ದೋಷಯುಕ್ತ ಸಿಎನ್‍ಸಿ ಮಶೀನ್ ಬದಲು ಹೊಸ ಮಶೀನ್ ಕೊಡುವಂತೆ ಕಂಪನಿಗೆ ಕೋರ್ಟ್ ಆದೇಶ

  ಹುಬ್ಬಳ್ಳಿಯ ಗೋಕುಲ್ ರಸ್ತೆಯ ವ್ಯಾಪಾರಿ ಮಹಾಂತೇಶ ಬಾಟ್ಲಿ ಎಂಬುವವರು ಪ್ರತಿಕ್ಷಾ ಇಂಜಿನಿಯರಿಂಗ್ ವಕ್ರ್ಸನ ಮಾಲೀಕರಾಗಿದ್ದಾರೆ. ಅವರು ತಮ್ಮ ಉದ್ಯೋಗಕ್ಕಾಗಿ ಎದುರುದಾರ ಸಿಎನ್‍ಸಿ ಮಶೀನಿನ ಉತ್ಪಾದಕರಾದ ಮಹಾರಾಷ್ಟ್ರ ಸತಾರದ ಅಭಿಜಿತ್ ಇಕ್ವಿಪ್‍ಮೆಂಟ್ಸ್ ಕಂಪನಿಯವರಿಂದ 27/05/2022 ರಂದು ಹೊಸ ಸಿಎನ್‍ಸಿ ಟ್ಯೂನಿಂಗ್ ಮಶೀನ ಖರೀದಿಸಿದ್ದರು. ಅದರ ಬೆಲೆ ರೂ.11 ಲಕ್ಷ ಇತ್ತು. ಆ ಹಣ ಪಡೆದ ಎದುರುದಾರ ದೂರುದಾರರಿಗೆ ಸಿಎನ್‍ಸಿ ಟ್ಯೂನಿಂಗ್ ಮಶೀನ ಪೂರೈಸಿದ್ದರು.

Written by - Zee Kannada News Desk | Last Updated : Jan 21, 2024, 07:41 PM IST
  • ಸದರಿ ಮಶೀನ ಇನ್‍ಸ್ಟಾಲ್ ಮಾಡಿದ ನಂತರ ಅದು ಎದುರುದಾರರು ನೀಡಿದ ಭರವಸೆಯಂತೆ ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ.
  • ಈ ಸಂಗತಿಯನ್ನು ಎದುರುದಾರನಿಗೆ ತಿಳಿಸಿದರೂ ಅವರು ಕ್ಯಾರೆಅನ್ನಲಿಲ್ಲ.
  • 11 ಲಕ್ಷ ಹಣ ಹಿಂದಿರುಗಿಸುವಂತೆ ದೂರುದಾರ ಹಲವಾರು ಬಾರಿ ವಿನಂತಿಸಿದರೂ ಎದುರುದಾರ ಅದಕ್ಕೆ ಯಾವುದೇ ಗಮನ ಕೊಡಲಿಲ್ಲ.
 ದೋಷಯುಕ್ತ ಸಿಎನ್‍ಸಿ ಮಶೀನ್ ಬದಲು ಹೊಸ ಮಶೀನ್ ಕೊಡುವಂತೆ ಕಂಪನಿಗೆ ಕೋರ್ಟ್ ಆದೇಶ title=

