India lockdown: ಸೂರತ್ ನಲ್ಲಿ ಆಸ್ಪತ್ರೆಯಿಂದ ಮನೆಗೆ ಹಿಂತಿರುಗುತ್ತಿದ್ದ ವ್ಯಕ್ತಿ ಸಾವು

ಕೊರೋನಾವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಇದ್ದಿದ್ದರಿಂದಾಗಿ ಯಾವುದೇ ವಾಹನ ಸಿಗದ ಕಾರಣ 62 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಸೂರತ್‌ನಲ್ಲಿ ಆಸ್ಪತ್ರೆಯಿಂದ 8 ಕಿಲೋಮೀಟರ್ ದೂರ ನಡೆದು ಮೃತಪಟ್ಟಿದ್ದಾರೆ.

Last Updated : Mar 28, 2020, 10:16 PM IST
India lockdown: ಸೂರತ್ ನಲ್ಲಿ ಆಸ್ಪತ್ರೆಯಿಂದ ಮನೆಗೆ ಹಿಂತಿರುಗುತ್ತಿದ್ದ ವ್ಯಕ್ತಿ ಸಾವು  title=

ನವದೆಹಲಿ: ಕೊರೋನಾವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಇದ್ದಿದ್ದರಿಂದಾಗಿ ಯಾವುದೇ ವಾಹನ ಸಿಗದ ಕಾರಣ 62 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಸೂರತ್‌ನಲ್ಲಿ ಆಸ್ಪತ್ರೆಯಿಂದ 8 ಕಿಲೋಮೀಟರ್ ದೂರ ನಡೆದು ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಭೀತಿಯಿಂದಾಗಿ ವಿಧಿಸಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ಮನೆಯಿಂದ ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ ಯಾವುದೇ ವಾಹನ ಸಿಗದಿರುವುದರಿಂದಾಗಿ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿ ಗಂಗಾರಂ ಯೆಲೆಂಗೆ ಮಜುರಗೇಟ್‌ನ ಹೊಸ ಸಿವಿಲ್ ಆಸ್ಪತ್ರೆಯಿಂದ ತನ್ನ ಮಗ ನರೇಶ್ ಯೆಲೆಂಗೆ (40) ಜೊತೆ ಹಿಂದಿರುಗುತ್ತಿದ್ದ. ಪಾಂಡೇಸರದಲ್ಲಿರುವ ಅವರ ಮನೆಯ ಸಮೀಪ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಅವರನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರನ್ನು ಮೃತಪಟ್ಟಿರುವುದನ್ನು  ಘೋಷಿಸಲಾಯಿತು.

'ಯಾರಾದರೂ ನಮಗೆ ಸಹಾಯ ಮಾಡಿದ್ದರೆ ಅಥವಾ ನಮಗೆ ಲಿಫ್ಟ್ ನೀಡಿದ್ದರೆ, ನನ್ನ ತಂದೆ ಬದುಕುಳಿಯುತ್ತಿದ್ದರು" ಎಂದು ನರೇಶ್ ಹೇಳಿದರು. ಶನಿವಾರ ಎನ್‌ಸಿಎಚ್‌ನ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ನರೇಶ್‌ಗೆ ಹಸ್ತಾಂತರಿಸಿದರು. ಇದು ನೈಸರ್ಗಿಕ ಸಾವಿನ ಪ್ರಕರಣವಾದ್ದರಿಂದ ಯಾವುದೇ ಪೊಲೀಸ್ ಕ್ರಮ ಕೈಗೊಂಡಿಲ್ಲ ಎಂದು ಎನ್‌ಸಿಎಚ್‌ನ ವೈದ್ಯರು ಹೇಳಿದ್ದಾರೆ.

ಪ್ಲಾಸ್ಟಿಕ್ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿರುವ ಅದಾಜನ್ ಪ್ರದೇಶದ ನಿವಾಸಿ ನರೇಶ್ ಅವರ ಪ್ರಕಾರ, ಅವರು ಶುಕ್ರವಾರ ಬೆಳಿಗ್ಗೆ ಅನಾರೋಗ್ಯದಿಂದ ಬಳಲುತ್ತಿರುವ ತಂದೆಯನ್ನು ಭೇಟಿಯಾಗಲು ಹೋಗಿದ್ದರು. ತಂದೆ ತಂಗಿದ್ದ ಪಾಂಡೇಸರದಲ್ಲಿರುವ  ಛತ್ರಪತಿ ಶಿವಾಜಿನಗರ ಸಮಾಜವನ್ನು ತಲುಪಲು 12 ಕಿಲೋಮೀಟರ್ ನಡೆದು ಹೋಗಬೇಕಾಯಿತು ಎಂದು ನರೇಶ್ ಹೇಳಿದರು.

