ಅಪಘಾತದಲ್ಲಿ ಜಖಂ ಆದ RENAULT KWID CAR ಗೆ ನ್ಯೂ ಇಂಡಿಯಾ ಅಸುರೆನ್ಸ್ ಕಂಪನಿಯಿಂದ ರೂ.3 ಲಕ್ಷ ಬಡ್ಡಿ ಸಮೇತ ಕೊಡಲು ಆಯೋಗದ ಆದೇಶ

ಧಾರವಾಡ ಬಸವ ನಗರದ ಶ್ರೀ. ವಿನಯ ಕ್ಷತ್ರಿಯ ಇವರು ತಮ್ಮ ಸ್ವಂತ ಕೆಲಸಕ್ಕಾಗಿ RENAULT KWID CAR ಖರೀದಿಸಿ ಅದಕ್ಕೆ ಎದುರುದಾರರ ಬಳಿ ರೂ.6,750/- ಹಣ ಪಾವತಿಸಿ ವಿಮೆಯನ್ನು ಪಡೆದಿದ್ದರು. ಆ ವಿಮೆಯಲ್ಲಿ ವಾಹನದ ಆಯ್.ಡಿ. ಮೌಲ್ಯ ರೂ.3 ಲಕ್ಷ ಅಂತಾ ನಮೂದಿಸಿತ್ತು.

Written by - Manjunath N | Last Updated : May 23, 2024, 03:34 PM IST
  • ಸದರಿ ದೂರಿನ ಬಗ್ಗೆ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು.ಸಿ.ಹಿರೇಮಠ ಸದಸ್ಯರು, ಕೂಲಂಕುಷವಾಗಿ ವಿಚಾರಣೆ ನಡೆಸಿದರು.
  • ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಧಾರವಾಡದ ದಿ ನ್ಯೂ ಇಂಡಿಯಾ ಅಸುರೆನ್ಸ್ ಕಂಪನಿಗೆ ಆಯೋಗ ಆದೇಶಿಸಿದೆ.
ಅಪಘಾತದಲ್ಲಿ ಜಖಂ ಆದ RENAULT KWID CAR ಗೆ ನ್ಯೂ ಇಂಡಿಯಾ ಅಸುರೆನ್ಸ್ ಕಂಪನಿಯಿಂದ ರೂ.3 ಲಕ್ಷ ಬಡ್ಡಿ ಸಮೇತ ಕೊಡಲು ಆಯೋಗದ ಆದೇಶ title=

ಧಾರವಾಡ: ಧಾರವಾಡ ಬಸವ ನಗರದ ಶ್ರೀ. ವಿನಯ ಕ್ಷತ್ರಿಯ ಇವರು ತಮ್ಮ ಸ್ವಂತ ಕೆಲಸಕ್ಕಾಗಿ RENAULT KWID CAR ಖರೀದಿಸಿ ಅದಕ್ಕೆ ಎದುರುದಾರರ ಬಳಿ ರೂ.6,750/- ಹಣ ಪಾವತಿಸಿ ವಿಮೆಯನ್ನು ಪಡೆದಿದ್ದರು. ಆ ವಿಮೆಯಲ್ಲಿ ವಾಹನದ ಆಯ್.ಡಿ. ಮೌಲ್ಯ ರೂ.3 ಲಕ್ಷ ಅಂತಾ ನಮೂದಿಸಿತ್ತು.

ದಿ:31/05/2022 ರಂದು ವಾಹನವು ಧಾರವಾಡ ಉದಯ ಹಾಸ್ಟೇಲ್ ಬಳಿ ಅಪಘಾತಕ್ಕೀಡಾಗಿ ದೂರುದಾರರು ಪಾಲಸಿಯ ನಿಯಮದಂತೆ ಕಾರಿನ ರಿಪೇರಿಗಾಗಿ ಎದುರುದಾರರ ಬಳಿ ಎಲ್ಲ ದಾಖಲೆಗಳನ್ನು ಪಾವತಿಸಿದ್ದರು. ಎದುರುದಾರರು ಅಪಘಾತ ಸಮಯದಲ್ಲಿ ವಾಹನವನ್ನು ಮಧ್ಯ ಸೇವಿಸಿ ಚಲಾಯಿಸಿದ್ದಾರೆ ಅಂತಾ ಹೇಳಿ ವಿಮಾ ಹಣವನ್ನು ಕೊಡಲು ನಿರಾಕರಿಸಿದ್ದರು.

ಇದನ್ನೂ ಓದಿ: ಪ್ರಜ್ವಲ್‌ ತಪ್ಪು ಮಾಡಿಲ್ಲ ಅಂದ್ರೆ ಬಂದು ಎಸ್ಐಟಿಗೆ ಸಹಕಾರ ನೀಡು

ವಿಮಾ ಕಂಪನಿಗೆ ಹಲವು ಬಾರಿ ವಿಮೆ ಹಣವನ್ನು ಪಾವತಿಸಲು ಕೇಳಿಕೊಂಡರೂ ಎದುರುದಾರರು ತಮಗೆ ವಿಮಾ ಹಣ ಅಥವಾ ಪರಿಹಾರ ಕೊಟ್ಟಿಲ್ಲ ಅಂತಹ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:03/06/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಮೋದಿ ಅಲೆ ಕಾಣಲಿಲ್ಲ, ಎಲ್ಲೆಡೆ ಇರೋದು ಗ್ಯಾರಂಟಿ ಅಲೆ.. 20 ಸ್ಥಾನದಲ್ಲಿ ಗೆಲುವು ಖಚಿತ: ಈಶ್ವರ ಖಂಡ್ರೆ

ಸದರಿ ದೂರಿನ ಬಗ್ಗೆ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು.ಸಿ.ಹಿರೇಮಠ ಸದಸ್ಯರು, ಕೂಲಂಕುಷವಾಗಿ ವಿಚಾರಣೆ ನಡೆಸಿದರು. ದೂರುದಾರರು ಕೊಟ್ಟಂತಹ ದಾಖಲೆಗಳನ್ನು ಪರಿಶೀಲಿಸಿದಾಗ ಅಪಘಾತವಾದ ಸಮಯದಲ್ಲಿ ದೂರುದಾರನು ಮಧ್ಯ ಸೇವಿಸಿ ವಾಹನ ಚಲಾಯಿಸಿಲ್ಲ ಅನ್ನುವ ವಿಷಯ ಸ್ಪಷ್ಟವಾಗಿರುತ್ತದೆ ಮತ್ತು ಪ್ರಥಮ ವರ್ತಮಾನ ವರದಿಯಲ್ಲಿ ಇದರ ಬಗ್ಗೆ ಹೇಳಿಕೆಯಿಲ್ಲದೇ ಇರುವುದು ಕಂಡು ಬಂದದ್ದರಿಂದ ದೂರುದಾರರು ಕೇಳಿದಂತಹ ವಿಮಾ ಹಣ ರೂ.3 ಲಕ್ಷ ಪಡೆಯಲು ಅರ್ಹರಿದ್ದಾರೆಂದು ಆಯೋಗವು ಅಭಿಪ್ರಾಯ ಪಟ್ಟಿದೆ. ಜೊತೆಗೆ ಅವರು ಅನುಭವಿಸಿದ ಮಾನಸಿಕ ಹಿಂಸೆ ಹಾಗೂ ಅನಾನುಕೂಲತೆಗೆ ರೂ.50,000/- ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಧಾರವಾಡದ ದಿ ನ್ಯೂ ಇಂಡಿಯಾ ಅಸುರೆನ್ಸ್ ಕಂಪನಿಗೆ ಆಯೋಗ ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News