Ration Card : ಪಡಿತರ ಚೀಟಿದಾರರಿಗೊಂದು ಗುಡ್ ನ್ಯೂಸ್..!

 ರಾಜ್ಯದ ಕರಾವಳಿ ಭಾಗದ  ಪಡಿತರದಾರರಿಗೆ ನವೆಂಬರ್ ತಿಂಗಳಿಂದ 'ಕೆಂಪು ಕುಚ್ಚಲಕ್ಕಿ'

Last Updated : May 27, 2021, 06:45 PM IST
  • ಪಡಿತರದಾರರಿಗೆ ನವೆಂಬರ್ ತಿಂಗಳಿಂದ 'ಕೆಂಪು ಕುಚ್ಚಲಕ್ಕಿ'
  • ರಾಜ್ಯದ ಕರಾವಳಿ ಭಾಗದ ಪಡಿತರದಾರರಿಗೆ ನವೆಂಬರ್ ತಿಂಗಳಿಂದ 'ಕೆಂಪು ಕುಚ್ಚಲಕ್ಕಿ'
  • ಇಂದು ಆಹಾರ ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ
Ration Card : ಪಡಿತರ ಚೀಟಿದಾರರಿಗೊಂದು ಗುಡ್ ನ್ಯೂಸ್..! title=

ಬೆಂಗಳೂರು : ರಾಜ್ಯದ ಕರಾವಳಿ ಭಾಗದ ಪಡಿತರದಾರರಿಗೆ ನವೆಂಬರ್ ತಿಂಗಳಿಂದ 'ಕೆಂಪು ಕುಚ್ಚಲಕ್ಕಿ' ವಿತರಿಸಲಾಗುತ್ತದೆ  ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಇಂದು ಆಹಾರ ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ  ಸಚಿವ ಶ್ರೀನಿವಾಸ ಪೂಜಾರಿ(Kota Shrinivas Poojari), ಪಡಿತರಿಗೆ ಕೆಂಪು ಕುಚ್ಚಲಕ್ಕಿಯನ್ನ ವಿತರಿಸುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರ ಬೇಡಿಕೆ‌ ಇತ್ತು. ಪಡಿತರದಲ್ಲಿ ನೀಡುವ ಸಾಮಾನ್ಯ ಅಕ್ಕಿ ಊಟ ಮಾಡಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ತಯಾರಾಗುವ ಕೆಂಪು ಕುಚ್ಚಲಕ್ಕಿ ಬೇಕು ಅಂತ ಜನ ಬೇಡಿಕೆ ಇತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ : Cabinet Meeting : ಜಿಂದಾಲ್‌ ಗೆ ನೀಡಿದ್ದ 3667 ಎಕರೆ ಜಮೀನು ವಾಪಸ್ ಪಡೆಯಲು ಸರ್ಕಾರ ನಿರ್ಧಾರ!

ಈ ಭಾಗದಲ್ಲಿ ಸಾಮಾನ್ಯ ಅಕ್ಕಿಯನ್ನ ಹಲವರು ಪಡಿತರು ಪಡೆಯದೆ, ಅಕ್ಕಿ(Rice)ಯನ್ನ ಬೇರೆಯವರಿಗೆ ಮಾರಾಟ ಮಾಡುತ್ತಾರೆ ಎಂಬ ದೂರುಗಳು ಬಂದಿವೆ. ಈ ಕುರಿತು ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇವೆ. ಆಹಾರ ಸಚಿವರ ಜೊತೆಗೂ ಸಭೆ ಮಾಡಲಾಗಿದೆ. MO4, ಜ್ಯೋತಿ, ಅಭಿಲಾಷ, ಜಯ ತಳಿಯ ಅಕ್ಕಿ ಪಡೆಯಲು ಕೇಂದ್ರದ ಅನುಮತಿ ಬೇಕಿದೆ. ಕರಾವಳಿ ಜಿಲ್ಲೆಯ ಕೆಂಪು ಕುಚ್ಚಲಕ್ಕಿ ಬೇಡಿಕೆಯನ್ನು ಈ ಮೂಲಕ ಈಡೇರಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ : Siddaramaiah : '2023 ರ ಎಲೆಕ್ಷನ್ ನಲ್ಲಿ ಸ್ಪರ್ಧಿಸುತ್ತೇನೆ, ಆದ್ರೆ, ಯಾವ ಮತ ಕ್ಷೇತ್ರ ಅಂತ ನಿರ್ಧರಿಸಿಲ್ಲ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News