ತಂದೆಗೆ ವಾಂತಿ ಮತ್ತು ಕೆಮ್ಮು ಕಂಡುಬಂದ ನಂತರ, ನರೇಶ್ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ನ್ಯೂ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಆತನ ತಂದೆಯನ್ನು ಪರೀಕ್ಷಿಸಿ, ಕೆಲವು ಸೋಂಕಿನಿಂದಾಗಿ ತಂದೆಯ ಲಿವರ್ ಊದಿಕೊಂಡಿದೆ ಎಂದು ನರೇಶ್ ಅವರಿಗೆ ತಿಳಿಸಿದರು.ಔಷಧಿಗಳನ್ನು ಖರೀದಿಸಿದ ನಂತರ, ಅವರು ಸಂಜೆ 5 ಗಂಟೆಗೆ ಆಸ್ಪತ್ರೆಯಿಂದ ಹೊರಟರು.

'ಭತಾರ್ ಪ್ರದೇಶದಲ್ಲಿ ವಾಸಿಸುವ ನನ್ನ ಸಹೋದರಿ ಕೂಡ ಆಸ್ಪತ್ರೆಗೆ ತಲುಪಿದರು ಮತ್ತು ನಂತರ ನಾವು ಮನೆಗೆ ಹೋಗಬೇಕೆಂದು ತಿಳಿಸಿದ ನಂತರ. ಅವಳು ತನ್ನ ಮನೆಗೆ ಹೊರಟಳು ಮತ್ತು ನಾನು ನನ್ನ ತಂದೆಯೊಂದಿಗೆ ಆಸ್ಪತ್ರೆಯ ಹೊರಗೆ ಹೋಗಿದ್ದೆ. ನಾವು ವಾಹನವನ್ನು ಹುಡುಕುತ್ತಿದ್ದೆವು. ಕೆಲವು ಆಟೋ ಚಾಲಕರು 500 ರೂ. ಬೇಡಿಕೆ ಇಟ್ಟಿದ್ದರು. ನನ್ನ ಬಳಿ ಅಷ್ಟೊಂದು ಹಣ ಇರಲಿಲ್ಲ. ನಾನು ಬೈಕ್‌ನಲ್ಲಿರುವ ಕೆಲವು ಜನರನ್ನು ಲಿಫ್ಟ್‌ಗಾಗಿ ಕೇಳಿದೆ, ಆದರೆ ಅವರು ನಿರಾಕರಿಸಿದರು, ”ಎಂದು ನರೇಶ್ ಹೇಳಿದರು.

'ಯಾವುದೇ ವಾಹನ ಸಿಗದ  ನಂತರ, ನನ್ನ ತಂದೆ ಅವರು ನಡೆಯಬಹುದು ಎಂದು ಹೇಳಿದರು. ಮೂರೂವರೆ ಗಂಟೆಗಳ ನಂತರ, ನಾವು ಪಾಂಡೇಸರದಲ್ಲಿ ಭೀದ್ಭಂಜನ್ ಸಮಾಜವನ್ನು ತಲುಪಿದಾಗ, ನನ್ನ ತಂದೆ ಪ್ರಜ್ಞೆ ತಪ್ಪಿದರು.'ಸ್ಥಳೀಯ ನಿವಾಸಿಗಳು ಗಂಗಾರಂ ಅವರನ್ನು ತಮ್ಮ ಮನೆಗೆ ಕರೆದೊಯ್ದು ನಂತರ ಆಂಬ್ಯುಲೆನ್ಸ್ ಸೇವೆಗೆ ಕರೆದರು. ಶುಕ್ರವಾರ ರಾತ್ರಿ ಗಂಗಾರಂ ಅವರನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರನ್ನು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಶನಿವಾರ ವರಾಚಾದ ಲ್ಯಾಂಬೆ ಹನುಮಾನ್ ರಸ್ತೆ ಬಳಿ ಶವ ಸಂಸ್ಕಾರ ಮಾಡಲಾಯಿತು.

 

Trending News