BY Vijayendra: 'ತಂದೆ ಯಡಿಯೂರಪ್ಪನವರ ಹೆಸರಿಗೆ ಚ್ಯುತಿ ತರುವ ಕೆಲಸ ನಾನು ಮಾಡಿಲ್ಲ'

ನನ್ನನ್ನು ಸೂಪರ್‌ ಸಿಎಂ ಎಂದು ಕರೆಯುವುದರ ಜೊತೆಗೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೇನೆ ಎಂದು ಆರೋಪಿಸುತ್ತಿದ್ದಾರೆ.

Last Updated : Feb 8, 2021, 05:04 PM IST
  • ನಮ್ಮ ಸಮಾಜದ ಜನ ಹಾಗೂ ಶ್ರೀಗಳು ತಲೆ ತಗ್ಗಿಸುವ ರೀತಿ ಎಂದು ನಾನು ಕೆಲಸ ಮಾಡುವುದಿಲ್ಲ
  • ನನ್ನನ್ನು ಸೂಪರ್‌ ಸಿಎಂ ಎಂದು ಕರೆಯುವುದರ ಜೊತೆಗೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೇನೆ ಎಂದು ಆರೋಪಿಸುತ್ತಿದ್ದಾರೆ.
  • ಯಾವುದೇ ಕಾರಣಕ್ಕೂ ನಮ್ಮ ತಂದೆ ಯಡಿಯೂರಪ್ಪನವರಿಗೆ ಚ್ಯುತಿ ಬರುವ ರೀತಿ ಯಾವುದೇ ಕೆಲಸ ಮಾಡುವುದಿಲ್ಲ.
BY Vijayendra: 'ತಂದೆ ಯಡಿಯೂರಪ್ಪನವರ ಹೆಸರಿಗೆ ಚ್ಯುತಿ ತರುವ ಕೆಲಸ ನಾನು ಮಾಡಿಲ್ಲ' title=

ರಾಮನಗರ: ‘ನಮ್ಮ ಸಮಾಜದ ಜನ ಹಾಗೂ ಶ್ರೀಗಳು ತಲೆ ತಗ್ಗಿಸುವ ರೀತಿ ಎಂದು ನಾನು ಕೆಲಸ ಮಾಡುವುದಿಲ್ಲ. ನನ್ನನ್ನು ಸೂಪರ್‌ ಸಿಎಂ ಎಂದು ಕರೆಯುವುದರ ಜೊತೆಗೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೇನೆ ಎಂದು ಆರೋಪಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ತಂದೆ ಯಡಿಯೂರಪ್ಪನವರಿಗೆ ಚ್ಯುತಿ ಬರುವ ರೀತಿ ಯಾವುದೇ ಕೆಲಸ ಮಾಡುವುದಿಲ್ಲ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ನಡೆದ 3ನೇ ವರ್ಷದ ಸಿದ್ದಲಿಂಗೇಶ್ವರ ಜಯಂತೋತ್ಸವ ಹಾಗೂ ಡಾ. ಶಿವಕುಮಾರ ಸ್ವಾಮೀಜಿಗಳ 2ನೇ ವರ್ಷದ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ (BY Vijayendra). ಸೂಪರ್‌ ಸಿಎಂ ಎಂದು ನನ್ನನ್ನು ಕರೆಯುತ್ತಿದ್ದು, ಆಡಳಿತದಲ್ಲಿ ನನ್ನ ಹಸ್ತಕ್ಷೇಪ ಇದೆ ಎಂಬ ಆರೋಪ ಮಾಡಿದ್ದಾರೆ. 2012ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಷಡ್ಯಂತ್ರ ಮಾಡಿ ರಾಜೀನಾಮೆ ಕೊಡಿಸಿ ಕೆಲವರು ನಮ್ಮ ತಂದೆಗೆ ಕೆಟ್ಟಹೆಸರು ಬರುವ ರೀತಿ ಮಾಡಿದರು. ಯಡಿಯೂರಪ್ಪ ಅವ​ರ​ನ್ನು ಷಡ್ಯಂತ್ರದಿಂದ ಹೊರತರಲು ಅವರ ಬೆನ್ನಿಗೆ ನಿಂತಿದ್ದೆ ಎಂದು ತಿಳಿಸಿದರು.

Siddaramaiah: ಸಿದ್ದರಾಮಯ್ಯ ಒಬ್ಬ ಡಕೋಟಾ: ಟಗರಿಗೆ ತಿರುಗೇಟು ನೀಡಿದ ಸಚಿವ

ಯಡಿಯೂರಪ್ಪ(BS Yediyurappa) ಅವರನ್ನು 30ಕ್ಕೂ ಹೆಚ್ಚು ಕ್ರಿಮಿನಲ್‌ ಕೇಸ್‌ಗಳಲ್ಲಿ ಸಿಲುಕಿಸಿದ್ದರು. ಕೋರ್ಟ್‌ಗಳಲ್ಲಿ ಯಡಿಯೂರಪ್ಪನವರನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ. ಶ್ರೀಗಳ ಆಶೀರ್ವಾದದಿಂದ ಯಡಿಯೂರಪ್ಪನವರ ಮೇಲಿದ್ದ ಎಲ್ಲಾ ಕೇಸ್‌ಗಳು ಖುಲಾಸೆಯಾಗಿದೆ ಎಂದು ಹೇಳಿ​ದರು.

Maneka Gandhi: ಮೇನಕಾ ಗಾಂಧಿಗೆ ನೋಟಿಸ್ ನೀಡಿದ ಮೈಸೂರು ಕೋರ್ಟ್‌..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News