ಹಣದ ದುರಾಸೆಗಾಗಿ ತಂಗಿಯನ್ನೇ ಮದುವೆಯಾದ ಅಣ್ಣ.. ಸಿಕ್ಕಿಬಿದ್ದ ಮೇಲೆ ಆಗಿದ್ದೇನು?

Brother Marries Sister: ಉತ್ತರ ಪ್ರದೇಶದ ಫಿರೋಜಾಬಾದ್‌ನ ತುಂಡ್ಲಾದಲ್ಲಿ ಡಿಸೆಂಬರ್ 11 ರಂದು ಮುಖ್ಯಮಂತ್ರಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಈ ಘಟನೆ ಜರುಗಿದೆ. 

Edited by - Zee Kannada News Desk | Last Updated : Dec 15, 2021, 06:36 PM IST
  • ತುಂಡ್ಲಾ ಬ್ಲಾಕ್ ಡೆವಲಪ್‌ಮೆಂಟ್ ಕಚೇರಿ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
  • ಹಣದ ದುರಾಸೆಗೆ ಯುವಕನೊಬ್ಬ ತನ್ನ ಸ್ವಂತ ತಂಗಿಯನ್ನೇ ಮದುವೆಯಾದ ಅಚ್ಚರಿಯ ಘಟನೆ ನಡೆದಿದೆ.
ಹಣದ ದುರಾಸೆಗಾಗಿ ತಂಗಿಯನ್ನೇ ಮದುವೆಯಾದ ಅಣ್ಣ.. ಸಿಕ್ಕಿಬಿದ್ದ ಮೇಲೆ ಆಗಿದ್ದೇನು? title=
ಸಾಮೂಹಿಕ ವಿವಾಹ

ಫಿರೋಜಾಬಾದ್: ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿರುವ ತುಂಡ್ಲಾ ಬ್ಲಾಕ್ ಡೆವಲಪ್‌ಮೆಂಟ್ ಕಚೇರಿ ಆವರಣದಲ್ಲಿ ಶನಿವಾರ ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಣದ ದುರಾಸೆಗೆ ಯುವಕನೊಬ್ಬ ತನ್ನ ಸ್ವಂತ ತಂಗಿಯನ್ನೇ (Brother Marries Sister) ಮದುವೆಯಾದ ಅಚ್ಚರಿಯ ಘಟನೆ ನಡೆದಿದೆ.

ಸಮಾರಂಭದಲ್ಲಿ ಕೆಲ ಜೋಡಿಗಳ ವೀಡಿಯೋ ಹಾಗೂ ಫೋಟೋಗಳು ಆ ಭಾಗದ ಜನರಿಗೆ ಹಾಗೂ ಗ್ರಾಮದ ಮುಖಂಡರಿಗೆ ತಲುಪಿದಾಗ ಸಮಾರಂಭದಲ್ಲಿ ನಡೆದ ವಂಚನೆ ಬಯಲಾಗಿದೆ. ತನಿಖೆ ವೇಳೆ ಈ ವಿಷಯ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ನಡೆಯುತ್ತಿದೆ.

51 ಜೋಡಿಗಳ ವಿವಾಹ:

ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕಳೆದ ಶನಿವಾರ ಫಿರೋಜಾಬಾದ್‌ನ ತುಂಡ್ಲಾ ಬ್ಲಾಕ್ ಅಭಿವೃದ್ಧಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ 51 ಜೋಡಿಗಳು ವಿವಾಹವಾದರು. ಸಮಾರಂಭದಲ್ಲಿ ಎಲ್ಲಾ ದಂಪತಿಗಳಿಗೆ ಗೃಹೋಪಯೋಗಿ ವಸ್ತುಗಳು ಮತ್ತು ಬಟ್ಟೆ ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡಲಾಯಿತು. 

ತನ್ನ ಸಹೋದರಿಯನ್ನೇ ಮದುವೆಯಾದ ಸಹೋದರ:

ಸಮಾರಂಭದಲ್ಲಿ ಕೆಲ ಜೋಡಿಗಳ ವೀಡಿಯೋ ಹಾಗೂ ಫೋಟೋಗಳು ಆ ಭಾಗದ ಜನರಿಗೆ ಹಾಗೂ ಗ್ರಾಮದ ಮುಖಂಡರಿಗೆ ತಲುಪಿದಾಗ ಸಮಾರಂಭದಲ್ಲಿ ನಾಲ್ಕು ಫೋರ್ಜರಿ ಪ್ರಕರಣಗಳು ವರದಿಯಾಗಿವೆ. ಈ ಒಂದು ಪ್ರಕರಣದಲ್ಲಿ, ಸಹೋದರನೇ ಸಹೋದರಿಯನ್ನು ಮದುವೆಯಾಗಿದ್ದಾನೆ. 

ಈ ಪ್ರಕರಣದ ತನಿಖೆಯ ನಂತರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಸಹೋದರನ ವಿರುದ್ಧ ದೂರು ನೀಡಿದ್ದಾರೆ.

ಗ್ರಾ.ಪಂ.ಕಾರ್ಯದರ್ಶಿ ಮರಸೇನ ಕುಶಾಲಪಾಲ್, ಗ್ರಾ.ಪಂ.ಕಾರ್ಯದರ್ಶಿ ಅನುರಾಗ್ ಸಿಂಗ್, ಸಹಕಾರಿ ಸುಧೀರ್ ಕುಮಾರ್, ಎಡಿಒ ಸಮಾಜ ಕಲ್ಯಾಣ ಇಲಾಖೆ ಎಡಿಒ ಚಂದ್ರಭಾನ್ ಸಿಂಗ್ ಅವರಿಂದ ವಿವಾಹ ಸಂಬಂಧ ಶೋಧ ನಡೆಸಿ ಪರಿಶೀಲಿಸಲಾಗಿದೆ ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ ನರೇಶ್ ಕುಮಾರ್ ತಿಳಿಸಿದ್ದಾರೆ. ತೃಪ್ತಿಕರ ವಿವರಣೆ ದೊರೆಯದಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನೂ ಓದಿ: ನೋಟಿನ ಮೇಲೆ ಈ ಗೆರೆಗಳನ್ನು ಏಕೆ ಮುದ್ರಿಸಲಾಗುತ್ತದೆ? ಇದರ ಅರ್ಥವೇನು, ಅದು ಏಕೆ ಮುಖ್ಯ?

Trending News