ಭೀಕರ ರಸ್ತೆ ಅಪಘಾತ: ಉತ್ತರಾಖಂಡ್ ಶಿಕ್ಷಣ ಸಚಿವ ಅರವಿಂದ್ ಪಾಂಡೆ ಪುತ್ರ ಸಾವು

ಅಂಕುರ್ ಪಾಂಡೆ ಜೊತೆಗಿದ್ದ ಮುನ್ನಾ ಗಿರಿ ಸಹ ಸಾವನ್ನಪ್ಪಿದ್ದು, ಯುವನೋರ್ವ ಈ ಘಟನೆಯಲ್ಲಿ ಗಾಯಗೊಂಡಿದ್ದಾನೆ. 

Last Updated : Jun 26, 2019, 10:47 AM IST
ಭೀಕರ ರಸ್ತೆ ಅಪಘಾತ: ಉತ್ತರಾಖಂಡ್ ಶಿಕ್ಷಣ ಸಚಿವ ಅರವಿಂದ್ ಪಾಂಡೆ ಪುತ್ರ ಸಾವು title=

ಬರೇಲಿ: ಇಲ್ಲಿನ ಫರೀದ್‌ಪುರ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಉತ್ತರಾಖಂಡ ಶಿಕ್ಷಣ ಸಚಿವ ಅರವಿಂದ್ ಪಾಂಡೆ ಪುತ್ರ ಅಂಕುರ್ ಪಾಂಡೆ ಸಾವನ್ನಪ್ಪಿದ್ದಾರೆ.

ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗೋರಖ್‌ಪುರಕ್ಕೆ ಹೋಗುತ್ತಿದ್ದ ಸಚಿವರ ಪುತ್ರ ಅಂಕುರ್ ಪಾಂಡೆ(24) ಅವರ ಕಾರು ಫರೀದ್‌ಪುರ ಬಳಿ ಬುಧವಾರ ಮುಂಜಾನೆ 3 ಗಂಟೆ ಸಮಯದಲ್ಲಿ ಎನ್‌ಎಚ್ 24 ನಲ್ಲಿ ಟ್ರಕ್ಕೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅಂಕುರ್ ಪಾಂಡೆ ಸಾವನ್ನಪ್ಪಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. 

ಅಂಕುರ್ ಪಾಂಡೆ ಜೊತೆಗಿದ್ದ ಮುನ್ನಾ ಗಿರಿ ಸಹ ಸಾವನ್ನಪ್ಪಿದ್ದು, ಯುವನೋರ್ವ ಈ ಘಟನೆಯಲ್ಲಿ ಗಾಯಗೊಂಡಿದ್ದಾನೆ. ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಗೋರಖ್‌ಪುರಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.
 

Trending News