PSI Recruitment Scam: ಬಿಜೆಪಿ ಸರ್ಕಾರ 50 ಸಾವಿರ ಯುವಕರ ‘ಜೀವನದ ಕೊಲೆ’ ಮಾಡಿದೆ- ಕಾಂಗ್ರೆಸ್

‘PSI Scam ಎಂಬ ಪದ ಕಿವಿಗೆ ಬಿದ್ದಾಕ್ಷಣ ಹೌಹಾರುತ್ತಿರುವ CN ಅಶ್ವತ್ಥ್ ನಾರಾಯಣ್ ಅವರೇ ಕಾಲದ ಮುಳ್ಳು ನಿಮ್ಮತ್ತಲೇ ತಿರುಗಿ ನಿಲ್ಲುವ ಸೂಕ್ಷ್ಮ ಸಿಕ್ಕಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Jul 15, 2022, 03:41 PM IST
  • ರಾಜ್ಯದ ಬಿಜೆಪಿ ಸರ್ಕಾರದಿಂದ ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ರಾಜ್ಯದ 50 ಸಾವಿರ ಯುವಕರ 'ಜೀವನದ ಕೊಲೆ'
  • PSI ಹಗರಣದಲ್ಲಿ 'ಅಕ್ರಮ ನಡದೇ ಇಲ್ಲ' ಎನ್ನುತ್ತಿದ್ದವರು ಈಗ 'ಪ್ರಾಮಾಣಿಕ ತನಿಖೆ ನಮ್ಮದು' ಎನ್ನುತ್ತಿದ್ದಾರೆ
  • PSI Scam ಸಮಾಜದ ಮೇಲಿನ ಭಯೋತ್ಪಾದಕ ದಾಳಿ ಇದ್ದಂತೆ ಎಂದು ಗಂಭೀರ ಆರೋಪ ಮಾಡಿದ ಕಾಂಗ್ರೆಸ್
PSI Recruitment Scam: ಬಿಜೆಪಿ ಸರ್ಕಾರ 50 ಸಾವಿರ ಯುವಕರ ‘ಜೀವನದ ಕೊಲೆ’ ಮಾಡಿದೆ- ಕಾಂಗ್ರೆಸ್ title=
ಬಿಜೆಪಿ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ

ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರವು ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ರಾಜ್ಯದ 50 ಸಾವಿರ ಯುವಕರ 'ಜೀವನದ ಕೊಲೆ' ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಈ ಕೊಲೆಗೆ ಅಂದಿನ ಗೃಹಸಚಿವರೇ ಹೊಣೆ’ ಎಂದು ಕಿಡಿಕಾರಿದೆ.

‘#PSIScam ಹಗರಣ ಹೊರಬರುವ ಮೊದಲು 'ಅಕ್ರಮ ನಡದೇ ಇಲ್ಲ' ಎನ್ನುತ್ತಿದ್ದವರು ಈಗ 'ಪ್ರಾಮಾಣಿಕ ತನಿಖೆ ನಮ್ಮದು' ಎನ್ನುತ್ತಿದ್ದಾರೆ. ಕಾಂಗ್ರೆಸ್ ಹೋರಾಡದಿದ್ದರೆ ಈ ತಪ್ಪೊಪ್ಪಿಗೆಯ ಹಂತಕ್ಕೆ ಬಿಜೆಪಿ ಬರುತ್ತಿರಲಿಲ್ಲ. ಅಮೃತ್ ಪೌಲ್, ಶಾಂತಕುಮಾರ್ ಅವರ ಹೇಳಿಕೆಯನ್ನು ನ್ಯಾಯಾಧೀಶರೆದುರು ದಾಖಲಿಸಿ 'ಪ್ರಾಮಾಣಿಕ ತನಿಖೆ'ಯನ್ನು ಸಾಬಿತುಪಡಿಸಲಿ’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಇದನ್ನೂ ಓದಿ: Idgah Maidan Issue : ಈದ್ಗಾ ಮೈದಾನ ಭೂ ವಿವಾದ : ಹೋರಾಟಕ್ಕೆ ಸಂಸದ ಪಿಸಿ ಮೋಹನ್ ಎಂಟ್ರಿ

