ಮಂಗಳೂರಿನ ಪ್ರತಿಭಟನೆಯಲ್ಲಿ ಮಡಿದವರ ಕುಟುಂಬಕ್ಕೆ ಟಿಎಂಸಿಯಿಂದ ಪರಿಹಾರ

ಟಿಎಂಸಿ ಮುಖಂಡ ದಿನೇಶ್ ತ್ರಿವೇದಿ ಮತ್ತು ರಾಜ್ಯಸಭಾ ಸಂಸದ ಎಂಡಿ ನಾಡಿಮುಲ್ ಹಕ್ ಅವರು ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಪೊಲೀಸ್ ಕ್ರಮದಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಾದ ನೌಶೀನ್ ಅವರ ಕುಟುಂಬ ಸದಸ್ಯರಿಗೆ ಪರಿಹಾರವನ್ನು ನೀಡಿದರು.

Last Updated : Dec 28, 2019, 04:16 PM IST
ಮಂಗಳೂರಿನ ಪ್ರತಿಭಟನೆಯಲ್ಲಿ ಮಡಿದವರ ಕುಟುಂಬಕ್ಕೆ ಟಿಎಂಸಿಯಿಂದ ಪರಿಹಾರ  title=
Photo Courtesy: IANS

ಮಂಗಳೂರು: ಮಂಗಳೂರಿನಲ್ಲಿ ಡಿಸೆಂಬರ್ 19 ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಯೋಗ ಶನಿವಾರ 5 ಲಕ್ಷ ರೂ.ಗಳ ಪರಿಹಾರ ಚೆಕ್ ಹಸ್ತಾಂತರಿಸಿದೆ. ಟಿಎಂಸಿ ನಾಯಕ ದಿನೇಶ್ ತ್ರಿವೇದಿ ನೇತೃತ್ವದ ನಿಯೋಗ ಮತ್ತು ರಾಜ್ಯಸಭಾ ಸಂಸದ ಎಂಡಿ ನಾಡಿಮುಲ್ ಹಕ್ ಅವರು ಪೌರತ್ವ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಕ್ರಮದಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಾದ ನೌಶೀನ್ ಅವರ ಕುಟುಂಬ ಸದಸ್ಯರಿಗೆ ಪರಿಹಾರವನ್ನು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ತ್ರಿವೇದಿ, "ಇಂತಹ ಯಾವುದೇ ಘಟನೆಗಳ ಬಗ್ಗೆ ಮಮತಾ ಬ್ಯಾನರ್ಜಿ ಯಾವಾಗಲೂ ಸಹಾನುಭೂತಿ ಹೊಂದಿದ್ದಾರೆ. ನೊಸೆನ್ ಅವರ ತಾಯಿ ಮತ್ತು ಸಹೋದರರನ್ನು ಭೇಟಿಯಾಗುವುದು ತುಂಬಾ ದುಃಖಕರವಾಗಿದೆ" ಎಂದು ಹೇಳಿದರು. ಸಂತ್ರಸ್ತರ ಕುಟುಂಬವನ್ನು ಟಿಎಂಸಿ ಬೆಂಬಲಿಸುತ್ತದೆ ಮತ್ತು ಈ ಬಗ್ಗೆ ಪಕ್ಷಪಾತವಿಲ್ಲದ ತನಿಖೆಯನ್ನು ಕೋರಿದೆ ಎಂದು ಅವರು ಹೇಳಿದರು. "ಪರಿಹಾರವು ಎಂದಿಗೂ ಜೀವನವನ್ನು ಮರಳಿ ತರಲು ಸಾಧ್ಯವಿಲ್ಲ. ನಾನು ಸಂತ್ರಸ್ತೆಯ ತಾಯಿಯೊಂದಿಗೆ ಮಾತನಾಡುತ್ತಿದ್ದೆ. ಅವರು ನ್ಯಾಯವನ್ನು ಮಾತ್ರ ಬಯಸುತ್ತಾರೆ ಎಂದು ಹೇಳಿದರು. ಘಟನೆ ವೇಳೆ ಸತ್ಯವಾಗಿ ನದೆದಿದ್ದೇನು ಎಂಬುದನ್ನು ಕಂಡುಹಿಡಿಯಲು ಸರಿಯಾದ ಮತ್ತು ಪಕ್ಷಪಾತವಿಲ್ಲದ ವಿಚಾರಣೆ ಅಗತ್ಯ" ಎಂದು ತ್ರಿವೇದಿ ಆಗ್ರಹಿಸಿದರು.

"ಹಾಂಕ್ ಕಾಂಗ್ನಲ್ಲಿ ಏಳು ತಿಂಗಳಿನಿಂದ ಆಂದೋಲನ ನಡೆಯುತ್ತಿದೆ. ಆದರೆ ಪೊಲೀಸ್ ಕ್ರಮದಿಂದಾಗಿ ಯಾವುದೇ ಸಾವುಗಳು ಸಂಭವಿಸಿಲ್ಲ. ಬ್ರಿಟಿಷ್ ಆಡಳಿತದಲ್ಲಿ ಪ್ರತಿಭಟನೆಯ ಸಮಯದಲ್ಲಿ ಜನರು ಸಾಯುತ್ತಿದ್ದರು" ಎಂದು ಅವರು ಕಿಡಿ ಕಾರಿದರು. ಹೊಸದಾಗಿ ಜಾರಿಗೆ ಬಂದ ಪೌರತ್ವ ಕಾನೂನನ್ನು ಹಿಂದಕ್ಕೆ ತರಬೇಕೆಂದು ತ್ರಿವೇದಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

"ಚೌರಿ ಚೌರಾ ಘಟನೆಯ ನಂತರ ಗಾಂಧೀಜಿಯವರು ತಮ್ಮ ಸ್ವಾತಂತ್ರ್ಯ ಚಳವಳಿಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ. ಇಂತಹ ವಿಷಯಗಳಲ್ಲಿ ಯಾವುದೇ ಅಹಂ ಇರಬಾರದು. ಮಮತಾ ಬ್ಯಾನರ್ಜಿ ದೇಶದಲ್ಲಿ ಸಮೃದ್ಧಿಯನ್ನು ತರಬೇಕೆಂದು ಮನವಿ ಮಾಡುತ್ತಾರೆ. ಸಿಎಎಯನ್ನು ಹಿಂದಕ್ಕೆ ತೆಗೆದುಕೊಂಡು ದೇಶದ ಜನರು ಉಸಿರಾಡಲು ಅವಕಾಶ ಮಾಡಿಕೊಡಿ" ಎಂದು ಟಿಎಂಸಿ ನಾಯಕ ಹೇಳಿದರು .

ಮಂಗಳೂರು ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಪ್ರಕಟಿಸಿದ್ದರು. ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಹಿಂಸಾಚಾರಕ್ಕೆ ತಿರುಗಿದ ಪೊಲೀಸ್ ಗುಂಡಿನ ದಾಳಿಯಲ್ಲಿ ಬುಲೆಟ್ ಗಾಯಗೊಂಡು ಜಲೀಲ್ ಮತ್ತು ನೌಶೀನ್ ಎಂಬ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.

Trending News