ನನ್ನನ್ನು ಬಿಜೆಪಿ ಜೊತೆ ಕಳುಹಿಸಿದವರೇ ಹೆಚ್.ಡಿ. ಕುಮಾರಸ್ವಾಮಿ: ಜಿಟಿಡಿ ಹೊಸ ಬಾಂಬ್

ಜೆಡಿಎಸ್ ಪಕ್ಷದ ನಾಯಕ ಜಿ.ಟಿ. ದೇವೇಗೌಡ ಇತ್ತೀಚೆಗೆ ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಮಾತ್ರವಲ್ಲದೆ, ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

Last Updated : Sep 16, 2019, 09:55 AM IST
ನನ್ನನ್ನು ಬಿಜೆಪಿ ಜೊತೆ ಕಳುಹಿಸಿದವರೇ ಹೆಚ್.ಡಿ. ಕುಮಾರಸ್ವಾಮಿ: ಜಿಟಿಡಿ ಹೊಸ ಬಾಂಬ್ title=

ಮೈಸೂರು: ತಾನು ಬಿಜೆಪಿ ನಾಯಕರ ಜೊತೆ ಇರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರೇ ಕಾರಣ. ನನ್ನನ್ನು ಬಿಜೆಪಿ ಜೊತೆ ಕಳುಹಿಸಿದವರೇ ಹೆಚ್‌ಡಿಕೆ ಎಂದು ಜೆಡಿಎಸ್ ಪಕ್ಷದ ನಾಯಕ ಜಿ.ಟಿ. ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ. ದೇವೇಗೌಡ, ನನ್ನನ್ನು ಬಿಜೆಪಿ ನಾಯಕರ ಜೊತೆಗೆ ಕಳುಹಿಸಿದವರೇ ಹೆಚ್.ಡಿ.ಕುಮಾರಸ್ವಾಮಿ. ಹೆಚ್‌ಡಿಕೆ ನೀಡಿರುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ವ್ಯಂಗ್ಯವಾಡಿದರು. ಅಲ್ಲದೇ, ಲೋಕಸಭಾ ಚುನಾವಣೆ ವೇಳೆಯೇ ಅವರನ್ನು ನನ್ನನು ಬಿಜೆಪಿ ಜತೆ ಕಳುಹಿಸಿದ್ದರು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಗಮನಾರ್ಹವಾಗಿ ಜಿ.ಟಿ. ದೇವೇಗೌಡ ಇತ್ತೀಚೆಗೆ ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಮಾತ್ರವಲ್ಲದೆ, ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಜಿಟಿಡಿ ಅವರನ್ನು ಪ್ರಶ್ನಾತೀತ ನಾಯಕ ಎಂದಿದ್ದ ಜೆಡಿಎಸ್‌ನ ಮತ್ತೋರ್ವ ನಾಯಕ ಸಾ.ರಾ. ಮಹೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಸಾ.ರಾ. ಮಹೇಶ್ ಇನ್ನೂ ಯುವಕರು. ಅವರ ಏಳಿಗೆಗೆ ನಾನು ಅಡ್ಡಗಾಲು ಹಾಕುವುದಿಲ್ಲ. ಕುಮಾರಣ್ಣನನ್ನು ಬಿಟ್ಟರೆ ಅವರೇ ನಾಯಕರು. ಅವರಿಗೆ ಭವಿಷ್ಯವಿದೆ. ಅವರು ಚೆನ್ನಾಗಿ ಬೆಳೆಯಲಿ ಎಂದು ಲೇವಡಿ ಮಾಡಿದರು.

Trending News