ಧಾರವಾಡ:  ಹುಬ್ಬಳ್ಳಿಯ ಗೋಕುಲ್ ರಸ್ತೆಯ ವ್ಯಾಪಾರಿ ಮಹಾಂತೇಶ ಬಾಟ್ಲಿ ಎಂಬುವವರು ಪ್ರತಿಕ್ಷಾ ಇಂಜಿನಿಯರಿಂಗ್ ವಕ್ರ್ಸನ ಮಾಲೀಕರಾಗಿದ್ದಾರೆ. ಅವರು ತಮ್ಮ ಉದ್ಯೋಗಕ್ಕಾಗಿ ಎದುರುದಾರ ಸಿಎನ್‍ಸಿ ಮಶೀನಿನ ಉತ್ಪಾದಕರಾದ ಮಹಾರಾಷ್ಟ್ರ ಸತಾರದ ಅಭಿಜಿತ್ ಇಕ್ವಿಪ್‍ಮೆಂಟ್ಸ್ ಕಂಪನಿಯವರಿಂದ 27/05/2022 ರಂದು ಹೊಸ ಸಿಎನ್‍ಸಿ ಟ್ಯೂನಿಂಗ್ ಮಶೀನ ಖರೀದಿಸಿದ್ದರು. ಅದರ ಬೆಲೆ ರೂ.11 ಲಕ್ಷ ಇತ್ತು. ಆ ಹಣ ಪಡೆದ ಎದುರುದಾರ ದೂರುದಾರರಿಗೆ ಸಿಎನ್‍ಸಿ ಟ್ಯೂನಿಂಗ್ ಮಶೀನ ಪೂರೈಸಿದ್ದರು.

ಸದರಿ ಮಶೀನ ಇನ್‍ಸ್ಟಾಲ್ ಮಾಡಿದ ನಂತರ ಅದು ಎದುರುದಾರರು ನೀಡಿದ ಭರವಸೆಯಂತೆ ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ. ಈ ಸಂಗತಿಯನ್ನು ಎದುರುದಾರನಿಗೆ ತಿಳಿಸಿದರೂ ಅವರು ಕ್ಯಾರೆಅನ್ನಲಿಲ್ಲ. ನಂತರ ದೂರುದಾರ ಧಾರವಾಡದ ಯುನೈಟೆದ ಮಶೀನ್ ಟೂನ್ಸ್ ಹಾಗೂ ಹುಬ್ಬಳ್ಳಿಯ ಸಿ.ಎನ್. ಸಿ. ಸರ್ವಿಸ್ ರವರಿಂದ ಆ ಮಶೀನನ್ನ ಪರೀಕ್ಷೆ ಮಾಡಿಸಿದಾಗ ಅದು ದೋಷಪೂರಿತ ಮಶೀನ್ ಅನ್ನುವುದು ಕಂಡುಬಂತು. ದೋಶಪೂರಿತ ಮಶೀನ್ ವಾಪಸ್ಸು ಪಡೆದು ಬೇರೆ ಮಶೀನ್ ಕೊಡುವಂತೆ ಅಥವಾ ರೂ. 11 ಲಕ್ಷ ಹಣ ಹಿಂದಿರುಗಿಸುವಂತೆ ದೂರುದಾರ ಹಲವಾರು ಬಾರಿ ವಿನಂತಿಸಿದರೂ ಎದುರುದಾರ ಅದಕ್ಕೆ ಯಾವುದೇ ಗಮನ ಕೊಡಲಿಲ್ಲ. ಅಂತಹ ಎದುರುದಾರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕೋರಿ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ.02/11/2023 ರಂದು ಈ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಹಳಸಿದ ಬಾಯಲ್ಲಿ ದಾಲ್ಚಿನ್ನಿ ನೀರು ಕುಡಿಯಿರಿ: ಈ ಕಾಯಿಲೆಗಳಿಗೆ ಪರ್ಮನೆಂಟ್ ರಿಲೀಫ್ ಸಿಗುತ್ತೆ!

