ಲಂಚಕ್ಕೆ ಬೇಡಿಕೆ: ಬಿಎಂಟಿಸಿಯಲ್ಲಿ 7 ಭ್ರಷ್ಟ ಅಧಿಕಾರಿಗಳು ಸಸ್ಪೆಂಡ್!

BMTC Officials Suspended: ಡಿಪೋ ನಂ.27ರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಮೇಲ್ವಿಚಾರಕಿ, ಕಿರಿಯ ಸಹಾಯಕರು ಸೇರಿದಂತೆ 7 ಜನ ಅಧಿಕಾರಿಗಳು ಅಮಾನತು ಆಗಿದ್ದಾರೆ. 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ‌ ಬಿಎಂಟಿಸಿ ಎಂಡಿ ಆದೇಶಿಸಿದ್ದಾರೆ.

Written by - Puttaraj K Alur | Last Updated : Jan 13, 2024, 02:12 PM IST
  • ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಬಿಎಂಟಿಸಿ
  • ಚಾಲಕ, ನಿರ್ವಾಹಕರ ಬಳಿ ಲಂಚಾವತಾರ ನಡೆಸುತ್ತಿದ್ದ ಡಿಪೋ ಮ್ಯಾನೇಜರ್‌ ಗಳು
  • 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ‌ ಆದೇಶ ಹೊರಡಿಸಿದ ಬಿಎಂಟಿಸಿ ಎಂಡಿ
ಲಂಚಕ್ಕೆ ಬೇಡಿಕೆ: ಬಿಎಂಟಿಸಿಯಲ್ಲಿ 7 ಭ್ರಷ್ಟ ಅಧಿಕಾರಿಗಳು ಸಸ್ಪೆಂಡ್! title=
7 ಭ್ರಷ್ಟ ಅಧಿಕಾರಿಗಳು ಸಸ್ಪೆಂಡ್!

ಬೆಂಗಳೂರು: ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಅಧಿಕಾರಿಗಳಿಗೆ ಬಿಎಂಟಿಸಿ ಬಿಸಿ ಮುಟ್ಟಿಸಿದೆ. ಚಾಲಕ, ನಿರ್ವಾಹಕರ ಬಳಿ ಲಂಚಾವತಾರ ನಡೆಸುತ್ತಿದ್ದ ಡಿಪೋ ಮ್ಯಾನೇಜರ್‍ಗಳಿಗೆ ಶಾಕ್ ವುಂಟಾಗಿದೆ. ನೌಕರರು ರಜೆ ಬೇಕು ಅಂದ್ರೆ ಬಿಎಂಟಿಸಿ ಅಧಿಕಾರಿಗಳಿಗೆ ಲಂಚ ಕೊಡಲೇಬೇಕಾಗಿತ್ತು. ಬೇಕಾದ ರೂಟ್, ರಜೆ, ಶಿಫ್ಟ್ ಬೇಕಾದ್ರೆ ಡಿಪೋ ಅಧಿಕಾರಿಗಳ ಜೇಬು ತುಂಬಿಸಬೇಕಿತ್ತು. ಸಾಕಷ್ಟು ದಿನಗಳಿಂದ ಈ ಲಂಚದ ಆರೋಪ ಕೇಳಿಬಂದಿತ್ತು.

ಇದೀಗ ನೌಕರರ ಬಳಿ ಲಂಚ ತೆಗೆದುಕೊಂಡಿದ್ದ ಅಧಿಕಾರಿಗಳ ತಲೆದಂಡವಾಗಿದೆ. ಬರೋಬ್ಬರಿ 7 ಜನ ಅಧಿಕಾರಿಗಳನ್ನು ಅಮಾನತುಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ. ಬಿಎಂಟಿಸಿಯ 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ‌ ಬಿಎಂಟಿಸಿ ಎಂಡಿ ಆದೇಶಿಸಿದ್ದಾರೆ. ವಿಚಾರಣಾ ಇತ್ಯರ್ಥಪೂರ್ವ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಸಿಬ್ಬಂದಿ ಮೇಲ್ವಿಚಾರಕಿ, ಕಿರಿಯ ಸಹಾಯಕರು ಸೇರಿದಂತೆ 7 ಜನ ಅಧಿಕಾರಿಗಳು ಅಮಾನತು ಆಗಿದ್ದಾರೆ. ಡಿಪೋ ನಂ.27ರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ಶಾಕ್ ಉಂಟಾಗಿದೆ.

