ಗಣೇಶ ವಿಸರ್ಜನೆ ವೇಳೆ ಜಿಹಾದಿ ಯುವಕರಿಂದ ಕಲ್ಲು ತುರಾಟ, ಘಟನೆಯಿಂದ ಸ್ಥಳದಲ್ಲಿ ಉದ್ತಿಗ್ನ ವಾತಾವರಣ

Nagamangala ganesha Procession: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಜಿಹಾದಿ ಯುವಕರಿಂದ ಕಲ್ಲು ತುರಾಟ ಹಾಗೂ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ, ಠಾಣೆ ಮುಂದೆ  ಗಣಪತಿ ತಂದು ಹಿಂದೂ ಯುವಕರ ಪ್ರತಿಭಟನೆ ನಡೆಸುತ್ತಿದ್ದು ಘಟನೆಯಿಂದ ಸ್ಥಳದಲ್ಲಿ ಉದ್ತಿಕ್ತ ವಾತಾವರಣ ಉಂಟಾಗಿದೆ.

Written by - Zee Kannada News Desk | Last Updated : Sep 12, 2024, 10:30 AM IST
  • ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಜಿಹಾದಿ ಯುವಕರಿಂದ ಕಲ್ಲು ತುರಾಟ ಹಾಗೂ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ.
  • ಠಾಣೆ ಮುಂದೆ ಗಣಪತಿ ತಂದು ಹಿಂದೂ ಯುವಕರ ಪ್ರತಿಭಟನೆ ನಡೆಸುತ್ತಿದ್ದು ಘಟನೆಯಿಂದ ಸ್ಥಳದಲ್ಲಿ ಉದ್ತಿಕ್ತ ವಾತಾವರಣ ಉಂಟಾಗಿದೆ.
  • ಜಿಹಾದಿ ಯುವಕರ ಗುಂಪೊಂದು ಗಣಪ ಯುವಕರ ತಂಡದ ಮೇಲೆ ಕಲ್ಲು ತೂರಾಟ ಹಾಗೂ ಪೆಟ್ರೋಲ್‌ ಬಾಂಬ್‌ಗಳ ಮೂಲಕ ದಾಳಿ ನಡೆಸಿದ್ದಾರೆ.
ಗಣೇಶ ವಿಸರ್ಜನೆ ವೇಳೆ ಜಿಹಾದಿ ಯುವಕರಿಂದ ಕಲ್ಲು ತುರಾಟ, ಘಟನೆಯಿಂದ ಸ್ಥಳದಲ್ಲಿ ಉದ್ತಿಗ್ನ ವಾತಾವರಣ title=

Nagamangala ganesha Procession: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಜಿಹಾದಿ ಯುವಕರಿಂದ ಕಲ್ಲು ತುರಾಟ ಹಾಗೂ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ, ಠಾಣೆ ಮುಂದೆ  ಗಣಪತಿ ತಂದು ಹಿಂದೂ ಯುವಕರ ಪ್ರತಿಭಟನೆ ನಡೆಸುತ್ತಿದ್ದು ಘಟನೆಯಿಂದ ಸ್ಥಳದಲ್ಲಿ ಉದ್ತಿಕ್ತ ವಾತಾವರಣ ಉಂಟಾಗಿದೆ.

ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ  ಗಣೇಶ ಮೂರ್ತಿಯ ವಿಸರ್ಜನೆ  ಮೆರವಣಿಗೆ ನಿನ್ನೆ (ಸೆಪ್ಟೆಂಬರ್‌ 11)ರಂದು ಸಿದ್ದತೆ ನಡೆಸಲಾಗಿತ್ತು. ಈ ಸಮಾರಂಭದ ವೇಳೆ ಜಿಹಾದಿ ಯುವಕರ ಗುಂಪೊಂದು ಗಣಪ ಯುವಕರ ತಂಡದ ಮೇಲೆ ಕಲ್ಲು ತೂರಾಟ ಹಾಗೂ ಪೆಟ್ರೋಲ್‌ ಬಾಂಬ್‌ಗಳ ಮೂಲಕ ದಾಳಿ ನಡೆಸಿದ್ದಾರೆ. 

ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಗಣೇಶನ ಮೆರವಣಿಗೆಗೆ ಬಂದ ವೇಳೆ ಜಿಹಾದಿ ಯುವಕರು, ಗಣೇಶನ ವಿಗ್ರಹದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಕಾರಣದಿಂದ ಹಿಂದೂ ಯುವಕರು ಹಾಗೂ ಜಿಹಾದಿ ಯುವಕರ ಗೊಂಪಿನ ನಡುವೆ ಘರ್ಷಣೆ ಉಂಟಾಗಿದೆ. ದರ್ಗಾದ ಮುಂದೆ ಗಣೇಶನ ಮೂರ್ತಿಯನ್ನು ಮೆರವಣಿಗೆ ಮಾಡಬಾರದು ಎಂದು ಜಿಹಾದಿ ಯುವಕರ ಗುಂಪು ಹಿಂದೂ ಯುವಕರ ಮೇಲೆ ಕ್ಯಾತೆ ತೆಗೆದಿದ್ದು, ಅಷ್ಟೆ ಅಲ್ಲದೆ ಮಾರಕಾಸ್ತ್ರ ಹಾಗೂ ಪೆಟ್ರೋಲ್‌ ಬಾಂಬ್‌ಗಳಿಂದ ದಾಳಿ ನಡೆಸಿತ್ತು. ಘಟನೆ ಖಂಡಿಸಿ ಹಿಂದೂ ಯುವಕರ ಗುಫು ಗಣೇಶನ ಮೂರ್ತಿ ಸಮೇತ ಪೋಲಿಸ್‌ ಠಾಣೆಯ ಮುಂದೆ ನೆರೆದು ಪ್ರತಿಭಟನೆ ನಡೆಸಿದ್ದಾರೆ.

