ಹೆಚ್‌ಡಿಕೆ ಬಳಿ ಪೆನ್‌ಡ್ರೈವ್ ಇಲ್ಲಾ.. ಅದು ಠುಸ್ ಪಟಾಕಿ..! ಮಾಜಿ ಸಿಎಂ ವೀರಪ್ಪ ಮೊಯ್ಲಿ ಟಾಂಗ್‌

ಹೆಚ್‌.ಡಿ. ಕುಮಾರಸ್ವಾಮಿ ಬಳಿ ಇರುವ ಪೆನ್ ಡ್ರೈವ್ ನಲ್ಲಿರುವುದು ಠುಸ್ ಪಟಾಕಿ. ಅವರು ಈ ರೀತಿ ಹಲವು ಬಾರಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಜೊತೆ ಸೇರಿ ಅವರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕಿಡಿಕಾರಿದರು.

Written by - Krishna N K | Last Updated : Jul 6, 2023, 08:28 PM IST
  • ಹೆಚ್‌.ಡಿ. ಕುಮಾರಸ್ವಾಮಿ ಬಳಿ ಇರುವ ಪೆನ್ ಡ್ರೈವ್ ನಲ್ಲಿರುವುದು ಟುಸ್ ಪಟಾಕಿ.
  • ಈ ರೀತಿ ಹಲವು ಬಾರಿ ಹೇಳಿಕೆ ನೀಡಿದ್ದಾ ಬಿಜೆಪಿ ಜೊತೆ ಸೇರಿ ಅವರು ಈ ರೀತಿ ವರ್ತಿಸುತ್ತಿದ್ದಾರೆ.
  • ಕುಮಾರಸ್ವಾಮಿ ಪೆನ್‌ ಡ್ರೈವ್‌ ವಿಚಾರವಾಗಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ.
ಹೆಚ್‌ಡಿಕೆ ಬಳಿ ಪೆನ್‌ಡ್ರೈವ್ ಇಲ್ಲಾ.. ಅದು ಠುಸ್ ಪಟಾಕಿ..! ಮಾಜಿ ಸಿಎಂ ವೀರಪ್ಪ ಮೊಯ್ಲಿ ಟಾಂಗ್‌ title=

ಚಿಕ್ಕಬಳ್ಳಾಪುರ : ಹೆಚ್‌ಡಿಕೆ ಪೆನ್ ಡ್ರೈವ್ ನಲ್ಲಿರುವುದು ಬಾಂಬ್ ಅಲ್ಲ ಟುಸ್ ಪಟಾಕಿ ಎಂದು ರಾಜ್ಯ ಸರ್ಕಾರದ ವಿರುದ್ದ ಪೆನ್ ಡ್ರೈವ್ ಬಾಂಬ್ ಸಿಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ದ ಮಾಜಿ ಸಿಎಂ ಡಾ. ಎಂ ವೀರಪ್ಪಮೊಯ್ಲಿ ವಾಗ್ದಾಳಿ ನಡೆಸಿದ್ದಾರೆ.

ನಗರದ ಗೃಹ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೆಚ್‌ಡಿಕೆ ಪೆನ್ ಡ್ರೈವ್ ಕುರಿತು ಮಾತನಾಡಿ, ಅವರ ಬಳಿ ಇರುವ ಪೆನ್ ಡ್ರೈವ್ ನಲ್ಲಿರುವುದು ಠುಸ್ ಪಟಾಕಿ. ಅವರು ಈ ರೀತಿ ಹಲವು ಬಾರಿ ನಡೆದುಕೊಂಡಿದ್ದಾರೆ. ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸೇರಿ ಈ ರೀತಿ ವರ್ತಿಸುತ್ತಿದ್ದಾರೆ. ಚುನಾವಣೆಯ ಸೋಲಿನ ಹತಾಷೆಯಿಂದ ಜನರ ಗಮನ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಮಳೆ ಕೊರತೆ: ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ, ಕುಡಿಯುವ ಉದ್ಧೇಶಕ್ಕೆ ಮಾತ್ರ ನೀರು ಬಳಕೆಗೆ ಸೂಚನೆ 

ಮೋದಿ ಏನ್‌ ಮಹಕ್ತಾರ್ಯ ಮಾಡಿದ್ದಾರೆ..? : ಬಿಜೆಪಿಗರು ದೇಶಭಕ್ತರಲ್ಲ ದೇಶ ದ್ರೋಹಿಗಳು, ದೇಶವನ್ನು ಮುನ್ನೆಡೆಸುವದಲ್ಲ ಹಿಂದೆ ನೂಕುತ್ತಿದ್ದಾರೆ. ಮೋದಿ ಏನು ಯಾವ ಮಹಕ್ತಾರ್ಯ ಮಾಡಿದ್ದಾರೆ ಹೇಳಿ, ದೇಶ ಅಭಿವೃದ್ದಿ ಆಗಿರುವುದ ಕಾಂಗ್ರೆಸ್ ಆಡಳಿತದಲ್ಲಿ‌ ಎಂದು ಕೇಂದ್ರದ ವಿರುದ್ಧ ಮಾಜಿ ಸಿಎಂ ಗುಡುಗಿದರು.

ಕೇಂದ್ರ ರಾಜ್ಯದ ‌ಮೇಲೆ ಮಲತಾಯಿ‌ ಧೋರಣೆ ತೋರುತ್ತಿದೆ : ಕೇಂದ್ರ ಸರ್ಕಾರ ರಾಜ್ಯದ ‌ಮೇಲೆ ಮಲತಾಯಿ‌ ಧೋರಣೆ ಅನುಸರಿಸುತ್ತಿದೆ. FCI ಬಳಿ 29.5ಲಕ್ಷ ಟನ್ ಅಕ್ಕಿ‌ ಇದ್ದರೂ ರಾಜ್ಯಕ್ಕೆ ಕೊಟ್ಟಿಲ್ಲ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೊದಲು ಅಕ್ಕಿ ಕೊಡ್ತೇವೆ ಎಂದಿದ್ದರೂ ನಂತರ ಡಬಲ್ ಗೇಮ್ ಮಾಡಿ ಈಗ ಅಕ್ಕಿ ಸ್ಟಾಕ್ ಇಲ್ಲ ಅಂತಾರೆ. ಕೇಂದ್ರ ಎಥನಾಲ್ ತಯಾರಿಕೆಗೆ ಸಾವಿರಾರು ಟನ್ ಅಕ್ಕಿನ‌ ಬಲಾಡ್ಯರಿಗೆ ನೀಡ್ತಿದೆ ಆದರೆ ನಮ್ಮ ಕರ್ನಾಟಕ ರಾಜ್ಯಕ್ಕೆ ಮಾತ್ರ ಕೊಡಲು ಕೇಂದ್ರ ಬಳಿ ಅಕ್ಕಿ ಇಲ್ವಂತೆ ಎಂದು ಕೇಂದ್ರ ಸರ್ಕಾರದ ಬಗ್ಗೆ ಆಕ್ರೋಶ ವೀರಪ್ಪಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News