'ಹದಿನೇಳು ಜನರ ಬಗ್ಗೆ ಸಿಎಂ ಬಿಎಸ್‌ವೈಗೆ ಬಹಳ ಗೌರವವಿದೆ'

ನಮ್ಮೆಲ್ಲರನ್ನು ಬಹಳ ಗೌರವಯುತವಾಗಿ ಕಾಣುತ್ತಾರೆ - ಸಚಿವ ಬಿ.ಸಿ ಪಾಟೀಲ್‌

Last Updated : Nov 19, 2020, 02:02 PM IST
  • ನಮ್ಮೆಲ್ಲರನ್ನು ಬಹಳ ಗೌರವಯುತವಾಗಿ ಕಾಣುತ್ತಾರೆ - ಸಚಿವ ಬಿ.ಸಿ ಪಾಟೀಲ್‌
  • ನಮ್ಮಗಳಲ್ಲಿ ಯಾರಿಗೂ ಅಸಮಾಧಾನವಿಲ್ಲ. ಎಲ್ಲರೂ ಸಹೋದರರಂತಿದ್ದೇವೆ
  • ಮುಖ್ಯಮಂತ್ರಿಗಳನ್ನಾಗಲೀ ಪಕ್ಷದ ವರಿಷ್ಠರನ್ನಾಗಲಿ ಶಾಸಕರು ಭೇಟಿ ಮಾಡಿದ ತಕ್ಷಣ ಅವರೆಲ್ಲ ಮಂತ್ರಿಗಿರಿಗಾಗಿಯೇ ಹೋಗಿದ್ದಾರೆ ಎನ್ನುವ ಕಲ್ಪನೆ ತಪ್ಪು
'ಹದಿನೇಳು ಜನರ ಬಗ್ಗೆ ಸಿಎಂ ಬಿಎಸ್‌ವೈಗೆ ಬಹಳ ಗೌರವವಿದೆ' title=

ಹೊಸಪೇಟೆ: ವಲಸೆ ಬಂದ ಹದಿನೇಳು ಜನರ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ತುಂಬಾ ಗೌರವಿದೆ. ನಮ್ಮೆಲ್ಲರನ್ನು ಬಹಳ ಗೌರವಯುತವಾಗಿ ಕಾಣುತ್ತಾರೆ ಎಂದು ಸಚಿವ ಬಿ.ಸಿ ಪಾಟೀಲ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆಯಲ್ಲಿನ 67 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಯುವಜನ ಮಹಿಳಾ ಮತ್ತು ಅಬಲ ವರ್ಗದವರಿಗಾಗಿ ಸಹಕಾರ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಬಿ.ಸಿ ಪಾಟೀಲ್(B.C. Patil), ಬಿ.ಎಸ್.ಯಡಿಯೂರಪ್ಪ ನಮ್ಮ ಹದಿನೇಳು ಜನರನ್ನು ಬಹಳ ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ.

'KPSC' ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಮುಖ್ಯ ಪರೀಕ್ಷೆ ಮುಂದೂಡಿದ ರಾಜ್ಯಸರ್ಕಾರ

ಅದರಂತೆ ಎಲ್ಲಾ ಶಾಸಕರು ಸಚಿವರನ್ನೂ ಸಹ ಗೌರವದಿಂದಲೇ ಕಾಣುತ್ತಿದ್ದಾರೆ. ಯಾರ್ಯಾರಿಗೆ ಏನು ಸ್ಥಾನಮಾನ ಗೌರವ ಕೊಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಚೆನ್ನಾಗಿ ಗೊತ್ತಿದೆ. ನಮ್ಮಗಳಲ್ಲಿ ಯಾರಿಗೂ ಅಸಮಾಧಾನವಿಲ್ಲ. ಎಲ್ಲರೂ ಸಹೋದರರಂತಿದ್ದೇವೆ ಎಂದು ಹೇಳಿದರು.

ಬಿಜೆಪಿಯಲ್ಲಿ 'ಹೊಸ ಬಾಂಬ್' ಸಿಡಿಸಿದ ರೇಣುಕಾಚಾರ್ಯ..!

ಮುಖ್ಯಮಂತ್ರಿಗಳನ್ನಾಗಲೀ ಪಕ್ಷದ ವರಿಷ್ಠರನ್ನಾಗಲಿ ಶಾಸಕರು ಭೇಟಿ ಮಾಡಿದ ತಕ್ಷಣ ಅವರೆಲ್ಲ ಮಂತ್ರಿಗಿರಿಗಾಗಿಯೇ ಹೋಗಿದ್ದಾರೆ ಎನ್ನುವ ಕಲ್ಪನೆ ತಪ್ಪು. ಶುಭಾಶಯ ಕೋರಲೋ ಅಥವಾ ಕ್ಷೇತ್ರದ ಕೆಲಸಕ್ಕಾಗಿಯೋ ಭೇಟಿ ಮಾಡುವುದು ಸಹಜವೇ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ತಾಕತ್ತಿದ್ರೆ ಬೈ ಎಲೆಕ್ಷನ್ ನಲ್ಲಿ EVM ಇಲ್ದೆ ಗೆದ್ದು ತೋರಿಸಲಿ: ಬಿಜೆಪಿಗೆ ಸವಾಲು ಹಾಕಿದ ಮಾಜಿ ಸಚಿವ

Trending News