ಕಾರಿನ ಮೇಲೆರಗಿ ಬಂತು ಬಸ್ , ನೋಡ ನೋಡುತ್ತಿದ್ದಂತೆಯೇ ಐದು ಜನ ಸಜೀವ ದಹನ

ಘಟನೆಯಲ್ಲಿ ಬೆಂಕಿ ಹೊತ್ತಿಕೊಂಡ ಕಾರು ಪಾಟ್ನಾದ ಅಲೋಕ್ ರೋಷನ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ರಾಮಗಢ  ಎಸ್ಪಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತರ ಗುರುತು ಪತ್ತೆಗಾಗಿ ಮತ್ತು ಇತರ ಕ್ರಮಗಳಿಗಾಗಿ ಪಾಟ್ನಾ ಪೊಲೀಸರನ್ನು ಸಂಪರ್ಕಿಸಲಾಗಿದೆ.  

Written by - Ranjitha R K | Last Updated : Sep 15, 2021, 03:08 PM IST
  • ಅಪಘಾತದಲ್ಲಿ ಐದು ಜನ ಸಜೀವ ದಹನ
  • ಮರಣೋತ್ತರ ಪರೀಕ್ಷೆಗೆ ಮೃತದೇಹಗಳ ರವಾನೆ
  • ಕುಟುಂಬಸ್ಥರನ್ನು ಸಂಪರ್ಕಿಸುವ ಪ್ರಯತ್ನದಲ್ಲಿ ಪೊಲೀಸರು
ಕಾರಿನ ಮೇಲೆರಗಿ ಬಂತು ಬಸ್ , ನೋಡ ನೋಡುತ್ತಿದ್ದಂತೆಯೇ ಐದು ಜನ ಸಜೀವ ದಹನ  title=
ಅಪಘಾತದಲ್ಲಿ ಐದು ಜನ ಸಜೀವ ದಹನ (file photo)

ರಾಮಗಢ :  ಜಾರ್ಖಂಡ್‌ನ (Jharkhand)  ರಾಮಗಢದಲ್ಲಿ (Ramgarh) ಭೀಕರ ಅಪಘಾತ ಸಂಭವಿಸಿದ್ದು, 5 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು   ಗಾಯಗೊಂಡಿದ್ದಾರೆ. ರಾಮಗಢ ಜಿಲ್ಲೆಯ ರಾಜ್ರಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗೋಲಾ-ರಾಮಗಢ ರಸ್ತೆಯ(Jharkhand Accident)  ಮುರಬಂದ ಲಾರಿಯ ಬಳಿ, ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ, ಎದುರು ಬದಿಯಿಂದ ಬರುತ್ತಿದ್ದ ಕಾರಿಗೆ ಬಸ್  ಡಿಕ್ಕಿ  (Bus Hit Car)ಹೊಡೆದಿದೆ. ಕಾರಿಗೆ ಡಿಕ್ಕಿ ಹೊಡೆದ ಬಸ್ ಕಾರಿನ ಮೇಲೇರಿದೆ. ಘಟನೆಯಲ್ಲಿ ಕಾರು ಚಾಲಕ ಸೇರಿ ಐದು ಜನ ಮೃತಪಟ್ಟಿದ್ದಾರೆ ಎಂದು ರಾಮಗಢ ಎಸ್ಪಿ ಪ್ರಭಾತ್ ಕುಮಾರ್ ಹೇಳಿದ್ದಾರೆ. 

 ಮೃತ ದೇಹಗಳ ಗುರುತು ಪತ್ತೆಯಾಗಿಲ್ಲ : 
ಘಟನೆಯಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಒಬ್ಬ ಹುಡುಗ ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಎಲ್ಲಾ ಐದು ಜನರು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ (Five People Burnt Alive In Car) . ಅಪಘಾತದಲ್ಲಿ ಸಾವನ್ನಪ್ಪಿದವರ ದೇಹಗಳು ಸಂಪೂರ್ಣ ಸುಟ್ಟು ಹೋಗಿದ್ದು, ಮೃತದೇಹಗಳನ್ನು ಗುರುತಿಸುವುದು ಕೂಡಾ ಕಷ್ಟಕರವಾಗಿದೆ ಎನ್ನಲಾಗಿದೆ. ಎಲ್ಲಾ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ (Hospital) ಕಳುಹಿಸಲಾಗಿದ್ದು, ಮೃತರ ಕುಟುಂಬಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ.

ಇದನ್ನೂ ಓದಿ :Nokia: ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್ಫೋನ್ ಬಿಡುಗಡೆ, ಬಲವಾದ ಬ್ಯಾಟರಿ ಜೊತೆಗೆ ಸಿಗಲಿದೆ ಈ ವೈಶಿಷ್ಟ್ಯ

ಘಟನೆಯಲ್ಲಿ ಬೆಂಕಿ (Fire) ಹೊತ್ತಿಕೊಂಡ ಕಾರು ಪಾಟ್ನಾದ ಅಲೋಕ್ ರೋಷನ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ರಾಮಗಢ  ಎಸ್ಪಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತರ ಗುರುತು ಪತ್ತೆಗಾಗಿ ಮತ್ತು ಇತರ ಕ್ರಮಗಳಿಗಾಗಿ ಪಾಟ್ನಾ ಪೊಲೀಸರನ್ನು ಸಂಪರ್ಕಿಸಲಾಗಿದೆ.

ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು : 
ಕುಜ್ಜು ಕಣಿವೆಯಲ್ಲಿ ನಡೆದ ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿಹಾರದ (Bihar) ಶೇಖಪುರದಿಂದ ಐದು ಜನರು ರಾಜರಪ್ಪದಲ್ಲಿರುವ ಚಿನ್ನಮಸ್ತಕ ದೇವಸ್ಥಾನಕ್ಕೆ ಕಾರಿನಲ್ಲಿ ಬರುತ್ತಿದ್ದರು. ಬೆಳಗ್ಗೆ 8.30 ರ ಸುಮಾರಿಗೆ ಹೆಚ್ಚಿನ ವೇಗದಿಂದ ಬರುತ್ತಿದ್ದ ಕಾರಣ , ಬ್ಯಾಲೆನ್ಸ್ ತಪ್ಪಿ, ಕಾರು ಕುಜ್ಜು ಕಣಿವೆಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಕಾರಣದಿಂದಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇತರ ಮೂವರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಮರಣೋತ್ತರ ಪರೀಕ್ಷೆಗೆ ಮೃತದೇಹಗಳು :
ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ರಾಂಚಿಯ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಮತ್ತು ಇತರ ಇಬ್ಬರು ರಾಮಗಢದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಇಲ್ಲೂ ಕೂಡಾ ಮೃತರ ಗುರುತು ಪತ್ತೆಯಾಗಿಲ್ಲ. 

ಇದನ್ನೂ ಓದಿ : ಬಳಕೆದಾರರಿಗೆ ಶಾಕ್ ನೀಡಿದ Xiaomi! ಇದ್ದಕ್ಕಿದ್ದಂತೆ ಇಷ್ಟು ಜನರ ಫೋನ್‌ಗಳಿಗೆ ನಿರ್ಬಂಧ ..! ಕಾರಣ ಏನು ಗೊತ್ತಾ ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News