Maharashtra Political crisis : ಉದ್ಧವ್ ಠಾಕ್ರೆಗೆ ಬಿಗ್ ಶಾಕ್ : ಶಿಂಧೆ ಬಣ ಸೇರಲು ಗುವಾಹಟಿ ತಲುಪಿದ ಮತ್ತೆ 4 ಜನ ಶಾಸಕರು!

ಶಿವಸೇನೆ ಉದಯ್ ಸಾಮಂತ್, ಪ್ರದೀಪ್ ಧವಲ್, ಪ್ರಶಾಂತ್ ಕರಾಟೆ ಮತ್ತು ಯೋಗೇಶ್ ಮಂಖಾಡೆ ಅವರು ಏಕನಾಥ್ ಶಿಂಧೆ ಜೊತೆ ಕೈಜೋಡಿಸಲು ಸೂರತ್ ಮೂಲಕ ಗುವಾಹಟಿ ತಲುಪಿದ್ದಾರೆ. 

Written by - Channabasava A Kashinakunti | Last Updated : Jun 26, 2022, 07:36 PM IST
  • ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಮಧ್ಯೆ
  • ಮತ್ತೆ ನಾಲ್ವರು ಶಾಸಕರು ಗುವಾಹಟಿ ತಲುಪಿದ್ದಾರೆ
  • 40 ಶಿವಸೇನೆ ಶಾಸಕರು ಬಿಜೆಪಿ ನೇತೃತ್ವದ ಅಸ್ಸಾಂನ ಹೋಟೆಲ್‌ನಲ್ಲಿ ಮೊಕ್ಕಾಂ
Maharashtra Political crisis : ಉದ್ಧವ್ ಠಾಕ್ರೆಗೆ ಬಿಗ್ ಶಾಕ್ : ಶಿಂಧೆ ಬಣ ಸೇರಲು ಗುವಾಹಟಿ ತಲುಪಿದ ಮತ್ತೆ 4 ಜನ ಶಾಸಕರು! title=

ಮುಂಬೈ : ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಮತ್ತೆ ನಾಲ್ವರು ಶಾಸಕರು ಗುವಾಹಟಿ ತಲುಪಿದ್ದಾರೆ. ಶಿವಸೇನೆ ಉದಯ್ ಸಾಮಂತ್, ಪ್ರದೀಪ್ ಧವಲ್, ಪ್ರಶಾಂತ್ ಕರಾಟೆ ಮತ್ತು ಯೋಗೇಶ್ ಮಂಖಾಡೆ ಅವರು ಏಕನಾಥ್ ಶಿಂಧೆ ಜೊತೆ ಕೈಜೋಡಿಸಲು ಸೂರತ್ ಮೂಲಕ ಗುವಾಹಟಿ ತಲುಪಿದ್ದಾರೆ. 

ಏಕನಾಥ್ ಶಿಂಧೆ ನೇತೃತ್ವದ ಸುಮಾರು 40 ಶಿವಸೇನೆ ಶಾಸಕರು ಬಿಜೆಪಿ ನೇತೃತ್ವದ ಅಸ್ಸಾಂನ ಹೋಟೆಲ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ. ಏಕನಾಥ್ ಶಿಂಧೆ ಪಾಳಯ ಬಿಜೆಪಿಯೊಂದಿಗೆ ವಿಲೀನಗೊಳ್ಳುವುದಿಲ್ಲ ಆದರೆ ಶಿವಸೇನೆಯೊಳಗೆ ಮತ್ತೊಂದು ಪಾರ್ಟಿ ತಲೆ ಎತ್ತಲಿದೆ ಎಂದು ತಿಳಿಸಿದೆ. 

ಇದನ್ನೂ ಓದಿ : "ನಿಮಗೆ ಧೈರ್ಯವಿದ್ದರೆ ಶಿವಸೇನೆ ಬಿಟ್ಟು ಪಕ್ಷಾಂತರ ಮಾಡಿ ಹೋರಾಡಿ"

ಈ ಬಗ್ಗೆ ಮಾತನಾಡಿದ ಬಂಡಾಯ ಶಾಸಕರು, ಉದ್ಧವ್ ಠಾಕ್ರೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗಿನ ಶಿವಸೇನೆಯ "ಅಸ್ವಾಭಾವಿಕ" ಮೈತ್ರಿಯನ್ನು ಮುರಿದುಕೊಳ್ಳಬೇಕು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಬಂಡುಕೋರರು ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವು ಪಕ್ಷದ ಹಿಂದುತ್ವದ ಮೇಲೆ ಮೃದುತ್ವ ಹೊಂದಬೇಕು. ದಿವಂಗತ ಸೇನಾ ಸಂಸ್ಥಾಪಕರ ಪರಂಪರೆಯನ್ನು ಮುನ್ನಡೆಸಲು ಪ್ರಯತ್ನಿಸುತ್ತಿದ್ದಾರೆ.

ಶನಿವಾರ, ಉದ್ಧವ್ ಠಾಕ್ರೆ ಬಂಡಾಯ ಶಾಸಕರಿಗೆ ತಮ್ಮ ತಂದೆಯ ಹೆಸರನ್ನು ಬಳಸದಂತೆ ಕೇಳಿಕೊಂಡಿದ್ದರು. ಠಾಕ್ರೆ ಅವರನ್ನು ಬೆಂಬಲಿಸಿದ ಸಂಜಯ್ ರಾವುತ್, "ಉದ್ಧವ್ ಠಾಕ್ರೆ ಹೇಳಿದಂತೆ, ಬಾಳಾಸಾಹೇಬ್ ಅವರ ಹೆಸರನ್ನು ಬಳಸಬೇಡಿ, ಮತ ಕೇಳಲು ನಿಮ್ಮ ತಂದೆಯ ಹೆಸರನ್ನು ಬಳಸಿ, ತಮ್ಮನ್ನು ತಾವು ಬಾಳಾಸಾಹೇಬ್ ಠಾಕ್ರೆ ಅವರ ಭಕ್ತರು ಎಂದು ಕರೆದುಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.

ಈ ವಾರದ ಆರಂಭದಲ್ಲಿ, ಸಂಜಯ್ ರಾವುತ್ ಮಹಾರಾಷ್ಟ್ರಕ್ಕೆ ಮರಳಲು ಮತ್ತು ಉದ್ಧವ್ ಠಾಕ್ರೆ ಬಣವನ್ನು ಸೇರಲು ಬಯಸುವ 20 ಬಂಡಾಯ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ : 'ಎಷ್ಟು ದಿನ ಅಂತಾ ನೀವು ಅಡಗಿಕೊಂಡು ಕುಳಿತಿರುತ್ತಿರಿ?' ಬಂಡಾಯ ಶಾಸಕರಿಗೆ ಶಿವಸೇನಾ ಎಚ್ಚರಿಕೆ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News