ಕಿಡ್ನಿ ಸ್ಟೋನ್ ಇದ್ದರೆ ಈ ಜ್ಯೂಸ್ ಕುಡಿಯಿರಿ, ಒಂದೇ ವಾರದಲ್ಲಿ ಕಲ್ಲು ಹೊರ ಬರುತ್ತದೆ !

Kidney Health :ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇರುವವರಿಗೆ ಕೆಲವು ಜ್ಯೂಸ್ ಗಳು ಬಹಳ ಪ್ರಯೋಜನಕಾರಿಯಾಗಿರುತ್ತದೆ. ಈ ಮೂರು ಆರೋಗ್ಯಕರ ಜ್ಯೂಸ್‌ಗಳನ್ನು ಕುಡಿಯಲು ಪ್ರಾರಂಭಿಸಿದರೆ,ಕೆಲವೇ ದಿನಗಳಲ್ಲಿ ಕಿದ್ನಿಯಲ್ಲಿರುವ ಕಲ್ಲುಗಳು ಒಡೆದು ಮೂತ್ರದ ಮೂಲಕ ಹೊರ ಬರುತ್ತವೆ. 

Written by - Ranjitha R K | Last Updated : Mar 27, 2024, 01:34 PM IST
  • ಕಿಡ್ನಿ ಸಂಬಂಧಿತ ಸಮಸ್ಯೆಗಳಲ್ಲಿ ವ್ಯಕ್ತಿಯು ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ
  • ಸ್ಟೋನ್ ಸಮಸ್ಯೆಯಿದ್ದರೆ ಅದು ನೀಡುವ ನೋವು ಸಹಿಸಲು ಸಾಧ್ಯವೇ ಇಲ್ಲ.
  • ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇರುವವರಿಗೆ ಕೆಲವು ಜ್ಯೂಸ್ ಗಳು ಪ್ರಯೋಜನಕಾರಿ
ಕಿಡ್ನಿ ಸ್ಟೋನ್ ಇದ್ದರೆ ಈ ಜ್ಯೂಸ್ ಕುಡಿಯಿರಿ, ಒಂದೇ ವಾರದಲ್ಲಿ ಕಲ್ಲು ಹೊರ ಬರುತ್ತದೆ ! title=

Juices for Kidney Stone :ಕಿಡ್ನಿ ಸಂಬಂಧಿತ ಸಮಸ್ಯೆಗಳಲ್ಲಿ ವ್ಯಕ್ತಿಯು ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಅದರಲ್ಲಿಯೂ ಸ್ಟೋನ್ ಸಮಸ್ಯೆಯಿದ್ದರೆ ಅದು ನೀಡುವ ನೋವು ಸಹಿಸಲು ಸಾಧ್ಯವೇ ಇಲ್ಲ. ಅಲ್ಲದೆ ಕಿಡ್ನಿ  ಸಮಸ್ಯೆ ಇದ್ದಾಗ ನೋವು ಯಾವ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳುವುದೇ ಸಾಧ್ಯವಾಗುವುದಿಲ್ಲ. ಒಮ್ಮೆ ನೋವು ಕಾಣಿಸಿಕೊಂಡರೆ ಅದು ನರಕವೇ ಸರಿ. ಕಿಡ್ನಿ ಸ್ಟೋನ್ ನಿಂದ ಅಥವಾ ಇದರಿಂದ ಉಂಟಾಗುವ ನೋವಿನಿಂದ ಬಳಲುತ್ತಿರುವ ಜನರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.ಯಾವ ಆಹಾರ ಆ ನೋವನ್ನು ಟ್ರಿಗರ್ ಮಾಡುವುದಿಲ್ಲ ಎನ್ನುವುದನ್ನು ಅರಿತುಕೊಂಡು ಆಹಾರ ಸೇವನೆ ಮಾಡಬೇಕಾಗುತ್ತದೆ. 

ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇರುವವರಿಗೆ ಕೆಲವು ಜ್ಯೂಸ್ ಗಳು ಬಹಳ ಪ್ರಯೋಜನಕಾರಿಯಾಗಿರುತ್ತದೆ. ಈ ಮೂರು ಆರೋಗ್ಯಕರ ಜ್ಯೂಸ್‌ಗಳನ್ನು ಕುಡಿಯಲು ಪ್ರಾರಂಭಿಸಿದರೆ,ಕೆಲವೇ ದಿನಗಳಲ್ಲಿ ಕಿಡ್ನಿಯಲ್ಲಿರುವ ಕಲ್ಲುಗಳು ಒಡೆದು ಮೂತ್ರದ ಮೂಲಕ ಹೊರ ಬರುತ್ತವೆ. ಕಿಡ್ನಿ ಸ್ಟೋನ್ ಇರುವವರು ಈ ಮೂರು ಜ್ಯೂಸ್ ಗಳನ್ನು ಆಹಾರದಲ್ಲಿ ಸೇರಿಸಿಕೊಂಡರೆ ನೋವು ಶಮನವಾಗುವುದಲ್ಲದೆ ಕಲ್ಲುಗಳು ಕೂಡಾ ಒಡೆದು ಹೊರಬರುತ್ತವೆ.

ಇದನ್ನೂ ಓದಿ : RO Water: ಆರೋಗ್ಯಕ್ಕೆ ಆರ್‌ಓ ವಾಟರ್ ಬಳಕೆ ಎಷ್ಟು ಉತ್ತಮ? ತಜ್ಞರು ಹೇಳಿದ್ದೇನು?

ಟೊಮೆಟೊ ಜ್ಯೂಸ್ : 
ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಟೊಮೆಟೊ ಜ್ಯೂಸ್ ಕುಡಿಯಬೇಕು. ಈ ಜ್ಯೂಸ್ ಮಾಡಲು ಎರಡು ಟೊಮೆಟೊಗಳನ್ನು ತೆಗದುಕೊಂಡು  ತೊಳೆದು ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಉಪ್ಪು ಮತ್ತು ಮೆಣಸು ಸೇರಿಸಿ ಸೇವಿಸಿ.

ನಿಂಬೆ ರಸ : 
ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದ್ದು ಇದು ಕಲ್ಲುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಒಂದು ಪಾತ್ರೆಯಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ನಿಂಬೆಹಣ್ಣನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಬೇಕಾದರೆ ಮೊಸರು ಮತ್ತು ನಿಂಬೆಯ ರುಚಿ ಹೆಚ್ಚಿಸಲು ಉಪ್ಪು ಕೂಡಾ ಸೇರಿಸಬಹುದು. ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿ ಸೇವಿಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ : ಚಕ್ಕೆ ಮತ್ತು ಜೇನುತುಪ್ಪ ಬೆರೆಸಿದ ನೀರು ಸಂಜೀವಿನಿ ಇದ್ದಂತೆ ! ಈ ಕಾಯಿಲೆಗಳಿಂದ ಶಾಶ್ವತವಾಗಿ ನೀಡುತ್ತದೆ ಮುಕ್ತಿ !

ತುಳಸಿ ರಸ : 
ತುಳಸಿ ರಸವು ಕಲ್ಲುಗಳ ಸಮಸ್ಯೆಯನ್ನು ಹೋಗಲಾಡಿಸಲು ಹೆಚ್ಚು  ಉಪಯುಕ್ತವಾಗಿದೆ. ತುಳಸಿ ಎಲೆಗಳನ್ನು ತೆಗೆದುಕೊಂಡು ಸರಿಯಾಗಿ ಸ್ವಚ್ಛಗೊಳಿಸಿ ಅದರ ರಸ ತೆಗೆಯಿರಿ.ಈ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಬೆಳಗ್ಗೆ ಮತ್ತು ಸಂಜೆ ಕುಡಿಯಿರಿ. ನಿಯಮಿತವಾಗಿ ತುಳಸಿ ರಸವನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ.

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News