ರೈತರಿಗೆ ಬೆಂಬಲಿಸಿ ಪದ್ಮವಿಭೂಷಣ ತಿರಸ್ಕರಿಸಿದ್ದ ಪ್ರಕಾಶ್ ಬಾದಲ್ ಗೆ ಪ್ರಧಾನಿ ಮೋದಿ ಕರೆ

ಇಂದು ಭಾರತ ಬಂದ್ ಇರುವಂತಹ ಸಂದರ್ಭದಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಪದ್ಮವಿಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ್ದ ಪ್ರಕಾಶ್ ಬಾದಲ್ ಅವರಿಗೆ ಇಂದು ಪ್ರಧಾನಿ ಮೋದಿ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

Last Updated : Dec 8, 2020, 04:30 PM IST
ರೈತರಿಗೆ ಬೆಂಬಲಿಸಿ ಪದ್ಮವಿಭೂಷಣ ತಿರಸ್ಕರಿಸಿದ್ದ ಪ್ರಕಾಶ್ ಬಾದಲ್ ಗೆ ಪ್ರಧಾನಿ ಮೋದಿ ಕರೆ  title=
Photo Courtesy: PTI

ನವದೆಹಲಿ: ಇಂದು ಭಾರತ ಬಂದ್ ಇರುವಂತಹ ಸಂದರ್ಭದಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಪದ್ಮವಿಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ್ದ ಪ್ರಕಾಶ್ ಬಾದಲ್ ಅವರಿಗೆ ಇಂದು ಪ್ರಧಾನಿ ಮೋದಿ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ- ಆಮ್ ಆದ್ಮಿ ಪಕ್ಷ ಆರೋಪ

93 ರ ಹರೆಯದ ಪ್ರಕಾಶ್ ಬಾದಲ್ ಅವರು ಪಿಎಂ ಮೋದಿಗೆ ಪತ್ರ ಬರೆದ ನಂತರ ಈ ದೂರವಾಣಿ ಕರೆ ಬಂದಿದೆ. ನಾಲ್ಕು ಪುಟಗಳ ಪತ್ರದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಇಂದಿರಾ ಗಾಂಧಿ ಹೇರಿದ ತುರ್ತುಸ್ಥಿತಿಯ ಬಗ್ಗೆಯೂ ಉಲ್ಲೇಖಿಸಲಾಗಿದೆ.ರೈತರು ಮತ್ತು ಅವರ ಕುಟುಂಬಗಳು ಸಂಕಷ್ಟಕ್ಕೆ ತಳ್ಳುವ ಈ ಮೂರುವ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು" ಎಂದು ಶ್ರೀ ಬಾದಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Bharat Bandh: ರೈತರನ್ನು ಬೆಂಬಲಿಸಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

'ನಾನು ತುರ್ತು ದಿನಗಳಲ್ಲಿ ಸರ್ವಾಧಿಕಾರದ ವಿರುದ್ಧ ಹೋರಾಡಿದ್ದೇನೆ. ಶಾಂತಿಯುತ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಗೌರವವು ಅತ್ಯಂತ ಸಂಕೀರ್ಣ ಮತ್ತು ಪರಿಹರಿಸಲಾಗದ ಸಮಸ್ಯೆಗಳಿಗೆ ಸಹ ಉತ್ತಮ ಪರಿಹಾರಗಳನ್ನು ನೀಡುತ್ತದೆ ಎಂದು ನನ್ನ ಅನುಭವ ಹೇಳುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರಂತಹ ರಾಜಕಾರಣಿಗಳು ನಮ್ಮ ರಾಷ್ಟ್ರದ ವೈವಿಧ್ಯತೆಯ ಸೌಂದರ್ಯವನ್ನು ಹೇಗೆ ಅರ್ಥಮಾಡಿಕೊಂಡರು ಮತ್ತು ಗೌರವಿಸಿದರು ಮತ್ತು ಅದನ್ನು ಆಸ್ತಿಯನ್ನಾಗಿ ಪರಿವರ್ತಿಸಿದರು ಎಂಬುದನ್ನು ದೇಶ ನೋಡಿದೆ.ಅಂತಹ ಬೃಹತ್ ಜನಾದೇಶ ಹೊಂದಿರುವ ಸರ್ಕಾರವು ನಿರ್ಧಾರ ತೆಗೆದುಕೊಳ್ಳುವಲ್ಲಿ ಅಂತಹ ವೈಫಲ್ಯವನ್ನು ಅನುಮತಿಸುತ್ತದೆ ಎಂದು ನಂಬುವುದು ಕಷ್ಟ ಎಂದು ಅವರು ಹೇಳಿದರು.

'ರೈತರ ಹೋರಾಟಕ್ಕೆ ನಮ್ಮ ಬೆಂಬಲ ಇದೆ' ಎಂದ ಹ್ಯಾಟ್ರಿಕ್ ಹೀರೋ!

ರೈತರನ್ನು ಹಾಗೂ ರಾಜಕೀಯ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಂದಿರುವ ನಡೆಯಿಂದಾಗಿ ಶಿರೋಮಣಿ ಅಕಾಲಿ ದಳ ಕೇಂದ್ರ ಬಿಜೆಪಿ ಸರ್ಕಾರದಿಂದ ಹೊರಬಂದಿತ್ತು.

Trending News