2 ತಿಂಗಳ ಕಂದಮ್ಮ ಸೇರಿದಂತೆ ಪತ್ನಿ, ಮೂವರು ಮಕ್ಕಳನ್ನು ಕೊಂದ ಪತಿ

ಆರೋಪಿ ಖಿನ್ನತೆ ಸಮಸ್ಯೆಯಿಂದ ಬಳಲುತ್ತಿದ್ದನು ಎನ್ನಲಾಗಿದೆ.

Last Updated : Jun 22, 2019, 01:11 PM IST
2 ತಿಂಗಳ ಕಂದಮ್ಮ ಸೇರಿದಂತೆ ಪತ್ನಿ, ಮೂವರು ಮಕ್ಕಳನ್ನು ಕೊಂದ ಪತಿ title=

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಡೀ ದೇಶವೇ ಬೆಚ್ಚಿ ಬೀಳುವ ರಾಕ್ಷಸೀ ಕೃತ್ಯವೊಂದು ನಡೆದಿದೆ. ದೆಹಲಿಯ ಮೆಹ್ರೌಲಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ಹೆಂಡತಿ ಮತ್ತು 2 ತಿಂಗಳ ಮಗು ಸೇರಿದಂತೆ ಮೂವರು ಮಕ್ಕಳನ್ನು ಹತ್ಯೆಗೈದಿರುವ ಘಟನೆ ನಡೆದಿದೆ.

ಆರೋಪಿಯನ್ನು ಉಪೇಂದ್ರ ಶುಕ್ಲಾ ಎಂದು ಗುರುತಿಸಲಾಗಿತ್ತು, ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಎನ್ನಲಾಗಿದೆ. ಈತ ಶುಕ್ರವಾರ ರಾತ್ರಿ ಸುಮಾರು 1 ರಿಂದ 1:30 ರ ಸಮಯದಲ್ಲಿ ಈ ರಾಕ್ಷಸೀ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.

ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ:
ಮೃತ ಮಕ್ಕಳಲ್ಲಿ 2 ತಿಂಗಳ ಬಾಲಕಿ, 7 ವರ್ಷದ ಹುಡುಗಿ ಮತ್ತು 5 ವರ್ಷದ ಮಗ ಮತ್ತು ಹೆಂಡತಿ ಸೇರಿದ್ದಾರೆ. ಆರೋಪಿ  ಕಳೆದ ಹಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದನು ಎಂದು ಮೂಲಗಳು ತಿಳಿಸಿವೆ. ಮನೆಯಲ್ಲಿ ಈ ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ಅತ್ತೆ ಮನೆಯಿದ್ದರು, ಉಪೇಂದ್ರ ಶುಕ್ಲಾ ಅವರಿಗೆ ಬಾಗಿಲು ತೆರೆಯಲ್ಲಿಲ್ಲ ಎನ್ನಲಾಗಿದೆ.

ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು:
ಶನಿವಾರ ಬೆಳಿಗ್ಗೆ ಮನೆಯ ಬಾಗಿಲು ಎಷ್ಟು ಬಡಿದರೂ ಯಾರೂ ಕೂಡ ಬಾಗಿಲು ತೆರೆಯಲಿಲ್ಲ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯ ಬಾಗಿಲು ತೆರೆದಿದ್ದಾರೆ. ಮನೆಯೊಳಗೆ ಮೂವರು ಮಕ್ಕಳು ಹಾಗೂ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ದೃಶ್ಯ ಕಂಡ ಪೊಲೀಸರು ಶಾಕ್ ಆಗಿದ್ದಾರೆ. 

ಆರೋಪಿ ಉಪೇಂದ್ರ ಶುಕ್ಲಾನನ್ನು ಬಂಧಿಸಲಾಗಿದ್ದು, ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ದಕ್ಷಿಣ ದೆಹಲಿಯ ಡಿಸಿಪಿ ತಿಳಿಸಿದ್ದಾರೆ. ಮೂವರ ಗಂಟಲಿಗೂ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಆ ಚಾಕುವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ. 

ಈ ದುರ್ಘಟನೆಗೆ ಕಾರಣ ಏನೆಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Trending News