ದೃಷ್ಟಿ ದೋಷಕ್ಕೆ ಅತ್ಯುತ್ತಮ ಮನೆಮದ್ದು, ತಿಂಗಳಲ್ಲಿ ಕನ್ನಡಕಕ್ಕೆ ಹೇಳಿ ಗುಡ್ ಬೈ

Home Remedy For Vision Defect: ಈ ಬದಲಾದ ಜೀವನಶೈಲಿಯಲ್ಲಿ ಎಲೆಕ್ಟ್ರಿಕ್ ಗ್ಯಾಜೆಟ್ ಗಳ ಬಳಕೆ ಹೆಚ್ಚಾಗಿದ್ದು ಇದರಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. 

Written by - Yashaswini V | Last Updated : Nov 23, 2023, 12:30 PM IST
  • ದೃಷ್ಟಿ ದೋಷ ಸಮಸ್ಯೆಗೆ ಹಲವು ಕಾರಣಗಳಿವೆ.
  • ಕೆಲವರಿಗೆ ಇದು ಅನುವಂಶಿಕವಾಗಿಯೂ ಬರಬಹುದು.
  • ಇನ್ನೂ ಕೆಲವರಲ್ಲಿ ನಮ್ಮ ಆಹಾರ ಪದ್ದತಿ, ಜೀವನ ಶೈಲಿಯಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.
ದೃಷ್ಟಿ ದೋಷಕ್ಕೆ ಅತ್ಯುತ್ತಮ ಮನೆಮದ್ದು, ತಿಂಗಳಲ್ಲಿ ಕನ್ನಡಕಕ್ಕೆ ಹೇಳಿ ಗುಡ್ ಬೈ title=

Home Remedy For Vision Defect: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸ್ಮಾರ್ಟ್ಫೋನ್ ಬಳಕೆ, ಟಿವಿ ವೀಕ್ಷಣೆ, ಆನ್ಲೈನ್ ತರಗತಿಗಳಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕನ್ನಡಕ ಹಾಕಿಸಬೇಕಾಗುತ್ತದೆ. ಇದು ಕೆಲವರಲ್ಲಿ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರಬಹುದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಕೇವಲ ಈ ಒಂದು ಮನೆಮದ್ದನ್ನು ಟ್ರೈ ಮಾಡಿ ನೀವು ನಿಮ್ಮ ದೃಷ್ಟಿ ದೋಷ ಸಮಸ್ಯೆಗೆ ಕೇವಲ ದಿನಗಳಲ್ಲಿ ಗುಡ್ ಬೈ ಹೇಳಬಹುದು. 

ವಾಸ್ತವವಾಗಿ, ದೃಷ್ಟಿ ದೋಷ ಸಮಸ್ಯೆಗೆ ಹಲವು ಕಾರಣಗಳಿವೆ. ಕೆಲವರಿಗೆ ಇದು ಅನುವಂಶಿಕವಾಗಿಯೂ ಬರಬಹುದು, ಇನ್ನೂ ಕೆಲವರಲ್ಲಿ ನಮ್ಮ ಆಹಾರ ಪದ್ದತಿ, ಜೀವನ ಶೈಲಿಯಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ನೀವು ಅಥವಾ ನಿಮ್ಮ ಮಕ್ಕಳು ದೃಷ್ಟಿ ದೋಷ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೇವಲ ಎರಡೇ ಎರಡು ಪದಾರ್ಥಗಳನ್ನು ಬಳಸಿ ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.  ನೀವು ನಿತ್ಯ ಈ ಮನೆಮದ್ದನ್ನು ಬಳಸಿದರೆ ಕೇವಲ 10-15 ದಿನಗಳಲ್ಲಿ ನಿಮಗೆ ಪರಿಣಾಮ ಗೋಚರಿಸುತ್ತದೆ. 

ಇದನ್ನೂ ಓದಿ- ನಿಮ್ಮ ಎಲುಬುಗಳನ್ನು ಕಬ್ಬಿಣದಂತೆ ಬಲಿಷ್ಠಗೊಳಿಸಲು ನಿತ್ಯ ಈ ಆಹಾರಗಳನ್ನು ತಿನ್ನಲೇಬೇಕು

ದೃಷ್ಟಿದೋಷ ನಿವಾರಣೆಗೆ ಮನೆಮದ್ದು: 
ಬೇಕಾಗಿರುವ ಸಾಮಾಗ್ರಿಗಳು- 

  • ಕರಿಮೆಣಸು
  • ಹಸುವಿನ ತುಪ್ಪ 

ಕರಿಮೆಣಸಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದಲ್ಲದೆ, ಕಣ್ಣಿನಲ್ಲಿ ಕಂಡು ಬರುವ ಕ್ಯಾಟರೇಟ್ ಸಮಸ್ಯೆಗೆ ಕರಿಮೆಣಸು ಅತ್ಯುತ್ತಮ ಔಷಧವಾಗಿದೆ. ಇದಲ್ಲದೆ, ತುಪ್ಪದಲ್ಲಿ ಒಮೆಗಾ 3 ಕಂಡು ಬರುತ್ತದೆ. ಇದು ಕೂಡ ಕಣ್ಣಿನ ದೃಷ್ಟಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. 

ಮನೆಮದ್ದನ್ನು ತಯಾರಿಸುವ ವಿಧಾನ: 
ಸುಮಾರು ಐದರಿಂದ ಆರು ಕಾಳುಮೆಣಸನ್ನು ತೆಗೆದುಕೊಂಡು ಅದನ್ನು ಕುಟ್ಟಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇದಕ್ಕೆ ಒಂದು ಅರ್ಧ ಚಮಚದಷ್ಟು ಹಸುವಿನ ತುಪ್ಪವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ತಿಂದು ಒಂದು ಲೋಟ ಹಾಲು ಕುಡಿಯಿರಿ. ಹಾಲು ಕುಡಿಯಲು ಸಾಧ್ಯವಾಗದಿದ್ದರೆ, ಒಂದು ಲೋಟ ಬಿಸಿ ನೀರನ್ನು ಕುಡಿಯಿರಿ. 

ಇದನ್ನೂ ಓದಿ- Raisins Benefits: ಒಣದ್ರಾಕ್ಷಿ ಸೇವನೆಯಿಂದ ನೂರಾರು ರೋಗಗಳಿಂದ ಸಿಗುತ್ತೆ ರಕ್ಷಣೆ

ಆಯುರ್ವೇದ ತಜ್ಞರ ಪ್ರಕಾರ, ಈ ಮನೆಮದ್ದನ್ನು ನಿಯಮಿತವಾಗಿ ಬಳಸುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಆದರೆ, ಇದು ರಾತ್ರೋ ರಾತ್ರಿ ಸಾಧ್ಯವಾಗುವುದಿಲ್ಲ, ಕನಿಷ್ಠ 15 ದಿನವಾದರೂ ಈ ಔಷಧಿಯನ್ನು ಬಳಸಿದರೆ ನಿರೀಕ್ಷಿತ ಫಲಿತಾಂಶ ಪಡೆಯಬಹುದು ಎಂದು ಹೇಳಲಾಗುತ್ತದೆ. ಆದರೆ, ನಿಮಗೇನಾದರೂ ಆರೋಗ್ಯ ಸಮಸ್ಯೆ ಇದ್ದರೆ ಈ ಪರಿಹಾರ ಕೈಗೊಳ್ಳುವ ಮೊದಲು ತಪ್ಪದೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News