ಉದ್ಧವ್ ಠಾಕ್ರೆ ಅಯೋಧ್ಯೆ ಪ್ರವಾಸ ಮುಂದೂಡಿಕೆ

ನವೆಂಬರ್ 24 ರಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಅಯೋಧ್ಯೆ ಪ್ರವಾಸವನ್ನು ಮುಂದೂಡಲಾಗಿದೆ. ರಾಮ್‌ಜನ್ಮಭೂಮಿ ಸಂಕೀರ್ಣದ ಭದ್ರತೆಯಿಂದಾಗಿ ಯಾವುದೇ ರಾಜಕೀಯ ಪಕ್ಷಗಳ ಮುಖಂಡರಿಗೆ ಅಲ್ಲಿಗೆ ಹೋಗಲು ಭದ್ರತಾ ಸಂಸ್ಥೆಗಳು ಅವಕಾಶ ನೀಡಿಲ್ಲ.

Last Updated : Nov 18, 2019, 01:43 PM IST
ಉದ್ಧವ್ ಠಾಕ್ರೆ ಅಯೋಧ್ಯೆ ಪ್ರವಾಸ ಮುಂದೂಡಿಕೆ title=
File Image

ನವದೆಹಲಿ / ಮುಂಬೈ: ಶಿವಸೇನೆ(Shiv Sena) ಮುಖ್ಯಸ್ಥ ಉದ್ಧವ್ ಠಾಕ್ರೆ(uddhav thackeray) ಅವರ ನವೆಂಬರ್ 24 ರ ಅಯೋಧ್ಯ(Ayodhya) ಪ್ರವಾಸವನ್ನು ಮುಂದೂಡಲಾಗಿದೆ. ರಾಮ್ ಜನಮಭೂಮಿ(Ram Janmabhoomi) ಕ್ಯಾಂಪಸ್‌ನ ಭದ್ರತೆ ಸೂಕ್ಷ್ಮತೆಯಿಂದಾಗಿ ಯಾವುದೇ ರಾಜಕೀಯ ಪಕ್ಷಗಳ ನಾಯಕರು ಅಯೋಧ್ಯೆಗೆ ಭೇಟಿ ನೀಡಲು ಭದ್ರತಾ ಸಂಸ್ಥೆಗಳು ಅವಕಾಶ ನೀಡಿಲ್ಲ.

ಇದಲ್ಲದೆ ಮಹಾರಾಷ್ಟ್ರ(Maharashtra)ದಲ್ಲಿ ಸರ್ಕಾರ ರಚನೆಯ ಬಗ್ಗೆ ಪರಿಸ್ಥಿತಿ ಸ್ಪಷ್ಟವಾಗಿಲ್ಲದ ಕಾರಣ ನವೆಂಬರ್ 24 ರಂದು ಉದ್ಧವ್ ಠಾಕ್ರೆ ಅಯೋಧ್ಯೆ ಪ್ರವಾಸ ಮುಂದೂಡಲಾಗಿದೆ ಎಂದು ಘೋಷಿಸಲಾಗಿದೆ.

ಮಹಾರಾಷ್ಟ್ರ(Maharashtra) ಸರ್ಕಾರದ ರಚನೆ ಹಿನ್ನೆಲೆಯಲ್ಲಿ ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸಭೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸಭೆಯ ನಂತರ ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಸರ್ಕಾರ ರಚನೆಯಾಗುವ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.

ಸಂಸತ್ತಿನಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಶಿವಸೇನೆ:
ಏತನ್ಮಧ್ಯೆ, ಒಂದು ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಶಿವಸೇನೆ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳೊಂದಿಗೆ ಕುಳಿತುಕೊಳ್ಳಲಿದೆ. ಸಂಸತ್ತಿನ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದೆ. ಪಕ್ಷದ ಈ ನಡೆ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಪ್ರತಿಪಕ್ಷಗಳಿಗೆ ಉತ್ತೇಜನ ನೀಡುತ್ತದೆ. ಶಿವಸೇನೆ ಲೋಕಸಭೆಯಲ್ಲಿ 18 ಸಂಸದರು ಮತ್ತು ರಾಜ್ಯಸಭೆಯಲ್ಲಿ ಮೂವರು ಸಂಸದರನ್ನು ಹೊಂದಿದೆ.

Trending News