ಬೆಳೆ ವಿಮೆ ಕಂತಿನ ಹಣ ವಿಮಾ ಕಂಪನಿಗೆ ವರ್ಗಾಯಿಸದ ಜೀವನ ಆಧಾರ ಸಹಾಯವಾಣಿ ಕೇಂದ್ರಕ್ಕೆ ಪರಿಹಾರ ನೀಡಲು ಆದೇಶ

ಹುಬ್ಬಳ್ಳಿಯ ನವನಗರದ ಬಸವಣ್ಣೆಪ್ಪ ಗುಮಗೋಳ ಅನ್ನುವವರು 2021-2022ನೇ ಹಿಂಗಾರು ಸಾಲಿನಲ್ಲಿ ತಮ್ಮ ಜಮೀನಿನಲ್ಲಿನ ಮಾವಿನ ಬೆಳೆಗೆ ಎಸ್.ಬಿ.ಆಯ್ ಜನರಲ್ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಮಾಡಿಸಿದ್ದರು. ವಿಮೆಗೆ ತಗಲುವ ವಿಮಾಕಂತಿನ ಹಣ ರೂ.10,116.80 ಪೈಸೆ ಗಳನ್ನು ವಿಮಾ ಕಂಪನಿಯ ಅಧಿಕೃತ ಏಜಂಟರಾದ ನವನಗರದ ಹುಬ್ಬಳ್ಳಿಯ ಜೀವನ ಆಧಾರ ಸಹಾಯವಾಣಿ ಕೇಂದ್ರದ ಮೂಲಕ ಭರಿಸಿದ್ದರು.

Written by - Zee Kannada News Desk | Last Updated : Mar 6, 2024, 01:23 AM IST
  • ಶೇ8% ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರನಿಗೆ ಹಣ ಸಂದಾಯ ಮಾಡುವಂತೆ ಆಯೋಗ ಆದೇಶಿಸಿದೆ.
  • ಜೊತೆಗೆ ಎಸ್.ಬಿ.ಆಯ್. ಜನರಲ್ ಇನ್ಸುರೆನ್ಸ್ ಕಂಪನಿ ವಿರುದ್ಧದ ದೂರನ್ನು ವಜಾಗೊಳಿಸಿದೆ.
ಬೆಳೆ ವಿಮೆ ಕಂತಿನ ಹಣ ವಿಮಾ ಕಂಪನಿಗೆ ವರ್ಗಾಯಿಸದ ಜೀವನ ಆಧಾರ ಸಹಾಯವಾಣಿ ಕೇಂದ್ರಕ್ಕೆ ಪರಿಹಾರ ನೀಡಲು ಆದೇಶ title=

ಧಾರವಾಡ: ಹುಬ್ಬಳ್ಳಿಯ ನವನಗರದ ಬಸವಣ್ಣೆಪ್ಪ ಗುಮಗೋಳ ಅನ್ನುವವರು 2021-2022ನೇ ಹಿಂಗಾರು ಸಾಲಿನಲ್ಲಿ ತಮ್ಮ ಜಮೀನಿನಲ್ಲಿನ ಮಾವಿನ ಬೆಳೆಗೆ ಎಸ್.ಬಿ.ಆಯ್ ಜನರಲ್ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಮಾಡಿಸಿದ್ದರು. ವಿಮೆಗೆ ತಗಲುವ ವಿಮಾಕಂತಿನ ಹಣ ರೂ.10,116.80 ಪೈಸೆ ಗಳನ್ನು ವಿಮಾ ಕಂಪನಿಯ ಅಧಿಕೃತ ಏಜಂಟರಾದ ನವನಗರದ ಹುಬ್ಬಳ್ಳಿಯ ಜೀವನಆಧಾರ ಸಹಾಯವಾಣಿ ಕೇಂದ್ರದ ಮೂಲಕ ಭರಿಸಿದ್ದರು.

ಇದನ್ನೂ ಓದಿ- ನಮ್ಮ ಶಾಲೆ ನಮ್ಮ ಜವಾಬ್ದಾರಿ- ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ’ಗೆ ಚಾಲನೆ

