ಬೆಂಗಳೂರು ಭೇಟಿಯ ನಂತರ ಹತಾಶರಾಗಿರುವ ಮೋದಿ - ಕೆ.ಎಚ್.ಮುನಿಯಪ್ಪ

     

Last Updated : Feb 7, 2018, 07:21 PM IST
ಬೆಂಗಳೂರು ಭೇಟಿಯ ನಂತರ ಹತಾಶರಾಗಿರುವ ಮೋದಿ - ಕೆ.ಎಚ್.ಮುನಿಯಪ್ಪ title=
Photo Courtesy: YouTube

ನವದೆಹಲಿ: ಇಂದು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮೋದಿ ಹತಾಶರಾಗಿ ಕಾಂಗ್ರೆಸ್ ವಿರುದ್ದ ಹೇಳಿಕೆ ನೀಡಿದ್ದಾರೆ ಎಂದು ನವದೆಹಲಿಯಲ್ಲಿ ಸಂಸದ ಕೆ ಎಚ್ ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿಗೆ ಬಿಜೆಪಿಯ ಪರಿವರ್ತನ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಮೋದಿ ಈಗ ಹತಾಶರಾಗಿ  ಕಾಂಗ್ರೇಸ್ ವಿರುದ್ದ ಟೀಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷವು ಸ್ವಾತಂತ್ರ ಚಳುವಳಿಗೆ ತ್ಯಾಗ ಬಲಿದಾನ ಮಾಡಿದೆ,ಅಂತಹ ಪಕ್ಷದ ಕುರಿತಾಗಿ ಮಾತನಾಡುವ ನೈತಿಕತೆ ಮೋದಿಯವರಿಗೆ ಇಲ್ಲ ಎಂದು ತಿಳಿಸಿದರು. ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುವ ಬದಲಾಗಿ ರಾಜಕೀಯ ಮಾತನ್ನಾಡಿದ್ದಾರೆ,ಇಂತಹ ಸಂದರ್ಭದಲ್ಲಿ ಮೋದಿಯವರು ರೀತಿ ಮಾತನಾಡಿರುವುದು ದುರದೃಷ್ಟಕರ ಎಂದರು. ಮೋದಿಯವರು ಏನೇ ಮಾತನಾಡಲಿ ಮುಂದೆ ಕಾಂಗ್ರೆಸ್ ಅಧಿಕಾರ ಬಂದು ರಾಹುಲ್ ಗಾಂಧಿಯವರು ಈ ದೇಶದ ಪ್ರಧಾನಿಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

Trending News