ಗಾಂಧೀಜಿ, ರಾಖಿ ಸಾವಂತ್ ಬಗ್ಗೆ ಉತ್ತರ ಪ್ರದೇಶದ ಸ್ಪೀಕರ್ ಹೇಳಿದ್ದೇನು ಗೊತ್ತೇ?

ಭಾನುವಾರ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಉತ್ತರ ಪ್ರದೇಶ ವಿಧಾನಸಭಾ ಸ್ಪೀಕರ್ ಹೃದಯ ನಾರಾಯಣ್ ದೀಕ್ಷಿತ್ ಅವರು ಜನರು ಎಷ್ಟು ಕಡಿಮೆ ಬಟ್ಟೆ ಧರಿಸುತ್ತಾರೆ ಎಂಬುದನ್ನು ಆಧರಿಸಿ ಗೌರವಿಸಬಹುದಾದರೆ ನಟಿ ರಾಖಿ ಸಾವಂತ್ ಅವರು ಮಹಾತ್ಮ ಗಾಂಧಿಗಿಂತ ಹೆಚ್ಚು ಪ್ರಸಿದ್ಧ ವ್ಯಕ್ತಿತ್ವ ಎಂದು ಹೇಳಿದರು.

Written by - Zee Kannada News Desk | Last Updated : Sep 20, 2021, 04:34 PM IST
  • ಭಾನುವಾರ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಉತ್ತರ ಪ್ರದೇಶ ವಿಧಾನಸಭಾ ಸ್ಪೀಕರ್ ಹೃದಯ ನಾರಾಯಣ್ ದೀಕ್ಷಿತ್ ಅವರು ಜನರು ಎಷ್ಟು ಕಡಿಮೆ ಬಟ್ಟೆ ಧರಿಸುತ್ತಾರೆ ಎಂಬುದನ್ನು ಆಧರಿಸಿ ಗೌರವಿಸಬಹುದಾದರೆ ನಟಿ ರಾಖಿ ಸಾವಂತ್ ಅವರು ಮಹಾತ್ಮ ಗಾಂಧಿಗಿಂತ ಹೆಚ್ಚು ಪ್ರಸಿದ್ಧ ವ್ಯಕ್ತಿತ್ವ ಎಂದು ಹೇಳಿದರು.
  • ಈಗ ಈ ಹೇಳಿಕೆ ವಿವಾದಾತ್ಮಕವಾದ ಹಿನ್ನಲೆಯಲ್ಲಿ ಇದಕ್ಕೆ ಸ್ಪಷ್ಟೀಕರಣ ನೀಡಿರುವ ದೀಕ್ಷಿತ್ ಅವರು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದರು
ಗಾಂಧೀಜಿ, ರಾಖಿ ಸಾವಂತ್ ಬಗ್ಗೆ ಉತ್ತರ ಪ್ರದೇಶದ ಸ್ಪೀಕರ್ ಹೇಳಿದ್ದೇನು ಗೊತ್ತೇ? title=
Photo Courtesy: Twitter

ನವದೆಹಲಿ: ಭಾನುವಾರ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಉತ್ತರ ಪ್ರದೇಶ ವಿಧಾನಸಭಾ ಸ್ಪೀಕರ್ ಹೃದಯ ನಾರಾಯಣ್ ದೀಕ್ಷಿತ್ ಅವರು ಜನರು ಎಷ್ಟು ಕಡಿಮೆ ಬಟ್ಟೆ ಧರಿಸುತ್ತಾರೆ ಎಂಬುದನ್ನು ಆಧರಿಸಿ ಗೌರವಿಸಬಹುದಾದರೆ ನಟಿ ರಾಖಿ ಸಾವಂತ್ ಅವರು ಮಹಾತ್ಮ ಗಾಂಧಿಗಿಂತ ಹೆಚ್ಚು ಪ್ರಸಿದ್ಧ ವ್ಯಕ್ತಿತ್ವ ಎಂದು ಹೇಳಿದರು.

