ಪ್ರಪಾತಕ್ಕೆ ಬಸ್ ಉರುಳಿ 11 ಮಂದಿ ದುರ್ಮರಣ; ಮೂವರಿಗೆ ಗಾಯ

ಚಂದ್ರಕೋಟ್​-ರಾಜ್ಗರ್​ ರಸ್ತೆ ಮಾರ್ಗದವಾಗಿ 15 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ SUV ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ 500 ಅಡಿ ಆಳದ ಪ್ರಪಾತಕ್ಕೆ ಬಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ. 

Last Updated : Mar 16, 2019, 04:02 PM IST
ಪ್ರಪಾತಕ್ಕೆ ಬಸ್ ಉರುಳಿ 11 ಮಂದಿ ದುರ್ಮರಣ; ಮೂವರಿಗೆ ಗಾಯ title=
Photo Courtesy: ANI

ರಾಮಬನ್: ಜಮ್ಮು-ಕಾಶ್ಮೀರದ ರಾಮಬನ ಜಿಲ್ಲೆಯ ಕುಂದಾ ಮಾಡ್ ಬಳಿ ಬಸ್ಸೊಂದು ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ 11 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ಮೂವರು ಗಂಭಿರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ. 

ಚಂದ್ರಕೋಟ್​-ರಾಜ್ಗರ್​ ರಸ್ತೆ ಮಾರ್ಗದವಾಗಿ 15 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ SUV ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ 500 ಅಡಿ ಆಳದ ಪ್ರಪಾತಕ್ಕೆ ಬಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಮತ್ತು ಪೊಲೀಸರು ಎಅಕ್ಷನಾ ಕಾರ್ಯದಲ್ಲಿ ನಿರತರಾದರು ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನ್ನಪ್ಪಿದ್ದು, ಗಂಭಿರವಾಗಿ ಗಾಯಗೊಂದಿದ್ದ ಐವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಡ್ರೈವರ್ ಸೇರಿದಂತೆ ಗಂಭಿರವಾಗಿ ಗಾಯಗೊಂಡಿದ್ದು ಮೂವರನ್ನು ಜಮ್ಮು ಆಸ್ಪತ್ರೆಗೆ ದಾಖಲಿಸಲಾಗಿದೆ.

Trending News