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ, ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಸದರಿ ಸಿಎನ್‍ಸಿ ಮಶೀನ ಖರೀದಿಸಿದ ಕೆಲವೇ ದಿನಗಳಲ್ಲಿ ಅದರಲ್ಲಿದೋಷ ಕಂಡುಬಂದಿದೆ. ಆ ಸಂಗತಿಯನ್ನು ಧಾರವಾಡದ ಯುನೈಟೆದ ಮಶೀನ್‍ಟೂನ್ಸ್ ಹಾಗೂ ಹುಬ್ಬಳ್ಳಿಯ ಸಿ.ಎನ್.ಸಿ. ಸರ್ವಿಸ್‍ರವರು ಧೃಡಪಡಿಸಿದ್ದಾರೆ. ಕಾರಣ ಎದುರುದಾರ ದೂರುದಾರರಿಗೆ ಒಳ್ಳೆಯ ಮಶೀನ್ ಕೊಡುವುದಾಗಿ ಸುಳ್ಳು ಭರವಸೆಕೊಟ್ಟು ದೋಷಪೂರಿತ ಮಶೀನ್ ಮಾರಾಟ ಮಾಡಿದ್ದಾರೆ. ಅಂತಹ ಎದುರುದಾರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಜೊತೆ ವ್ಯಾಪಾರದ ಅನುಚಿತ ವರ್ತನೆ ಆಗುತ್ತದೆ ಅಂತ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಇದನ್ನೂ ಓದಿ: Ram Mandir: ರಾಮಮಂದಿರದಿಂದ ತಂದ ಅಕ್ಷತೆಯನ್ನು ಈ 5 ರೀತಿಗಳಲ್ಲಿ ಬಳಸಿ

ಇದರಿಂದ ಗ್ರಾಹಕನಾದ ದೂರುದಾರನಿಗೆ ಮಾನಸಿಕ ತೊಂದರೆ ಮತ್ತು ಆರ್ಥಿಕ ನಷ್ಟ ಉಂಟಾಗಿದೆ ಅಂತಾ ಆಯೋಗ ತೀರ್ಪು ನೀಡಿ ಒಂದು ತಿಂಗಳ ಒಳಗಾಗಿ ಎದುರುದಾರರು ತಾವು ಪೂರೈಸಿದ ಸಿಎನ್‍ಸಿ ಟ್ಯೂನಿಂಗ್ ಮಶೀನ ಮಾಡಲ್ ಇಕೋಟರ್ನ-42 ವಾಪಸ ಪಡೆದು ಹೊಸ ಸಿಎನ್‍ಸಿ ಟ್ಯೂನಿಂಗ್ ಮಶೀನ ದೂರುದಾರರಿಗೆ ಕೊಡಬೇಕು ಅಂತಾ ಆದೇಶಿಸಿದೆ. ಒಂದು ತಿಂಗಳ ಒಳಗಾಗಿ ಎದುರುದಾರರು ಹೊಸ ಮಶೀನ್ ಬದಲಾವಣೆ ಮಾಡಿಕೊಡಲು ವಿಫಲರಾದಲಿ ್ಲಅವರು ಆ ಮಶೀನಿನ ಬೆಲೆ ರೂ.11,04,480/- ಹಾಗೂ ಅದರ ಮೇಲೆ ದಿ.17/09/2022 ರಿಂದ ಶೇ8% ರಂತೆ ಹಣ ಸಂದಾಯವಾಗುವವರೆಗೆ ಬಡ್ಡಿ ಲೆಕ್ಕ ಹಾಕಿದೂರುದಾರರಿಗೆ ಕೊಡುವಂತೆ ನಿರ್ದೇಶಿಸಿದೆ. ದುರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರ/ಉತ್ಪಾದಕರು ರೂ.1 ಲಕ್ಷ ಪರಿಹಾರ ಹಾಗೂ ರೂ.10,000/- ಪ್ರಕರಣದಖರ್ಚು ವೆಚ್ಚ ನೀಡುವಂತೆ ಮಹಾರಾಷ್ಟ್ರ ಸತಾರನ ಅಭಿಜಿತ್ ಇಕ್ವಿಪ್‍ಮೆಂಟ್ಸ್ ಕಂಪನಿಗೆ ಆಯೋಗ ಸೂಚಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News