ಅಕ್ಟೋಬರ್ 12 ರಂದು ಜಮ್ಮು-ಕಾಶ್ಮೀರದಲ್ಲಿ ಮೊದಲ ಜಾಗತಿಕ ಶೃಂಗಸಭೆ

ಶ್ರೀನಗರದಲ್ಲಿ ಉದ್ಘಾಟನಾ ಅಧಿವೇಶನದೊಂದಿಗೆ ಅಕ್ಟೋಬರ್ 12 ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆದಾರರ ಶೃಂಗಸಭೆ ನಡೆಯಲಿದೆ.

Last Updated : Aug 14, 2019, 07:55 AM IST
ಅಕ್ಟೋಬರ್ 12 ರಂದು  ಜಮ್ಮು-ಕಾಶ್ಮೀರದಲ್ಲಿ ಮೊದಲ ಜಾಗತಿಕ ಶೃಂಗಸಭೆ title=
Representational Photo

ಶ್ರೀನಗರ: 2019ರ ಅಕ್ಟೋಬರ್ 12 ರಿಂದ ಹೂಡಿಕೆದಾರರಿಗಾಗಿ ಮೂರು ದಿನಗಳ ಈವೆಂಟ್ನೊಂದಿಗೆ ಜಮ್ಮು ಮತ್ತು ಕಾಶ್ಮೀರ ತನ್ನ ಮೊದಲ ಜಾಗತಿಕ ಶೃಂಗಸಭೆಯನ್ನು ಶ್ರೀನಗರದಲ್ಲಿ ಆಯೋಜಿಸಲು ಸಜ್ಜಾಗಿದೆ.

ಶ್ರೀನಗರದಲ್ಲಿ ಹೂಡಿಕೆದಾರರ ಶೃಂಗಸಭೆಯನ್ನು ಅಕ್ಟೋಬರ್ 12 ರಿಂದ ಅಕ್ಟೋಬರ್ 14 ರವರೆಗೆ ಆಯೋಜಿಸಲು ಜಮ್ಮು-ಕಾಶ್ಮೀರ ನಿರ್ಧರಿಸಿದೆ. ಇದು ಇಲ್ಲಿಯವರೆಗೆ ಇಲ್ಲಿ ನಡೆಯುತ್ತಿರುವ ಮೊದಲ ಜಾಗತಿಕ ಶೃಂಗಸಭೆಯಾಗಿದೆ. ಶೃಂಗಸಭೆಯ ಉದ್ಘಾಟನಾ ಅಧಿವೇಶನವು ಅಕ್ಟೋಬರ್ 12 ರಂದು ಶ್ರೀನಗರದಲ್ಲಿ ನಡೆಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ (ವಾಣಿಜ್ಯ ಮತ್ತು ಕೈಗಾರಿಕೆ) ಎನ್.ಕೆ.ಚೌಧರಿ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

370 ನೇ ವಿಧಿಯನ್ನು ರದ್ದುಪಡಿಸಿದ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಮ್ಮು ಮತ್ತು ಕಾಶ್ಮೀರದ ಜನರಿಗೆ ಈಗ ಶಾಂತಿ ಮತ್ತು ಸಮೃದ್ಧಿಯನ್ನು ಆನಂದಿಸಲು ಅಪಾರ ಅವಕಾಶಗಳಿವೆ ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸುವುದು ಹೊಸದಾಗಿ ರೂಪುಗೊಂಡ ಕೇಂದ್ರಾಡಳಿತ ಪ್ರದೇಶದ ಸಾಮರ್ಥ್ಯವನ್ನು ಪ್ರದರ್ಶಿಸುವ ಒಂದು ಅವಕಾಶವಾಗಿದೆ. 

370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯ ಬಗ್ಗೆ ಕೆಲವು ರಾಜಕೀಯ ಪಕ್ಷಗಳು ಕಳವಳ ವ್ಯಕ್ತಪಡಿಸಿದರೆ, ಇದು ಪ್ರಗತಿಯ ಹಾದಿಯಲ್ಲಿ ತೊಡಕಾಗಿರುವುದು ಮಾತ್ರವಲ್ಲದೆ ಭಯೋತ್ಪಾದನೆಗೆ ಕಾರಣವಾಗಿದೆ ಎಂದು ಕೇಂದ್ರವು ಸಮರ್ಥಿಸಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಹಾಯ ಮಾಡಲು ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಜಂಪ್‌ಸ್ಟಾರ್ಟ್ ಮಾಡಬಹುದೆಂದು ಜೀ ನ್ಯೂಸ್ ಈ ಹಿಂದೆ ವರದಿ ಮಾಡಿತ್ತು. ಆದರೆ ಪ್ರಮುಖ ಕೇಂದ್ರ ಸಚಿವಾಲಯಗಳಿಗೆ ಕೇಂದ್ರಾಡಳಿತ ಪ್ರದೇಶವನ್ನು ಅಭಿವೃದ್ಧಿಪಡಿಸುವ ಮತ್ತು ಉದ್ಯೋಗ ಸೃಷ್ಟಿಗೆ ಸಹಾಯ ಮಾಡುವ ಯೋಜನೆಗಳನ್ನು ಗುರುತಿಸಲು ಕೇಳಲಾಗಿದೆ. ಯೋಜಿತ ಹೂಡಿಕೆದಾರರ ಶೃಂಗಸಭೆಯು ಹೆಚ್ಚಿನ ಉದ್ಯೋಗಾವಕಾಶಗಳತ್ತ ಸಾಗುವ ದಿಕ್ಕಿನಲ್ಲಿ  ವಿಶೇಷವಾಗಿ ಯುವಜನರಿಗೆ ಒಂದು ದಿಟ್ಟ ಹೆಜ್ಜೆಯಾಗಿದೆ.
 

Trending News