‘#PSIScam ಸಮಾಜದ ಮೇಲಿನ ಭಯೋತ್ಪಾದಕ ದಾಳಿ ಇದ್ದಂತೆ. PSI ಹಗರಣದ ಆಳ, ಅಗಲವನ್ನು ಹಾಗೂ ಅದರ ಹಾನಿಯನ್ನು ವಿವರಿಸಲು ಹೈಕೋರ್ಟ್ ನ್ಯಾಯಾಧೀಶರ ಇದೊಂದು ಮಾತು ಸಾಕು. ಇಂತಹ 'ಭೀಕರ' ಹಗರಣ ನಡೆದೇ ಇಲ್ಲವೆಂದು ಪ್ರತಿಪಾದಿಸಿದ್ದ ಸರ್ಕಾರ ಈಗ ತನಿಖೆಯನ್ನು ಹಳ್ಳ ಹಿಡಿಸಲು ಯತ್ನಿಸುತ್ತಿದೆ. #PSIScam ಬಿಜೆಪಿ ಪ್ರಾಯೋಜಿತ ಭಯೋತ್ಪಾದಕ ದಾಳಿ’ ಎಂದು ಕಾಂಗ್ರೆಸ್ ಟೀಕಿಸಿದೆ.

‘#PSIScam ಕೊಲೆಗಿಂತಲೂ ಮಿಗಿಲಾದದ್ದು, ಕೊಲೆಯಾದರೆ ಒಬ್ಬನ ಪ್ರಾಣ ಹೋಗುತ್ತದೆ, ಇಲ್ಲಿ 50,000 ಜನ ತೊಂದರೆಗೆ ಸಿಲುಕಿದ್ದಾರೆ ಎಂದು ನ್ಯಾಯಾಧೀಶರೇ ಹೇಳಿದ್ದಾರೆ. ಜೀವದ ಕೊಲೆಯಂತೆಯೇ ಜೀವನದ ಕೊಲೆಯೂ ಭೀಕರವಾದುದು. ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ರಾಜ್ಯದ 50,000 ಯುವಕರ 'ಜೀವನದ ಕೊಲೆ' ಮಾಡಿದೆ ಬಿಜೆಪಿ ಸರ್ಕಾರ. ಈ ಕೊಲೆಗೆ ಅಂದಿನ ಗೃಹಸಚಿವರೇ ಹೊಣೆ’ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ 2 ದಿನ ಸ್ಪೋಕನ್ ಇಂಗ್ಲೀಷ್ ತರಗತಿ..!

‘'ಪಾರದರ್ಶಕ ತನಿಖೆ' ನಡೆಯುತ್ತಿದೆ ಎಂದು ಹಾದಿ ಬೀದಿಯಲ್ಲಿ ಹೇಳಿಕೊಂಡು ಸಿಎಂ ಬಸವರಾಜ್ ಬೊಮ್ಮಾಯಿ ತಿರುಗುತ್ತಿದ್ದಾರೆ. ಹೈಕೋರ್ಟ್ ನಿಮ್ಮ 'ಪ್ರಾಮಾಣಿಕ ತನಿಖೆ'ಯನ್ನು ಪ್ರಶ್ನಿಸುತ್ತಿದೆ. ಈಗ ಉತ್ತರ ಹೇಳಿ, 10 ದಿನಗಳಾದರೂ ಅಮೃತ್ ಪೌಲ್‌ರ ಹೇಳಿಕೆಯನ್ನು ನ್ಯಾಯಾಲಯ ಮುಂದೆ ದಾಖಲಿಸಲು ಭಯಪಡುತ್ತಿರುವುದೇಕೆ? ಸರ್ಕಾರದ ಮಿಕಗಳು ಬಲೆಗೆ ಬೀಳುವ ಭಯವೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘#PSIScam ಎಂಬ ಪದ ಕಿವಿಗೆ ಬಿದ್ದಾಕ್ಷಣ ಹೌಹಾರುತ್ತಿರುವ ಹಾಗೂ ಪ್ರಯತ್ನಪೂರ್ವಕವಾಗಿ ನಕಲಿ ಆತ್ಮವಿಶ್ವಾಸ ಪ್ರದರ್ಶಿಸಲು ಹೆಣಗುತ್ತಿರುವ ಅಶ್ವತ್ಥ್ ನಾರಾಯಣ್ ಅವರೇ, ಕಾಲದ ಮುಳ್ಳು ನಿಮ್ಮತ್ತಲೇ ತಿರುಗಿ ನಿಲ್ಲುವ ಸೂಕ್ಷ್ಮ ಸಿಕ್ಕಿದೆಯೇ? ಕದ್ದವನು ಮಾತ್ರ ಪ್ರಮಾಣಿಕನ ಸೋಗು ಹಾಕಲು ಯತ್ನಿಸುತ್ತಾನೆ. ಅಂತೆಯೇ  ತಾವು ಯಾಕಿಷ್ಟು ಗಾಬರಿಯಲ್ಲಿದ್ದೀರಿ?’ ಎಂದು ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News