'ವ್ಯಕ್ತಿ ಅವನ ಪ್ರತಿಭೆಯಿಂದ ಶ್ರೇಷ್ಠನಾಗುತ್ತಾನೆ ಹೊರತು ಅವನ ಜಾತಿಯಿಂದಲ್ಲ- ನಿತಿನ್ ಗಡ್ಕರಿ

ರಾಜಕೀಯ ಪಕ್ಷವೊಂದರಲ್ಲಿ ಜಾತಿ, ಧರ್ಮ ಅಥವಾ ಸಮುದಾಯಗಳ ಆಧಾರದ ಮೇಲೆ ಸೆಲ್ ಗಳನ್ನು ರಚಿಸುವ ನಡೆಗಿಂತ ಹೆಚ್ಚಾಗಿ ತಮಗೆ ಪ್ರತಿಭೆ ಮೇಲೆ ರಚಿಸುವುದಕ್ಕೆ ಹೆಚ್ಚು ಒಲವು ಇದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.

Last Updated : Nov 29, 2020, 08:36 PM IST
'ವ್ಯಕ್ತಿ ಅವನ ಪ್ರತಿಭೆಯಿಂದ ಶ್ರೇಷ್ಠನಾಗುತ್ತಾನೆ ಹೊರತು ಅವನ ಜಾತಿಯಿಂದಲ್ಲ- ನಿತಿನ್ ಗಡ್ಕರಿ title=
file photo

ನವದೆಹಲಿ: ರಾಜಕೀಯ ಪಕ್ಷವೊಂದರಲ್ಲಿ ಜಾತಿ, ಧರ್ಮ ಅಥವಾ ಸಮುದಾಯಗಳ ಆಧಾರದ ಮೇಲೆ ಸೆಲ್ ಗಳನ್ನು ರಚಿಸುವ ನಡೆಗಿಂತ ಹೆಚ್ಚಾಗಿ ತಮಗೆ ಪ್ರತಿಭೆ ಮೇಲೆ ರಚಿಸುವುದಕ್ಕೆ ಹೆಚ್ಚು ಒಲವು ಇದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.

ಅವರು ಪಕ್ಷದಲ್ಲಿನ ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಜಾತಿ (ಎಸ್‌ಸಿ) ನಂತಹ ವಿವಿಧ ಜಾತಿ ಅಥವಾ ಸಮುದಾಯಗಳನ್ನು ಪ್ರತಿನಿಧಿಸಲು ರಾಜಕೀಯ ಪಕ್ಷಗಳ ಸೆಲ್ ಗಳನ್ನು  ಉಲ್ಲೇಖಿಸುತ್ತಾ ಪೂರ್ವ ವಿದರ್ಭದ ಬಿಜೆಪಿಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಸಂದೀಪ್ ಜೋಶಿ ಅವರ ರ್ಯಾಲಿಯಲ್ಲಿ ಮಾತನಾಡುತ್ತಿದ್ದರು.

'ಮನುಷ್ಯನು ತನ್ನ ಜಾತಿಯಿಂದ ಶ್ರೇಷ್ಠನಲ್ಲ, ಆದರೆ ಅವನ ಪ್ರತಿಭೆಯಿಂದ ಶ್ರೇಷ್ಠನೆಂದು ನನಗೆ ಸ್ಪಷ್ಟ ಅಭಿಪ್ರಾಯವಿದೆ. ಬಿಜೆಪಿಯಲ್ಲೂ ನಮ್ಮಲ್ಲಿ ವಿಭಿನ್ನ ಸೆಲ್ ಗಳಿವೆ ... ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ನಾನು ಇದನ್ನು ಅನುಭವಿಸಿದ್ದೇನೆ' ಎಂದು ಅವರು ಹೇಳಿದರು.

