"ನನಗೆ ಗುಜರಾತಿಗಿಂತ ಹಿಂದಿ ಭಾಷೆ ಹೆಚ್ಚು ಇಷ್ಟ"-ಕೇಂದ್ರ ಗೃಹ ಸಚಿವ ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು 'ರಾಜಭಾಷಾ' (ರಾಷ್ಟ್ರೀಯ ಭಾಷೆ) ಗೆ ವಿಶೇಷ ಒತ್ತು ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.ಇನ್ನು ಮುಂದುವರೆದು ತಾವು ಗುಜರಾತಿಗಿಂತ ಹಿಂದಿಯನ್ನು ಅತಿ ಹೆಚ್ಚು ಇಷ್ಟ ಪಡುವುದಾಗಿ ಹೇಳಿದ್ದಾರೆ.

Written by - Zee Kannada News Desk | Last Updated : Nov 13, 2021, 04:14 PM IST
  • ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು 'ರಾಜಭಾಷಾ' (ರಾಷ್ಟ್ರೀಯ ಭಾಷೆ) ಗೆ ವಿಶೇಷ ಒತ್ತು ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
  • ಇನ್ನು ಮುಂದುವರೆದು ತಾವು ಗುಜರಾತಿಗಿಂತ ಹಿಂದಿಯನ್ನು ಅತಿ ಹೆಚ್ಚು ಇಷ್ಟ ಪಡುವುದಾಗಿ ಹೇಳಿದ್ದಾರೆ.
"ನನಗೆ ಗುಜರಾತಿಗಿಂತ ಹಿಂದಿ ಭಾಷೆ ಹೆಚ್ಚು ಇಷ್ಟ"-ಕೇಂದ್ರ ಗೃಹ ಸಚಿವ ಅಮಿತ್ ಶಾ title=
ಸಂಗ್ರಹ ಚಿತ್ರ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು 'ರಾಜಭಾಷಾ' (ರಾಷ್ಟ್ರೀಯ ಭಾಷೆ) ಗೆ ವಿಶೇಷ ಒತ್ತು ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ,ಇನ್ನು ಮುಂದುವರೆದು ತಾವು ಗುಜರಾತಿಗಿಂತ ಹಿಂದಿಯನ್ನು ಅತಿ ಹೆಚ್ಚು ಇಷ್ಟ ಪಡುವುದಾಗಿ ಹೇಳಿದ್ದಾರೆ.

ವಾರಣಾಸಿಯಲ್ಲಿ ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಶಾ (amit shah),'ನನಗೆ ಗುಜರಾತಿಗಿಂತ ಹಿಂದಿ ಭಾಷೆ ಹೆಚ್ಚು ಇಷ್ಟ. ನಾವು ನಮ್ಮ ರಾಜಭಾಷಾವನ್ನು ಬಲಪಡಿಸಬೇಕಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: Terrorists Attack in Manipur: ಉಗ್ರದಾಳಿಯಲ್ಲಿ ಅಸ್ಸಾಂ ರೈಫಲ್ಸ್ ನ ಕಮಾಂಡಿಂಗ್ ಆಫಿಸರ್ ಸೇರಿದಂತೆ ಅವರ ಕುಟುಂಬ ಹುತಾತ್ಮ

"ಗಾಂಧೀಜಿಯವರು ಸ್ವಾತಂತ್ರ್ಯ ಚಳುವಳಿಯನ್ನು ಜನಾಂದೋಲನವನ್ನಾಗಿ ಪರಿವರ್ತಿಸಿದರು; ಅದಕ್ಕೆ ಮೂರು ಆಧಾರ ಸ್ತಂಭಗಳಿದ್ದವು - ಸ್ವರಾಜ್, ಸ್ವದೇಶಿ ಮತ್ತು ಸ್ವಭಾಷಾ.ಸ್ವರಾಜ್ಯವನ್ನು ಸಾಧಿಸಲಾಯಿತು,ಆದರೆ ಸ್ವದೇಶಿ ಮತ್ತು ಸ್ವಭಾಷಾ ಹಿಂದೆ ಉಳಿದಿದೆ.ಹಿಂದಿ ಮತ್ತು ನಮ್ಮ ಎಲ್ಲಾ ಸ್ಥಳೀಯ ಭಾಷೆಗಳ ನಡುವೆ ಯಾವುದೇ ಸಂಘರ್ಷವಿಲ್ಲ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಾವು ರಾಜಭಾಷೆಗೆ ವಿಶೇಷ ಒತ್ತು ನೀಡಿದ್ದೇವೆ"ಎಂದು ಹೇಳಿದರು.

ಇದನ್ನೂ ಓದಿ: Gautam Gambhir: ರೋಹಿತ್ ಶರ್ಮಾ-ರಾಹುಲ್ ದ್ರಾವಿಡ್ ಭಾರತಕ್ಕೆ ಐಸಿಸಿ ಪ್ರಶಸ್ತಿ ಗೆಲ್ಲುತ್ತಾರೆ- ಗೌತಮ್ ಗಂಭೀರ್

ವಾರಣಾಸಿಯಲ್ಲಿ ನಡೆದ 'ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನ'ದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು.ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಅವರು ಶುಕ್ರವಾರ ವಾರಣಾಸಿಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಉಸ್ತುವಾರಿ ವಿಧಾನ ಸಭೆಯೊಂದಿಗೆ ಪರಿಶೀಲನಾ ಸಭೆ ನಡೆಸಿದರು.

ಇದನ್ನೂ ಓದಿ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರನ ವಿರುದ್ಧ ಇಡಿಯಿಂದ ಸಮನ್ಸ್ ಜಾರಿ

ಜೊತೆಗೆ, ಶಾ ವಾರಣಾಸಿಯ ಕಾಲ ಭೈರವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉತ್ತರ ಪ್ರದೇಶ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಶಾ ಜೊತೆಗಿದ್ದರು.

ಈಗ ಮುಂಬರುವ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಷಾ ಅವರ ಭೇಟಿ ಮಹತ್ವದ್ದಾಗಿದೆ.ಉತ್ತರ ಪ್ರದೇಶ ವಿಧಾನಸಭೆಯ 403 ಸದಸ್ಯರನ್ನು ಆಯ್ಕೆ ಮಾಡಲು ಮುಂದಿನ ವರ್ಷದ ಆರಂಭದಲ್ಲಿ ಮುಂದಿನ ಚುನಾವಣೆಗಳು ನಡೆಯಲಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News