KCET ಪರೀಕ್ಷಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಶುರು: ಈ ದಿನದಂದು ಹೊರಬೀಳಲಿದೆ ರಿಸಲ್ಟ್!

KCET 2023: ಮೇ 20 ಮತ್ತು 22 ರಂದು ನಡೆದ ಕರ್ನಾಟಕ ಸಿಇಟಿಯಲ್ಲಿ ಈ ಬಾರಿ ಒಟ್ಟು 2.60 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರೆ, 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 1.4 ಲಕ್ಷ ಹುಡುಗಿಯರು ಮತ್ತು 1.21 ಲಕ್ಷ ಹುಡುಗರು ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡಿದ್ದಾರೆ..

Written by - Bhavishya Shetty | Last Updated : Jun 12, 2023, 07:59 AM IST
    • ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನ ಜೂನ್ 12 ರಂದು ಘೋಷಿಸಲು ಯೋಜಿಸಿತ್ತು
    • ಇದೀಗ ಜೂನ್ 14 ರಂದು ರಿಸಲ್ಟ್ ಹೊರಬೀಳಲಿದೆ ಎಂದು ಕೆಇಎ ಮೂಲವು ಮಾಧ್ಯಮಗಳಿಗೆ ತಿಳಿಸಿದೆ
    • ಮೊದಲ ಬಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಎಸ್ಸಿ ನರ್ಸಿಂಗ್ ಕೋರ್ಸ್‌ ಗಳಿಗೆ ಸಿಇಟಿಯನ್ನು ನಡೆಸಿತ್ತು.
KCET ಪರೀಕ್ಷಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಶುರು: ಈ ದಿನದಂದು ಹೊರಬೀಳಲಿದೆ ರಿಸಲ್ಟ್!  title=
KCET

KCET 2023: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು (ಕೆಸಿಇಟಿ) ಜೂನ್ 12 ರಂದು ಘೋಷಿಸಲು ಯೋಜಿಸಿತ್ತು. ಆದರೆ ಇದೀಗ ಜೂನ್ 14 ರಂದು ರಿಸಲ್ಟ್ ಹೊರಬೀಳಲಿದೆ ಎಂದು ಕೆಇಎ ಮೂಲವು ಮಾಧ್ಯಮಗಳಿಗೆ ತಿಳಿಸಿದೆ.

ಇದನ್ನೂ ಓದಿ: ಮಿತಿ ದಾಟಿದ ಸೈಕ್ಲೋನ್ ತೀವ್ರತೆ! ಈ ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ-ಹೈ ಅಲರ್ಟ್ ಘೋಷಣೆ

"ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಅಂದರೆ ಜೂನ್ 12 ರಂದು ಬಿಡುಗಡೆ ಮಾಡುವುದಾಗಿ ನಿಗದಿಪಡಿಸಲಾಗಿತ್ತು. ಆದರೆ ಕೆಲವು ಆಂತರಿಕ ತಪಾಸಣೆಗಳ ಕಾರಣ ಫಲಿತಾಂಶವನ್ನು ಜೂನ್ 14 ರಂದು ಪ್ರಕಟಿಸಲಾಗುವುದು" ಎಂದು ಕೆಇಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇ 20 ಮತ್ತು 22 ರಂದು ನಡೆದ ಕರ್ನಾಟಕ ಸಿಇಟಿಯಲ್ಲಿ ಈ ಬಾರಿ ಒಟ್ಟು 2.60 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರೆ, 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 1.4 ಲಕ್ಷ ಹುಡುಗಿಯರು ಮತ್ತು 1.21 ಲಕ್ಷ ಹುಡುಗರು ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡಿದ್ದಾರೆ. ಕೆಸಿಇಟಿಯನ್ನು 592 ಕೇಂದ್ರಗಳಲ್ಲಿ ನಡೆಸಲಾಗಿದ್ದು, ಅದರಲ್ಲಿ 121 ಕೇಂದ್ರಗಳು ಬೆಂಗಳೂರಿನಲ್ಲಿವೆ.

ಈ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, ಕೌನ್ಸೆಲಿಂಗ್ ವೇಳಾಪಟ್ಟಿಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು KEA ಬಿಡುಗಡೆ ಮಾಡುತ್ತದೆ.

ಈ ವರ್ಷ, ಮೊದಲ ಬಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, (ಕೆಇಎ) ಬಿಎಸ್ಸಿ ನರ್ಸಿಂಗ್ ಕೋರ್ಸ್‌ ಗಳಿಗೆ ಸಿಇಟಿಯನ್ನು ನಡೆಸಿತ್ತು. ಕೆಇಎ ಪ್ರಕಾರ, ಸುಮಾರು 16,000 ಕನ್ನಡೇತರ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಅವರಿಗೆ ಕಡ್ಡಾಯ ಕನ್ನಡ ಪರೀಕ್ಷೆ ಬರೆಯುವುದರಿಂದ ವಿನಾಯಿತಿ ನೀಡಲಾಗಿತ್ತು.

ಇದನ್ನೂ ಓದಿ: Today Horoscope: ಈ ರಾಶಿಯವರಿಗೆ ಇಂದು ಭಾರೀ ದೈವಬಲ! ಕೈಗೊಂಡ ಪ್ರತೀ ಕಾರ್ಯಸಿದ್ಧಿ: ಅಪಾರ ಧನಲಾಭ

ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯಕೀಯ ವ್ಯವಸ್ಥೆ ಮತ್ತು ಹೋಮಿಯೋಪತಿ, ಇಂಜಿನಿಯರಿಂಗ್/ಆರ್ಕಿಟೆಕ್ಚರ್ ಕೋರ್ಸ್‌ಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್‌ಸಿ (ಕೃಷಿ), ಬಿಎಸ್‌ಸಿ (ರೇಷ್ಮೆಗಾರಿಕೆ), ಬಿಎಸ್‌ಸಿ (ತೋಟಗಾರಿಕೆ), ಬಿಎಸ್‌ಸಿಯಲ್ಲಿ ಸರ್ಕಾರಿ ಪಾಲು ಸೀಟುಗಳಿಗೆ ಪ್ರವೇಶ ಪಡೆಯಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News