ಡಿಸೆಂಬರ್ 08 ಕ್ಕೆ ದೇಶವ್ಯಾಪಿ ಬಂದ್ ಕರೆ ನೀಡಿದ ರೈತರು

ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಡಿಸೆಂಬರ್ 08 ಕ್ಕೆ ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದ್ದಾರೆ.ರಾಷ್ಟ್ರದ ರಾಜಧಾನಿಯ ಎಲ್ಲ ರಸ್ತೆಗಳನ್ನು ನಿರ್ಬಂಧಿಸುವುದಾಗಿ ಹೇಳಿದ್ದಾರೆ.

Last Updated : Dec 4, 2020, 09:28 PM IST
ಡಿಸೆಂಬರ್ 08 ಕ್ಕೆ ದೇಶವ್ಯಾಪಿ ಬಂದ್ ಕರೆ ನೀಡಿದ ರೈತರು  title=
file photo

ನವದೆಹಲಿ: ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಡಿಸೆಂಬರ್ 08 ಕ್ಕೆ ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದ್ದಾರೆ.ರಾಷ್ಟ್ರದ ರಾಜಧಾನಿಯ ಎಲ್ಲ ರಸ್ತೆಗಳನ್ನು ನಿರ್ಬಂಧಿಸುವುದಾಗಿ ಹೇಳಿದ್ದಾರೆ.

ದೆಹಲಿ ಗಡಿಯಲ್ಲಿ ಮುಂದುವರೆದ ರೈತರ ಪ್ರತಿಭಟನೆ

ದೇಶಾದ್ಯಂತದ ಎಲ್ಲಾ ಹೆದ್ದಾರಿ ಟೋಲ್ ಗೇಟ್‌ಗಳನ್ನು ಸಹ ಅವರು ಆಕ್ರಮಿಸಿಕೊಳ್ಳುತ್ತಾರೆ ಮತ್ತು ಡಿಸೆಂಬರ್ 8 ರ ಮುಷ್ಕರದ ಭಾಗವಾಗಿ ಸರ್ಕಾರವು ಟೋಲ್ ಸಂಗ್ರಹಿಸಲು ಅನುಮತಿಸುವುದಿಲ್ಲ ಎಂದು ರೈತರು ಹೇಳಿದರು.'ನಮ್ಮ ಚಳವಳಿಗೆ ಹೆಚ್ಚಿನ ಜನರು ಸೇರಲಿದ್ದಾರೆ" ಎಂದು ಪ್ರತಿಭಟನಾ ಗುಂಪುಗಳ ಮುಖಂಡ ಹರಿಂದರ್ ಸಿಂಗ್ ಲಖೋವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತರಿಗೆ ಬೆಂಬಲ ವ್ಯಕ್ತಪಡಿಸಿ ಪದ್ಮಭೂಷಣ ಪ್ರಶಸ್ತಿ ಹಿಂದಿರುಗಿಸಿದ ಸಂಸದ ಸುಖದೇವ್ ಧಿಂಡ್ಸಾ

'ಕನಿಷ್ಠ ಬೆಂಬಲ ಬೆಲೆ, ವಿದ್ಯುತ್ ಮತ್ತು ಕಳೆ ಸುಡುವುದಕ್ಕೆ ವಿಧಿಸುವ ದಂಡದ ಮೇಲಿನ ನಮ್ಮ ಬೇಡಿಕೆಗಳಿಗೆ ಸರ್ಕಾರ ಸಮ್ಮತಿಸುತ್ತಿರುವುದನ್ನು ನಾವು ನೋಡುತ್ತೇವೆ, ಆದರೆ ಕಾನೂನುಗಳನ್ನು ರದ್ದುಗೊಳಿಸುವವರೆಗೂ ನಾವು ನಿಲ್ಲುವುದಿಲ್ಲ" ಎಂದು ಪಂಜಾಬ್‌ನ ಜಮ್ಹೂರಿ ಕಿಸಾನ್ ಸಭೆಯ ಅಧ್ಯಕ್ಷ ಸತ್ನಂ ಸಿಂಗ್ ಅಜ್ನಾಲಾ ತಿಳಿಸಿದರು.

ತೀವ್ರಗೊಂಡ ರೈತರ ಪ್ರತಿಭಟನೆ, ಸಮಸ್ಯೆ ಬಗೆ ಹರಿಸಲು ಕೇಂದ್ರಕ್ಕೆ ಪಂಜಾಬ್ ಸಿಎಂ ಮನವಿ

ಇದಕ್ಕೂ ಮುನ್ನ ಗುರುವಾರ, ಸರ್ಕಾರ ಮತ್ತು ಸುಮಾರು 40 ರೈತ ಸಂಘಗಳ ನಡುವಿನ ನಾಲ್ಕನೇ ಸುತ್ತಿನ ಮಾತುಕತೆ ಮುಂದುವರಿಯಲು ವಿಫಲವಾಗಿದೆ, ಆದರೆ ಕ್ಯಾಬಿನೆಟ್ ಸಚಿವರು ಶನಿವಾರ ಚರ್ಚೆಯನ್ನು ಮುಂದುವರಿಸುವುದಾಗಿ ಹೇಳಿದರು.
 

Trending News