ರೈಲ್ವೆ ಹಳಿ ಮೇಲೆ ಸಿಮೆಂಟ್‌ ಬ್ರೀಕ್ಸ್‌..! ಒಡಿಶಾ ಮಾದರಿಯ ರೈಲು ಅಪಘಾತಕ್ಕೆ ಭಾರೀ ಸಂಚು..?

ಒಡಿಶಾ ರೈಲು ಅಪಘಾತ ದುರಂತವನ್ನು ಮರೆಯುವ ಮುನ್ನವೇ ದೇಶದಲ್ಲಿ ಮತ್ತೊಂದು ಮಾರಣಾಂತಿಕ ರೈಲು ಅಪಘಾತಕ್ಕೆ ಸಂಚು ರೂಪಿಸಲಾಗಿದೆ. ಕೇರಳದ ಕಾಸರಗಢದಲ್ಲಿ ಕೊಯಮತ್ತೂರು - ಮಂಗಳಾಪುರಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಹಳಿತಪ್ಪಿಸಲು ಅಪರಿಚಿತ ವ್ಯಕ್ತಿಗಳು ಸಂಚು ರೂಪಿಸಿದ್ದಾರೆ ಎಂದು ವರದಿಯಾಗಿದೆ.

Written by - Krishna N K | Last Updated : Aug 18, 2023, 12:22 PM IST
  • ಕೊಯಮತ್ತೂರು - ಮಂಗಳಾಪುರಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲನ್ನು ಹಳಿತಪ್ಪಿಸಲು ಸಂಚು.
  • ರೈಲ್ವೇ ಪೊಲೀಸರಿಂದಲೂ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.
  • ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ರೈಲ್ವೆ ಹಳಿ ಮೇಲೆ ಸಿಮೆಂಟ್‌ ಬ್ರೀಕ್ಸ್‌..! ಒಡಿಶಾ ಮಾದರಿಯ ರೈಲು ಅಪಘಾತಕ್ಕೆ ಭಾರೀ ಸಂಚು..? title=

ಕೇರಳ : ಕಾಸರಗೋಡುದಲ್ಲಿ ಕೊಯಮತ್ತೂರು - ಮಂಗಳಾಪುರಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲನ್ನು ಹಳಿತಪ್ಪಿಸಲು ಅಪರಿಚಿತ ವ್ಯಕ್ತಿಗಳು ಸಂಚು ರೂಪಿಸಿದ್ದಾರೆ ಎಂದು ವರದಿಯಾಗಿದೆ. ಕೊಯಮತ್ತೂರು-ಮಂಗಳಾಪುರಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್ ಕಾಸರಗಡ್-ಕಾಞಂಗಾಡ್ ರೈಲು ನಿಲ್ದಾಣಗಳ ನಡುವಿನ ರೈಲು ಹಳಿ ಮೇಲೆ ಸಿಮೆಂಟ್ ಬ್ಲಾಕ್‌ಗಳು ಮತ್ತು ಕಲ್ಲುಗಳನ್ನು ಹಾಕಿರುವುದನ್ನು ಪತ್ತೆ ಮಾಡಿದರು. ರೈಲು ಅಪಘಾತಕ್ಕೀಡಾಗುವ ದುರುದ್ದೇಶದಿಂದ ರೈಲ್ವೆ ಹಳಿಗಳ ಮೇಲೆ ಸಿಮೆಂಟ್ ಬ್ಲಾಕ್‌ಗಳು ಮತ್ತು ಕಲ್ಲುಗಳನ್ನು ಎಸೆಯಲಾಗಿದೆ ಎಂದು ಲೋಕೋ ಪೈಲಟ್ ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಹೌದು.. ಲೋಕೋ ಪೈಲಟ್ ನೀಡಿದ ದೂರಿನ ಮೇರೆಗೆ ಫೀಲ್ಡಿಗಿಳಿದ ಸಂಬಂಧಪಟ್ಟ ರೈಲ್ವೇ ಅಧಿಕಾರಿಗಳು ಹಾಗೂ ರೈಲ್ವೇ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ರೈಲ್ವೇ ಪೊಲೀಸರಿಂದಲೂ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಕೇರಳ ಸುದ್ದಿ ವಾಹಿನಿ ಮಾತೃಭೂಮಿ ತನ್ನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಹಿಮಾಚಲದಲ್ಲಿ ಮಳೆ, ಪ್ರವಾಹ, ಭೂಕುಸಿತದಿಂದ ಭಾರೀ ವಿನಾಶ : 74 ಮಂದಿ ಸಾವು

ಆಗಂತುಕರು ಸಂಚು ರೂಪಿಸಿ ರೈಲು ಅಪಘಾತ ಮಾಡಲು ಯತ್ನಿಸಿದರಾದರೂ ಅದೃಷ್ಟವಶಾತ್ ಕೊಯಮತ್ತೂರು - ಮಂಗಳಾಪುರಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಗ್ಯಾಂಡ್ ದಾಟಿ ಮುಂದೆ ಸಾಗಿದೆ. ಹಳಿಗಳ ಮೇಲೆ ಎಸೆದಿರುವ ಸಿಮೆಂಟ್ ಬ್ಲಾಕ್‌ಗಳು ಮತ್ತು ಕಲ್ಲುಗಳ ಮೇಲೆ ರೈಲು ಮುಂದೆ ಸಾಗಿದೆ ಎಂದು ತೋರುತ್ತದೆ. ಈ ಸಂವೇದನಾಶೀಲ ಘಟನೆಯು ರೈಲು ಅಪಘಾತಗಳ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕುವುದಲ್ಲದೆ, ಹೀಗಾದರೆ ರೈಲು ಪ್ರಯಾಣವು ಎಷ್ಟು ಸುರಕ್ಷಿತವಾಗಿರುತ್ತದೆ ಎಂಬ ಸವಾಲುಗಳನ್ನು ಸಹ ಹುಟ್ಟುಹಾಕಿದೆ. 

ಶುಕ್ರವಾರ ನಡೆದ ಈ ಘಟನೆಯ ಕುರಿತು ರೈಲ್ವೆ ಇಲಾಖೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಅಂತ ಕಾಯ್ದು ನೋಡಬೇಕಿದೆ. ಅಲ್ಲದೆ, ಈ ದೊಡ್ಡ ಷಡ್ಯಂತ್ರದ ಹಿಂದೆ ಇರುವವರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಇಂತಹ ದೊಡ್ಡ ಘಟನೆ ನಡೆದರೂ ಸಹ ರೈಲ್ವೆ ಇಲಾಖೆ ಸ್ಪಂದಿಸಿಲ್ಲ ಎಂಬುದು ಗಮನಾರ್ಹ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News