ಹೆಲ್ತ್ ಇನ್ಸುರೆನ್ಸ್ ಹಣದ ಜೊತೆ ದಂಡ ಮತ್ತು ಪರಿಹಾರ ಕೊಡುವಂತೆ ವಿಮಾ ಕಂಪನಿಗೆ ಆದೇಶ

ವಿಮಾ ಕಂಪನಿಯವರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:08/06/2023 ರಂದು ದೂರು ಸಲ್ಲಿಸಿದ್ದರು.

Written by - Manjunath N | Last Updated : Dec 14, 2023, 03:50 PM IST
  • ಅದೇ ಕಾಲಕ್ಕೆ ಅವರಿಗೆ ಕೋವಿಡ್-19 ಕೂಡಾ ಆಗಿತ್ತು. ಈ ಬಗ್ಗೆ ದೂರುದಾರರಿಗೆ ರೂ.75,360/- ವೈದ್ಯಕೀಯ ಖರ್ಚು ಬಂದಿತ್ತು.
  • ಆಸ್ಪತ್ರೆಯಿಂದ ಡಿಸಚಾರ್ಜ್ ಆದ ಮೇಲೆ ಸದರಿ ವೈದ್ಯಕೀಯ ಖರ್ಚು ವೆಚ್ಚ ಕೇಳಿ ಎದುರುದಾರ ವಿಮಾ ಕಂಪನಿಯ ಎಜೆಂಟರ ಮೂಲಕ ಕ್ಲೇಮ್ ಅರ್ಜಿ ಸಲ್ಲಿಸಿದ್ದರು.
  • ವಿಮೆ ಮಾಡಿಸುವ ಮೊದಲಿನಿಂದ ದೂರುದಾರರಿಗೆ ಸಿಜೋಪ್ರೇನಿಯಾ ಕಾಯಿಲೆ ಇದ್ದು ಅದನ್ನು ಮರೆಮಾಚಿ ವಿಮೆ ಪಡೆದಿದ್ದಾರೆ ಅನ್ನುವ ಕಾರಣ ನೀಡಿ ವಿಮಾ ಕಂಪನಿಯವರು ದೂರುದಾರರ ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಿದ್ದರು.
ಹೆಲ್ತ್ ಇನ್ಸುರೆನ್ಸ್ ಹಣದ ಜೊತೆ ದಂಡ ಮತ್ತು ಪರಿಹಾರ ಕೊಡುವಂತೆ ವಿಮಾ ಕಂಪನಿಗೆ ಆದೇಶ title=

ಧಾರವಾಡ: ಸದ್ಯ ಬೆಂಗಳೂರಿನ ಜೆ.ಪಿ. ನಗರದಲ್ಲಿ ವಾಸಿಸುತ್ತಿರುವ ಹುಬ್ಬಳ್ಳಿ ನಿವಾಸಿ ಚೇತನ ಕೆ. ಅನ್ನುವವರು ಎದುರುದಾರ ಮಣಿಪಾಲ ಸಿಗ್ನಾ ವಿಮಾ ಕಂಪನಿಯ ಜೊತೆ ರೂ.4,50,000/- ವರೆಗೆ ತಮ್ಮ ಆರೋಗ್ಯ ವಿಮೆ ಮಾಡಿಸಿದ್ದರು. ವಿಮಾ ಅವಧಿ ದಿ:08/11/2020 ರಿಂದ ದಿ:07/11/2021 ರವರೆಗೆ ಇತ್ತು. ಅದಕ್ಕಾಗಿ ದೂರುದಾರ ರೂ.11,788/- ಪ್ರಿಮಿಯಮ್ ಕಟ್ಟಿದ್ದರು. ಮೇ. 2021 ರಲ್ಲಿ ದೂರುದಾರರಿಗೆ ಅನಾರೋಗ್ಯವಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಇದನ್ನೂ ಓದಿ: ಪ್ರಥಮ ಬಾರಿಗೆ ಶಾಸಕನಾದ ವ್ಯಕ್ತಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ ಬಿಜೆಪಿ..! ಏಕೆ ಗೊತ್ತೆ..?