ಇನ್ನೂ  ನಿನ್ನೆ (ಸೆಪ್ಟೆಂಬರ್‌ 11) ನಡೆದ ಈ ಘಟನೆ ಅಷ್ಟಕ್ಕೆ ನಿಲ್ಲದೆ, ಮುಸ್ಲಿಂರಿಂದ ಹಿಂದೂಗಳ ಅಂಗಡಿ ಮಳಿಗೆಗಳ ಮೇಲೆ  ಬೆಂಕಿ ಹಚ್ಚಿ ದಾಂಧಲೆ ನಡೆದಿತ್ತು , ಮುಸ್ಲಿಂರ ದಾಂಧಲೆಯಿಂದ ಹಿಂದೂ ಯುವಕರು ಮುಸ್ಲಿಂರ ಪೈಂಟ್ ಅಂಗಡಿ, ಬೈಕ್ ಷೋ ರೂಮ್, ಬಟ್ಟೆ ಅಂಗಡಿ ಮಳಿಗೆಗಳಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿದ್ದಾರೆ.

ಇದೀಗ ಎರಡು ಕೋಮುಗಳ ಪ್ರತಿಭಟನೆ ಅತಿರೇಖಕ್ಕೆರಿದ್ದು, ತೀವ್ರ ಉದ್ವಿಗ್ನಗೊಂಡ ಪರಿಸ್ಥಿತಿಯಿಂದ ಪೋಲಿಸರು ಹೈ ಅಲರ್ಟ್‌ ಆಗಿದ್ದಾರೆ. ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೋಲಿಸರು 144 ಸೆಕ್ಷನ್ ಜಾರಿ ಮಾಡಿದ್ದು, ಸ್ಥಳದಲ್ಲಿ ಬಾರಿ ಭದ್ರತೆ ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ" ಈಗ ಪರಿಸ್ಥಿತಿ ಹತೋಟಿಗೆ ಬಂದಿದೆ ಉದ್ರಿಕ್ತರ ಗುಂಪು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿವೆ ನಮ್ಮ ಇಬ್ಬರು ಸಿಬ್ಬಂದಿಗಳಿಗೆ ಗಾಯಗಳಾಗಿವೆ ಮಚ್ಚು, ಲಾಂಗ್, ಪೆಟ್ರೊಲ್ ಬಾಂಬ್ ಬಳಸಿರುವ ಬಗ್ಗೆ ನಂಗೆ ಮಾಹಿತಿ ಇಲ್ಲ ಸಿಚುವೇಷನ್ ಕಂಟ್ರೋಲ್ ಮಾಡಿ ನಂತರ ತನಿಖೆ ನಡೆಸಲಿದ್ದೇವೆ." ಎಂದಿದ್ದಾರೆ.

ಇನ್ನೂ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ್ ಸಹ ನಾಗಮಂಗಲ ಗಣಪತಿ ವಿಸರ್ಜನೆ ವೇಳೆ ನಡೆದ  ಗಲಭೆ ಪ್ರಕರಣದ ಬಗ್ಗೆ ಮಾತನಾಡಿದ್ದು," ಮಸಿದಿ ಮುಂದೆ ಗಣೇಶನ ಮೆರವಣಿಗೆಯನ್ನ ತುಂಬಾ ಸಮಯ ನಿಲ್ಲಿಸಿದ್ದರು ಎಂದು ವಾಗ್ವಾದ ಪ್ರಾರಂಭವಾಗಿದೆ, ಉದ್ರಿಕ್ತ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ರು ಅನ್ಯ ಕೋಮಿನವರ ಗುಂಪು ಬೈಕ್, ಅಂಗಡಿಗಳಿಗೆ ಬೆಂಕಿ ಹಾಕಿದ್ದಾರೆ ಗಲಭೆಯಲ್ಲಿ ಯಾರಿಗೂ ಗಾಯವಾಗಿಲ್ಲKsrp ಪೊಲೀಸರ ಭದ್ರತೆ ಇದ್ದರು ಕೂಡ ಗಲಭೆಯಾಗಿದೆ ಪ್ರಕರಣದ ಬಗ್ಗೆ ತನಿಖೆ ಮಾಡ್ತಿದ್ದೇವೆ" ಎಂದಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ವಿಚಾರಣೆ ನಡೆಸುತ್ತಿದ್ದು, ಸದ್ಯ 46 ಜನರನ್ನು ಬಂಧಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Facebook Link - https://bit.ly/3Hhqmcj 
Youtube Link - https://www.youtube.com/watch?v=kr-YIH866cM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm 
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News