಕ್ಕೆ ಅನುಗುಣವಾಗಿ ಬರುತ್ತವೆ.. ಆದರೆ ಅದಕ್ಕೂ ಮೀರಿ ಹಳ್ಳಿಯ ಬ್ಯಾಕ್ ಡ್ರಾಪ್ ಕಥೆ, ಹೆಚ್ಚಿನ ಭಾವನೆಗಳನ್ನು ಒಳಗೊಂಡ ಸಿನಿಮಾ ಇದಾಗಿರುತ್ತದೆ.. 

ಸದ್ಯ ರಾಮ್ ಚರಣ್ ಶಂಕರ್ ನಿರ್ದೇಶನದ `ಗೇಮ್ ಚೇಂಜರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಆಗಲಿದೆ. ಟ್ರೆಂಡಿ ರಾಜಕೀಯವನ್ನು ತೋರಿಸುವುದರ ಜೊತೆಗೆ, ಇದು ನಿಯತಕಾಲಿಕ ವಿಷಯಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ರಾಮಚರಣ್ ಸಿಎಂ ಮತ್ತು ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News