ಕರ್ನಾಟಕ ಸೇರಿ 10 ರಾಜ್ಯಗಳ 54 ಕ್ಷೇತ್ರಗಳಿಗೆ ಉಪಚುನಾವಣೆ : ಮಧ್ಯಪ್ರದೇಶದ ಸಿಎಂ ಪಾಲಿಗೆ ನಿರ್ಣಾಯಕ

ಮಧ್ಯಪ್ರದೇಶದ 28 ಕ್ಷೇತ್ರಗಳಿಗೆ, ಗುಜರಾತ್ ನ 8, ಉತ್ತರಪ್ರದೇಶದ 7, ಕರ್ನಾಟಕ, ಒಡಿಶಾ, ನಾಗಾಲ್ಯಾಂಡ್, ಜಾರ್ಖಾಂಡ್ ನಲ್ಲಿ ತಲಾ 2 ಕ್ಷೇತ್ರಗಳಿಗೆ, ಛತ್ತೀಸ್ ಗಡ, ತೆಲಂಗಾಣ ಮತ್ತು ಹರಿಯಾಣದ ತಲಾ ಒಂದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. 

Last Updated : Nov 3, 2020, 12:45 PM IST
  • ಕರ್ನಾಟಕ ಸೇರಿದಂತೆ ದೇಶದ 10 ರಾಜ್ಯಗಳಲ್ಲಿ 54 ಕ್ಷೇತ್ರಗಳಿಗೆ ಇಂದು ಉಪಚುನಾವಣೆ
  • ಮಧ್ಯಪ್ರದೇಶದ 28 ಕ್ಷೇತ್ರಗಳಿಗೆ, ಗುಜರಾತ್ ನ 8, ಉತ್ತರಪ್ರದೇಶದ 7, ಕರ್ನಾಟಕ, ಒಡಿಶಾ, ನಾಗಾಲ್ಯಾಂಡ್, ಜಾರ್ಖಾಂಡ್ ನಲ್ಲಿ ತಲಾ 2 ಕ್ಷೇತ್ರಗಳಿಗೆ, ಛತ್ತೀಸ್ ಗಡ, ತೆಲಂಗಾಣ ಮತ್ತು ಹರಿಯಾಣದ ತಲಾ ಒಂದು ಕ್ಷೇತ್ರಗಳಿಗೆ ಉಪಚುನಾವಣೆ
ಕರ್ನಾಟಕ  ಸೇರಿ 10 ರಾಜ್ಯಗಳ 54 ಕ್ಷೇತ್ರಗಳಿಗೆ ಉಪಚುನಾವಣೆ : ಮಧ್ಯಪ್ರದೇಶದ ಸಿಎಂ ಪಾಲಿಗೆ ನಿರ್ಣಾಯಕ  title=
Image courtesy: ANI

ಕರ್ನಾಟಕ ಸೇರಿದಂತೆ ದೇಶದ 10 ರಾಜ್ಯಗಳಲ್ಲಿ 54 ಕ್ಷೇತ್ರಗಳಿಗೆ ಇಂದು ಉಪಚುನಾವಣೆ (By polls) ನಡೆಯುತ್ತಿದೆ.  ಎಲ್ಲಾ ಕ್ಷೇತ್ರಗಳಲ್ಲೂ ಬೆಳಿಗ್ಗೆ 7 ಗಂಟೆಗೆ ಮತದಾನ (polling) ಆರಂಭವಾಗಿದೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ. 

ಮಧ್ಯಪ್ರದೇಶದ 28 ಕ್ಷೇತ್ರಗಳಿಗೆ, ಗುಜರಾತ್ ನ 8, ಉತ್ತರಪ್ರದೇಶದ 7, ಕರ್ನಾಟಕ (Karnataka) , ಒಡಿಶಾ, ನಾಗಾಲ್ಯಾಂಡ್, ಜಾರ್ಖಾಂಡ್ ನಲ್ಲಿ ತಲಾ 2 ಕ್ಷೇತ್ರಗಳಿಗೆ, ಛತ್ತೀಸ್ ಗಡ, ತೆಲಂಗಾಣ ಮತ್ತು ಹರಿಯಾಣದ ತಲಾ ಒಂದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. 

ಬಿಹಾರ ವಿಧಾನಸಭಾ ಚುನಾವಣೆ: ಖಗೇರಿಯಾದಲ್ಲಿ ಮತ ಚಲಾಯಿಸಿದ LJP ಅಧ್ಯಕ್ಷ ಚಿರಾಗ್ ಪಾಸ್ವಾನ್

ಈ ಪೈಕಿ ನಾಲ್ಕು ರಾಜ್ಯಗಳಲ್ಲಿ ಕರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ, ಛತ್ತೀಸ್ ಗಡ, ನಾಗಾಲ್ಯಾಂಡ್, ಜಾರ್ಖಾಂಡ್ ನಲ್ಲಿ ಕರೋನಾ ಸೋಂಕಿತರಿಗೆ ಸಂಜೆ 5 ಗಂಟೆಯಿಂದ 6 ಗಂಟೆವರೆಗೆ ಮತದಾನ ನಡೆಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ವಿಶೇಷ ವ್ಯವಸ್ಥೆಗಳನ್ನ  ಏರ್ಪಡಿಸಲಾಗಿದೆ. 

ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.  ಜ್ಯೋತಿರಾಧಿತ್ಯ ಬೆಂಬಲಿತ ಕಾಂಗ್ರೆಸ್ ನ 22 ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಉಪಚುನಾವಣೆ ಇದಾಗಿದೆ. ಪಕ್ಷಾಂತರಿ ಶಾಸಕರಿಗೆ ಇದು ಅಗ್ನಿ ಪರೀಕ್ಷೆ. ಮಧ್ಯಪ್ರದೇಶ  ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚಹಾಣ್ ಗೂ (Shivraj sing Chauhan) ಈ ಉಪಚುನಾವಣೆ ಮಹತ್ವದ್ದಾಗಿದೆ. ಅಧಿಕಾರದಲ್ಲಿ ಮುಂದುವರೆಯಬೇಕಾದರೆ ಕನಿಷ್ಟ 9 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲೇ ಬೇಕಾಗಿದೆ. 

ಶಿರಾ, ಆರ್ ಆರ್ ನಗರ ಉಪಚುನಾವಣೆ –ಎರಡೂ ಕ್ಷೇತ್ರಗಳಲ್ಲೂ ಬಿರುಸುನ ಮತದಾನ

ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಪ್ರಧಾನಿ ಮನವಿ: 
ಈ ಮಧ್ಯೆ ಉಪಚುನಾವಣೆಯ ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra modi) ಜನತೆಯಲ್ಲಿ ಮನವಿ ಮಾಡಿದ್ದಾರೆ. ಹೆಚ್ಚು ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗಿಯಾಗಿ ಪ್ರಜಾಪ್ರಭುತ್ವವನ್ನು ಬಲಗೊಳಿಸುವಂತೆ ಮತದಾರರನ್ನು ಮೋದಿ ಕೋರಿದ್ದಾರೆ.

Trending News