ಅದೇ ಕಾಲಕ್ಕೆ ಅವರಿಗೆ ಕೋವಿಡ್-19 ಕೂಡಾ ಆಗಿತ್ತು. ಈ ಬಗ್ಗೆ ದೂರುದಾರರಿಗೆ ರೂ.75,360/- ವೈದ್ಯಕೀಯ ಖರ್ಚು ಬಂದಿತ್ತು. ಆಸ್ಪತ್ರೆಯಿಂದ ಡಿಸಚಾರ್ಜ್ ಆದ ಮೇಲೆ ಸದರಿ ವೈದ್ಯಕೀಯ ಖರ್ಚು ವೆಚ್ಚ ಕೇಳಿ ಎದುರುದಾರ ವಿಮಾ ಕಂಪನಿಯ ಎಜೆಂಟರ ಮೂಲಕ ಕ್ಲೇಮ್ ಅರ್ಜಿ ಸಲ್ಲಿಸಿದ್ದರು. ವಿಮೆ ಮಾಡಿಸುವ ಮೊದಲಿನಿಂದ ದೂರುದಾರರಿಗೆ ಸಿಜೋಪ್ರೇನಿಯಾ ಕಾಯಿಲೆ ಇದ್ದು ಅದನ್ನು ಮರೆಮಾಚಿ ವಿಮೆ ಪಡೆದಿದ್ದಾರೆ ಅನ್ನುವ ಕಾರಣ ನೀಡಿ ವಿಮಾ ಕಂಪನಿಯವರು ದೂರುದಾರರ ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಿದ್ದರು. ವಿಮಾ ಕಂಪನಿಯವರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:08/06/2023 ರಂದು ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಭಜನ್‌ಲಾಲ್‌ ಶರ್ಮಾಗೆ ರಾಜಸ್ಥಾನದ ಸಿಎಂ ಪಟ್ಟ

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ದೂರುದಾರ ಎದುರುದಾರರಿಂದ ಪಡೆದುಕೊಂಡಿರುವ ವಿಮಾ ಪಾಲಸಿ ಅವರ ಅನಾರೋಗ್ಯ ಅವಧಿಯಲ್ಲಿ ಊರ್ಜಿತದಲ್ಲಿದೆ. ಈ ಬಗ್ಗೆ ದೂರುದಾರ ಮಣಿಪಾಲ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದು ರೂ.75,360/- ಖರ್ಚು ಮಾಡಿದ ಬಗ್ಗೆ ದಾಖಲೆಗಳಿವೆ. ದೂರುದಾರರಿಗೆ ಸಿಜೋಪ್ರೇನಿಯಾ ಕಾಯಿಲೆ ಇತ್ತು ಅನ್ನುವ ಸಂಗತಿಯನ್ನು ರುಜುವಾತುಪಡಿಸಲು ಎದುರುದಾರ ವಿಮಾ ಕಂಪನಿಯವರು ವಿಫಲರಾಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರರ ಆರೋಗ್ಯ ವಿಮೆ ನಿರಾಕರಿಸಿದ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರ ವೈದ್ಯಕೀಯ ವೆಚ್ಚದ ಹಣ ರೂ.75,360/- ಮತ್ತು ಅದರ ಮೇಲೆ ಕ್ಲೇಮು ನಿರಾಕರಿಸಿದ ದಿ:27/02/2021 ರಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ನೀಡುವಂತೆ ಆಯೋಗ ವಿಮಾ ಕಂಪನಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ತೊಂದರೆ ಮತ್ತು ಅನಾನುಕೂಲಕ್ಕಾಗಿ ರೂ.25,000/- ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎದುರುದಾರರಿಗೆ ಸೂಚಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News