ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ಪಾಕ್ ಅಟ್ಟಹಾಸ; ಸೈನಿಕ ಹುತಾತ್ಮ

ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಯಿತು. ಪೂಂಚ್‌ನಲ್ಲಿ ಗುಂಡಿನ ದಾಳಿ ಜೊತೆಗೆ ಪಾಕಿಸ್ತಾನ ಸಣ್ಣ ಶಸ್ತ್ರಾಸ್ತ್ರ ಮತ್ತು ಶೆಲ್ ದಾಳಿ ನಡೆಸಿದೆ.

Last Updated : Sep 2, 2019, 02:34 PM IST
ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ಪಾಕ್ ಅಟ್ಟಹಾಸ; ಸೈನಿಕ ಹುತಾತ್ಮ  title=
Representational image

ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಈ ಸೈನಿಕನನ್ನು ರಾಜಸ್ಥಾನದ ಅಲ್ವಾರ್‌ನ ರೂಪಂಗರ್ ತಹಸಿಲ್‌ನ ಭದೂನ್ ಗ್ರಾಮದ ನಿವಾಸಿ 23 ವರ್ಷದ ಗ್ರೆನೇಡಿಯರ್ ಹೇಮರಾಜ್ ಜಾಟ್ ಎಂದು ಗುರುತಿಸಲಾಗಿದೆ.  ಹೇಮರಾಜ್ ಮಾರ್ಚ್ 2017 ರಂದು ಸೈನ್ಯಕ್ಕೆ ಸೇರಿದ್ದರು.

ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಯಿತು. ಪೂಂಚ್‌ನಲ್ಲಿ ಗುಂಡಿನ ದಾಳಿ ಜೊತೆಗೆ ಪಾಕಿಸ್ತಾನ ಸಣ್ಣ ಶಸ್ತ್ರಾಸ್ತ್ರ ಮತ್ತು ಶೆಲ್ ದಾಳಿ ನಡೆಸಿದೆ. ಭಾರತ ಇದಕ್ಕೆ ಸೂಕ್ತ ಪ್ರತಿಕ್ರಿಯೆಯನ್ನೂ ನೀಡಿದೆ.

ಪಾಕಿಸ್ತಾನ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ. ಪಾಕಿಸ್ತಾನದ ಪ್ರತಿ ಪ್ರಯತ್ನವನ್ನು ಭಾರತೀಯ ಪಡೆಗಳು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಶುಕ್ರವಾರ ಮತ್ತು ಶನಿವಾರ ಜಮ್ಮು-ಕಾಶ್ಮೀರದಲ್ಲಿದ್ದರು. ಅಲ್ಲಿ ಅವರು ಭಾರತೀಯ ಸೈನಿಕರು ನಿಯಂತ್ರಣ ರೇಖೆಯ ಉದ್ದಕ್ಕೂ ಪೋಸ್ಟ್ ಮಾಡಿದ್ದು, ಪಾಕಿಸ್ತಾನದಿಂದ ಆಗುವ ಯಾವುದೇ ಆಕ್ರಮಣವನ್ನು ಹತ್ತಿಕ್ಕಲು ಸಿದ್ಧರಾಗಿರಿ ಎಂದು ಭಾರತೀಯ ಸೇನೆಗೆ ಕರೆ ನೀಡಿದರು. ಒಳನುಸುಳುವಿಕೆ ಬಿಡ್ಗಳನ್ನು ವಿಫಲಗೊಳಿಸಿದ್ದಕ್ಕಾಗಿ ಸೇನೆಯನ್ನು ಅವರು ಅಭಿನಂದಿಸಿದ್ದಾರೆ.

ಎಲ್‌ಒಸಿ ಉದ್ದಕ್ಕೂ ಕದನ ವಿರಾಮವನ್ನು ಪದೇ ಪದೇ ಉಲ್ಲಂಘಿಸುವ ಚಾಳಿಯನ್ನು ಪಾಕಿಸ್ತಾನ ತೀವ್ರಗೊಳಿಸಿದೆ. ಇದಲ್ಲದೆ ಭಯೋತ್ಪಾದಕರನ್ನು ಭಾರತದ ಒಳನುಸುಳುವಂತೆ ಮಾಡುವ ಯತ್ನದಲ್ಲಿ ಪಾಕಿಸ್ತಾನ ಆಕ್ರಮಿತ-ಕಾಶ್ಮೀರದಲ್ಲಿ ಇಸ್ಲಾಮಾಬಾದ್‌ನಲ್ಲಿ ಹಲವಾರು ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಭಾರತೀಯ ಗುಪ್ತಚರ ವರದಿಗಳು ಇತ್ತೀಚೆಗೆ ತಿಳಿಸಿದೆ.

Trending News