ಕುಂಭ ಮೇಳಕ್ಕಾಗಿ ಸ್ವಯಂ ಪ್ರೇರಣೆಯಿಂದ ಮಸೀದಿಗಳ ಕೆಲ ಭಾಗಗಳನ್ನು ಕೆಡವಿದ ಮುಸ್ಲಿಮರು

ಕುಂಭ ಮೇಳದ ಸಿದ್ಧತೆಗಳ ಅಡಿಯಲ್ಲಿ ಅಲಹಾಬಾದ್ನಲ್ಲಿ ರಸ್ತೆಯ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಕೆಲವು ಭಾಗಗಳಲ್ಲಿ ಮಸೀದಿಗಳು ಮಧ್ಯೆ ಬರುತ್ತಿವೆ.

Last Updated : Jul 3, 2018, 06:42 PM IST
ಕುಂಭ ಮೇಳಕ್ಕಾಗಿ ಸ್ವಯಂ ಪ್ರೇರಣೆಯಿಂದ ಮಸೀದಿಗಳ ಕೆಲ ಭಾಗಗಳನ್ನು ಕೆಡವಿದ ಮುಸ್ಲಿಮರು title=
Pic: ANI

ಅಲಹಾಬಾದ್: ಹಳೆಯ ಅಲಹಾಬಾದ್ ನಲ್ಲಿ ಹಿಂದೂ-ಮುಸ್ಲಿಂ ಏಕತೆಯ ಉತ್ತಮ ಚಿತ್ರಣ ಕಂಡುಬಂದಿದೆ. ಸಂಗಂನಗರಿಯಲ್ಲಿ ಮುಂದಿನ ವರ್ಷ ನಡೆಯಲಿರುವ ಕುಂಭ ಮೇಳಕ್ಕೆ ರಸ್ತೆ ವಿಸ್ತರಣೆ ಕೆಲಸ ನಡೆಯುತ್ತಿದೆ. ಇದರ ಅಡಿಯಲ್ಲಿ, ಹಳೆಯ ಅಲಹಾಬಾದ್ ನ ಅನೇಕ ಕಟ್ಟಡಗಳು ಸರ್ಕಾರಿ ಭೂಮಿಯಲ್ಲಿವೆ. ಈ ಸಮಯದಲ್ಲಿ ಮುಸ್ಲಿಮರು ತಮ್ಮ ಮಸೀದಿಗಳ ಭಾಗಗಳನ್ನು ತೆರವುಗೊಳಿಸಿ ರಸ್ತೆ ವಿಸ್ತರಣೆಗೆ ಬೆಂಬಲ ನೀಡುತ್ತಿದ್ದಾರೆ. ಈ ಮಸೀದಿಗಳನ್ನು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ. ಕುಂಭ ಮೇಳಕ್ಕಾಗಿ ರಸ್ತೆಯ ವಿಸ್ತರಣೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಮುಸ್ಲಿಮರು ಹೇಳುತ್ತಾರೆ.

ಮುಂದಿನ ವರ್ಷ ಅಲಹಾಬಾದ್ ನ ಸಂಗಂನಗರಿಯಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿದೆ. ಇದಕ್ಕಾಗಿ ನಡೆಸಬೇಕಾದ ತಯಾರಿಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಅಡಿಯಲ್ಲಿ, ಅಲಹಾಬಾದ್ ನ ಕೆಲವು ರಸ್ತೆಗಳನ್ನು ವಿಸ್ತರಿಸುವ ಕೆಲಸ ನಡೆಯುತ್ತಿದೆ.

ಹಳೆಯ ಅಲಹಾಬಾದ್ನಲ್ಲಿ ರಸ್ತೆ ವಿಸ್ತರಣೆ ಕೂಡ ಮಾಡಬೇಕಾಗಿದೆ. ಆದರೆ ಪ್ರದೇಶವು ತುಂಬಾ ಜನನಿಬಿಡವಾಗಿದೆ. ಅಗಲವಾಗಬೇಕಾದ ರಸ್ತೆಗಳಲ್ಲಿ ಕೆಲವು ಮಸೀದಿಗಳಿವೆ. ಕುಂಭ ಮೇಳಕ್ಕಾಗಿ ರಸ್ತೆಯ ಅಗಲಗೊಳಿಸುವ ಕೆಲಸವನ್ನು ಮಾಡಬೇಕಾದ ಸಮಯದಲ್ಲಿ ಮುಸ್ಲಿಮರ ಮಸೀದಿಯ ಸ್ಥಳವನ್ನು ತೆರವುಗೊಳಿಸಬೇಕಾಗುತ್ತದೆ. ಈ ವಿಷಯ ಮುಸ್ಲಿಮರು ತಿಳಿದುಕೊಂಡ ಮುಸಲ್ಮಾನರು ಅದನ್ನು ವಿರೋಧಿಸುವ ಬದಲು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಮುಸ್ಲಿಮರಿಗೆ ಬೆಂಬಲ, ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ಮಸೀದಿಗಳ ಕೆಲವು ಭಾಗಗಳನ್ನು ಪರಸ್ಪರ ಸಮಾಲೋಚನೆಯ ನಂತರ ಕೆಡವಲಾಯಿತು. ಇದು ಕುಂಭ ಮೇಳಕ್ಕೆ ರಸ್ತೆಯ ವಿಸ್ತರಣೆಯನ್ನು ಸುಲಭಗೊಳಿಸಿದೆ. 

Trending News