ಇದನ್ನೂ ಓದಿ: ಉಚಿತ ಯೋಜನೆ ಎಂಬ ತಪ್ಪು ಕಲ್ಪನೆ ಬೇಡ; ನಾವು ವಚನ ಪಾಲಕರು ಎಂದ ಸಿಎಂ ಸಿದ್ದರಾಮಯ್ಯ

ಯಾವ ಅಧಿಕಾರಿಗಳು ಅಮಾನತ್ತು?

ಡಿಪೋ ನಂ.27ರ 7 ವಿವಿಧ ಹುದ್ದೆಯಲ್ಲಿದ್ದ ಅಧಿಕಾರಿಗಳು ಅಮಾನತು

1. ಮಂಜುಳಾ.ಆರ್- ಸಿಬ್ಬಂದಿ ಮೇಲ್ವಿಚಾರಕಿ

2. ಪ್ರೀತಮ್ - ಕಿರಿಯ ಸಹಾಯಕ

3. ಮನೋಜ್ ಕುಮಾರ್ ಎಲ್.ಎಸ್- ಕಿರಿಯ ಸಹಾಯಕ

4. ಧನಂಜಯ್.ವಿ - ಸಹಾಯಕ ಲೆಕ್ಕಿಗ

5. ಸುಮ.ಎ - ಕಿರಿಯ ಸಹಾಯಕಿ

6. ಶಾಂತವ್ವ - ಕಿರಿಯ ಸಹಾಯಕಿ

7. ದೇವರಾಜ್.ಜಿ - ಸಹಾಯಕ ಕುಶಲಕರ್ಮಿ

ಆಗಿದ್ದೇನು..?

  • ರೂಟ್ ಬೇಕು, ರಜೆ ಬೇಕು, ಬೇಕಾದ ಶಿಫ್ಟ್ ಹಾಕಿಸಿಕೊಳ್ಳಬೇಕು ಅಂದ್ರೆ ಅಧಿಕಾರಿಗಳಿಗೆ ಲಂಚ ಕೊಡಬೇಕಿತ್ತು
  • ಇದರ ವಿರುದ್ದ ಸಾಕ್ಷಿ ಸಮೇತ ವರದಿ ಬಿತ್ತರಿಸಿದ್ದ ಮಾಧ್ಯಮಗಳು
  • ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡು ತನಿಖೆಗೆ ಆದೇಶಿಸಿದ್ದ ಅಂದಿನ ಬಿಎಂಟಿಸಿ ಎಂಡಿ ಸತ್ಯವತಿ
  • ತನಿಖೆ ವೇಳೆ ಅಧಿಕಾರಿಗಳು ಹಣ ಪಡೆದಿರುವುದು ಸಾಬೀತಾಗಿತ್ತು
  • ತಮ್ಮ ಉಳಿತಾಯ ಖಾತೆಗೆ ಪೋನ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದ ಅಧಿಕಾರಿಗಳು
  • ಡಿಜಿಟಲ್ ಹಣ ವ್ಯವಹಾರ ಮಾಡಿದ್ದ ಅಧಿಕಾರಿಗಳನ್ನು ಅಮಾನತುಗೊಳಿಸಿ ಬಿಎಂಟಿಸಿ ಆದೇಶಿಸಿದೆ

ಇದನ್ನೂ ಓದಿ: ಕರ್ನಾಟಕದಲ್ಲಿ ಮಹಿಳೆಯರ ಸುರಕ್ಷತೆಗೆ ಯಾವುದೇ ಗ್ಯಾರಂಟಿ ಇಲ್ಲ: ಬಿಜೆಪಿ ಆಕ್ರೋಶ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News