ಸಿಹಿ ಸುದ್ದಿ! ಕೇಂದ್ರ ಸರ್ಕಾರದ ಹೊಸ ಯೋಜನೆ, ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ

"ಅಂತಹ ಘಟಕಗಳ ಉಪಯೋಗವಿಲ್ಲದ ಕಾರಣ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಯಾವುದೇ  ಸೆಲ್ ಗಳನ್ನು ರಚಿಸಬಾರದು ಎಂಬುದು ನನ್ನ ಅಭಿಪ್ರಾಯ. ಅಂತಹ ಸೆಲ್ ಗಳಿಂದ ಪ್ರತಿನಿಧಿಗಳು ತಮ್ಮ ಜಾತಿಯ ಜನರು ಪಕ್ಷದಿಂದ ಎಷ್ಟು ಟಿಕೆಟ್ ಪಡೆದಿದ್ದಾರೆ ಎಂದು ಕೇಳುತ್ತಾರೆ 'ಎಂದು ಅವರು ಹೇಳಿದರು.

'ನಾನು ಯಾವಾಗಲೂ ನಮ್ಮ ಪಕ್ಷ, ನಮ್ಮ ಕಾರ್ಯಕರ್ತರು ನಮ್ಮ ಕುಟುಂಬ ಎಂದು ಹೇಳುತ್ತೇನೆ. ನಾವು ಎಂದಿಗೂ ಜಾತಿ ಮತ್ತು ಸಮುದಾಯದ ಆಧಾರದ ಮೇಲೆ ರಾಜಕೀಯ ಮಾಡಿಲ್ಲ. ಕಷ್ಟಪಟ್ಟು ದುಡಿಯುವ ಪಕ್ಷದ ಕಾರ್ಯಕರ್ತರ ಹಿಂದೆ ನಾವು ಅವರನ್ನು ಕುಟುಂಬದ ಸದಸ್ಯರೆಂದು ಪರಿಗಣಿಸುತ್ತೇವೆ ಎನ್ನುವುದು ಬಿಜೆಪಿಯ ವಿಶೇಷತೆ 'ಎಂದು ಅವರು ಹೇಳಿದರು.

ಕರೋನಾದೊಂದಿಗೆ 'ಹೇಗೆ ಬದುಕಬೇಕು' ಎಂದು ಕಲಿಯಬೇಕು, ದೀರ್ಘಕಾಲೀನ ಲಾಕ್‌ಡೌನ್ ಸರಿಯಲ್ಲ: ಗಡ್ಕರಿ

ಯಾವುದೇ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುವಾಗ ಅಥವಾ ಅಗತ್ಯವಿರುವವರಿಗೆ ಸಹಾಯ ಮಾಡುವಾಗ, ಅವರು ಎಂದಿಗೂ ಯಾರೊಬ್ಬರ ಜಾತಿ ಅಥವಾ ಧರ್ಮವನ್ನು ಪರಿಗಣಿಸುವುದಿಲ್ಲ ಎಂದು ಗಡ್ಕರಿ ಹೇಳಿದರು.

“ನಾವು ಎಂದಿಗೂ ಜಾತಿ ಮತ್ತು ಸಮುದಾಯದ ರಾಜಕೀಯ ಮಾಡಿಲ್ಲ. ನಮ್ಮ ಪಕ್ಷ ಅದನ್ನು ಎಂದಿಗೂ ಮಾಡಿಲ್ಲ ಮತ್ತು ಅದನ್ನು ಎಂದಿಗೂ ಮಾಡುವುದಿಲ್ಲ. ಜಾತಿ ನಾಯಕರ ಮನಸ್ಸಿನಲ್ಲಿ ಮಾತ್ರ, ಜಾತಿ ಸಾರ್ವಜನಿಕರ ಅಥವಾ ಪಕ್ಷದ ಕಾರ್ಯಕರ್ತರ ಮನಸ್ಸಿನಲ್ಲಿಲ್ಲ ”ಎಂದು ಅವರು ಹೇಳಿದರು.

Trending News