ಉನ್ನಾವೊದ ಬಂಗರ್ಮೌ ಪ್ರದೇಶದಲ್ಲಿ ಶನಿವಾರ ನಡೆದ ಬಿಜೆಪಿಯ ಪ್ರಬುದ್ಧ ಸಮ್ಮೇಳನದಲ್ಲಿ ಸ್ಪೀಕರ್ ಈ ವಿವಾದಾತ್ಮಕ ಹೇಳಿಕೆ ನೀಡಿದರು.ಆಡಳಿತ ಪಕ್ಷವು ಪ್ರಸ್ತುತ ರಾಜ್ಯದಾದ್ಯಂತ ಈ ಸಮ್ಮೇಳನಗಳನ್ನು ಆಯೋಜಿಸುತ್ತಿದೆ ಮತ್ತು ದೀಕ್ಷಿತ್ ಜಿಲ್ಲೆಯಿಂದ ಬಂದಿದ್ದರಿಂದ ಉನ್ನಾವೋದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಇದನ್ನೂ ಓದಿ: 'ನವಜೋತ್ ಸಿಂಗ್ ಸಿಧು 'ಪಂಜಾಬ್ ರಾಜಕೀಯದ ರಾಖಿ ಸಾವಂತ್'

"ಗಾಂಧಿ ಜೀ ಅವರು ಕಡಿಮೆ ಬಟ್ಟೆಗಳನ್ನು ಧರಿಸುತ್ತಿದ್ದರು, ಅವರು ಧೋತಿ ಧರಿಸುತ್ತಿದ್ದರು..ಗಾಂಧಿಜಿಯನ್ನು ಬಾಪು ಎಂದು ಕರೆಯಲಾಗುತ್ತಿತ್ತು..ಈಗ ಯಾರಾದರೂ ಕಡಿಮೆ ಬಟ್ಟೆಗಳನ್ನು ಧರಿಸುವ ಮೂಲಕ ದೊಡ್ಡ ವ್ಯಕ್ತಿಗಳಾಗುವುದಿದ್ದರೆ ರಾಖಿ ಸಾವಂತ್ (Rakhi Sawant) ಗಾಂಧೀಜಿಗಿಂತ ದೊಡ್ಡವರಾಗಿರುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್ 1 ರಿಂದ ಬದಲಾಗಲಿವೆ ಪಿಂಚಣಿ ನಿಯಮಗಳು..! ಪ್ರತಿಯೊಬ್ಬರಿಗೂ ಅನ್ವಯವಾಗುವ ನಿಯಮದ ಸಂಪೂರ್ಣ ವಿವರ ಇಲ್ಲಿದೆ

ಈಗ ಈ ಹೇಳಿಕೆ ವಿವಾದಾತ್ಮಕವಾದ ಹಿನ್ನಲೆಯಲ್ಲಿ ಇದಕ್ಕೆ ಸ್ಪಷ್ಟೀಕರಣ ನೀಡಿರುವ ದೀಕ್ಷಿತ್ ಅವರು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದರು.ಪೂರ್ತಿ ವೀಡಿಯೋ ನೋಡಿದಾಗ ತಾವು ಗಾಂಧೀಜಿಯವರನ್ನು ಹೊಗಳಿರುವುದು ಕಾಣುತ್ತದೆ ಎಂದು ಸಮಜಾಯಿಸಿ ನೀಡಿದ್ದಾರೆ. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯ ಮೂಲಕ ಒಬ್ಬ ವ್ಯಕ್ತಿ ದೊಡ್ಡವನಾಗುತ್ತಾನೆ ಎನ್ನುವುದನ್ನು ವಿವರಿಸಲು ತಾವು ಪ್ರಯತ್ನಿಸಿದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಾಖಿ ಸಾವಂತ್ ತಾಯಿಗೆ ಸಲ್ಮಾನ್ ಖಾನ್ ಆರ್ಥಿಕ ನೆರವು

ದೀಕ್ಷಿತ್ ಅವರು ಮಹಾತ್ಮ ಗಾಂಧಿ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು  ಆದರೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ."ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಒಬ್ಬರು ಸಂಪೂರ್ಣ ವೀಡಿಯೊವನ್ನು ಕೇಳಬೇಕು" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News