ಆದರೆ ಮಾವಿನ ಬೆಳೆ 2021-22ನೇ ಸಾಲಿನಲ್ಲಿ ಸಂಪೂರ್ಣವಾಗಿ ವಿಫಲ ಆಗಿದ್ದರಿಂದ ದೂರುದಾರ ತನಗೆ ವಿಮಾ ಹಣವನ್ನು ಕೊಡುವಂತೆ ಎಸ್.ಬಿ.ಆಯ್ ಜನರಲ್ ಇನ್ಸುರೆನ್ಸ್ ಕಂಪನಿಯವರನ್ನು ಕೇಳಿಕೊಂಡಿದ್ದರು. ಆದರೆ ಎದುರುದಾರ ವಿಮಾ ಕಂಪನಿಯವರು ತಮಗೆ ಪ್ರೀಮಿಯಮ್ ಹಣ ಕಟ್ಟಿಲ್ಲ ಅಂತಾ ಹೇಳಿ ದೂರುದಾರರ ಕ್ಲೇಮನ್ನು ತಿರಸ್ಕರಿಸಿದ್ದರು. ವಿಮಾ ಕಂಪನಿಯ ಅಧಿಕೃತ ಏಜಂಟರಾದ ಎದುರುದಾರ ನಂ.2ನೇದವರ ಮೂಲಕ 2021-22ನೇ ಸಾಲಿನ ಮಾವಿನ ಬೆಳೆಯ ವಿಮಾ ಕಂತಿನ ಹಣ ಭರಿಸಿದ್ದರೂ ಸಹ ತನ್ನ ಕ್ಲೇಮನ್ನು ತಿರಸ್ಕರಿಸಿರುವುದು ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರ ನಂ.1 ವಿಮಾ ಕಂಪನಿ ಮತ್ತು ಅವರ ಅಧಿಕೃತ ಏಜಂಟರಾದ ಎದುರುದಾರ ನಂ.2ರವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ದಿ:21/04/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ- ದೇಶದ್ರೋಹ ಕೆಲಸದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇವೆ: ಡಿಸಿಎಂ ಡಿ.ಕೆ ಶಿವಕುಮಾರ್

ದೂರುದಾರ ಬೆಳೆ ವಿಮಾಕಂತಿನ ಹಣವನ್ನು ತುಂಬದೆ ಇರುವುದರಿಂದ ದೂರುದಾರ ಕ್ಲೇಮ ಪಡೆಯಲು ಅರ್ಹರಲ್ಲ ಅಂತಾ ಹೇಳಿ ತಮ್ಮ ವಿರುದ್ಧದ ದೂರನ್ನು ವಜಾ ಮಾಡುವಂತೆ ವಿಮಾ ಕಂಪನಿಯವರು ಆಕ್ಷೇಪಣೆ ಎತ್ತಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಮತ್ತು ಸದಸ್ಯರಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ದೂರುದಾರತನ್ನ ಮಾವಿನ ಬೆಳೆಗೆ ವಿಮೆ ಮಾಡಿಸಲು ಕಟ್ಟಿದ ಪ್ರೀಮಿಯಮ್ ಹಣವನ್ನು ಎದುರುದಾರ 2ನೇ ದವರು ವಿಮಾ ಕಂಪನಿಗೆ ಕಳುಹಿಸದೇ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರನಿಗೆ ಆದ ಮಾವಿನ ಬೆಳೆಯ ನಷ್ಟವನ್ನು ಎದುರುದಾರ ನಂ.2ನೇ ದವರಾದ ನವನಗರ ಹುಬ್ಬಳ್ಳಿಯ ಜೀವನ ಆಧಾರ ಸಹಾಯವಾಣಿ ಕೇಂದ್ರದವರೇ ತುಂಬಿಕೊಡಬೇಕು ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

ಇದನ್ನೂ ಓದಿ: ಅರುಣ್ ಯೋಗಿರಾಜ್ ಗೆ ಪ್ರತಿಷ್ಠಿತ 'ಅಭಿನವ ಅಮರಶಿಲ್ಪಿ' ಪ್ರಶಸ್ತಿ ಪ್ರದಾನ

ದೂರುದಾರನಿಗೆ ಆಗಿರುವ ಬೆಳೆ ಹಾನಿಗೆ ರೂ.2,02,336/- ಹಾಗೂ ಅದರ ಮೇಲೆ ಈ ದೂರು ದಾಖಲಿಸಿದ ದಿನಾಂಕ ದಿಂದ ಶೇ8% ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರನಿಗೆ ಹಣ ಸಂದಾಯ ಮಾಡುವಂತೆ 2ನೇ ಎದುರುದಾರ ನವನಗರ ಹುಬ್ಬಳ್ಳಿಯ ಜೀವನಆಧಾರ ಸಹಾಯವಾಣಿ ಕೇಂದ್ರಕ್ಕೆ ಆಯೋಗ ಆದೇಶಿಸಿದೆ. ಜೊತೆಗೆ ಎಸ್.ಬಿ.ಆಯ್. ಜನರಲ್ ಇನ್ಸುರೆನ್ಸ್ ಕಂಪನಿ ವಿರುದ್ಧದ ದೂರನ್ನು ವಜಾಗೊಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News