Avoid Doing These Works On Sunday: ಭಾನುವಾರ ಈ ಕೆಲಸ ಮಾಡುವುದರಿಂದ ದೂರವಿರಿ

Avoid Doing These Works On Sunday: ಭಾನುವಾರ ಸೂರ್ಯದೇವನ (Surya Dev) ದಿನ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಕೆಲ ಕೆಲಸಗಳನ್ನು ಭಾನುವಾರದಂದು ಅಪ್ಪಿತಪ್ಪಿಯೂ ಕೂಡ ಮಾಡಬಾರದು. ಜೊತೆಗೆ ಭಾನುವಾರ ಕೆಲ ವಸ್ತುಗಳ  ಖರೀದಿ ಅಶುಭ ಎಂದು ಹೇಳಲಾಗುತ್ತದೆ.

Last Updated : Jun 19, 2021, 09:50 PM IST
  • ಭಾನುವಾರ ಸೂರ್ಯದೇವನ ವಾರ ಎಂದು ಹೇಳಲಾಗುತ್ತದೆ.
  • ಈ ದಿನ ಕೆಲ ಕೆಲಸಗಳನ್ನು ಅಪ್ಪಿತಪ್ಪಿಯೂ ಕೂಡ ಮಾಡಬಾರದು ಎನ್ನಲಾಗುತ್ತದೆ
  • ಇದರ ಜೊತೆಗೆ ಕೆಲ ವಸ್ತುಗಳನ್ನು ಅಪ್ಪಿತಪ್ಪಿಯೂ ಕೂಡ ಮನೆಗೆ ತರಬಾರದು
Avoid Doing These Works On Sunday: ಭಾನುವಾರ ಈ ಕೆಲಸ ಮಾಡುವುದರಿಂದ ದೂರವಿರಿ title=
Avoid Doing These Works On Sunday (File Photo)

Avoid Doing These Works On Sunday - ನವದೆಹಲಿ: ಭಾನುವಾರ ಸೂರ್ಯದೇವನ ದಿನ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಭಾನುವಾರ ಸೂರ್ಯದೇವನನ್ನು ಪ್ರಸನ್ನಗೊಳಿಸಲು ಹಲವು ಉಪಾಯಗಳನ್ನು ಮಾಡುತ್ತಾರೆ. ಶುದ್ಧ ಅಂತಃಕ್ಕರಣದಿಂದ ಭಾನುವಾರ (Sunday) ಸೂರ್ಯದೇವನಿಗೆ ಪೂಜೆ ಸಲ್ಲಿಸುವವರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎನ್ನಲಾಗುತ್ತದೆ. ಈ ದಿನ ಸೂರ್ಯದೇವನ ಹೆಸರಿನಲ್ಲಿ ವೃತಕ್ಕೆ ಭಾರಿ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಾನುವಾರ ಸೂರ್ಯದೇವನ ವೃತ (Vrut) ಕೈಗೊಂಡರೆ, ವೃತ ಕೈಗೊಂಡವರ ಮನೋಕಾಮನೆಗಳು ಪೂರ್ತಿಯಾಗುತ್ತವೆ ಎನ್ನಲಾಗುತ್ತದೆ.

ಇದನ್ನೂ ಓದಿ-Lizard Interpretation: ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಅದು ಏನು ಸೂಚಿಸುತ್ತೆ, ಅದರ ಪರಿಣಾಮವೇನು

ಭಾನುವಾರ ಈ ಕೆಲಸಗಳು ವರ್ಜಿತ (Avoid These On Sunday)
ಭಾನುವಾರ ಸಾಮಾನ್ಯವಾಗಿ ರಜಾದಿನವಾಗಿರುವ ಕಾರಣ ಜನರು ಹಲವು ವಸ್ತುಗಳ ಶಾಪಿಂಗ್ ಮಾಡಿ ಮನೆಗೆ ತರುತ್ತಾರೆ. ಆದರೆ, ಈ ವಸ್ತುಗಳಲ್ಲಿ ಕೆಲ ವಸ್ತುಗಳು ಶುಭವಾಗಿದ್ದರೆ, ಕೆಲ ವಸ್ತುಗಳು ಅಶುಭ ಫಲ ನೀಡುತ್ತವೆ. ಹಾಗಾದರೆ ಬನ್ನಿ ಭಾನುವಾರ ಯಾವ ಕೆಲಸಗಳನ್ನು ಮಾಡುವುದರಿಂದ ಅಶುಭ ಫಲ ಪ್ರಾಪ್ತಿಯಾಗುತ್ತದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.

ಇದನ್ನೂ ಓದಿ-Planetary Transits: ಸೂರ್ಯನ ರಾಶಿ ಪರಿವರ್ತನೆಯಿಂದ ಈ ಮೂರು ರಾಶಿಯವರಿಗೆ ಭಾರೀ ನಷ್ಟ

ಭಾನುವಾರ ಈ ಸಂಗತಿಗಳ ಬಗ್ಗೆ ಗಮನವಿರಲಿ (Sunday Remedies)
>> ಭಾನುವಾರದಂದು ಕಬ್ಬಿಣದ ಸಾಮಾನು, ಫರ್ನಿಚರ್, ಹಾರ್ಡ್ ವೆಯರ್ ಖರೀದಿ ಅಶುಭ ಎಂದು ಹೇಳಲಾಗಿದೆ.
>> ನಂಬಿಕೆಗಳ ಪ್ರಕಾರ ಭಾನುವಾರ ತಾಮ್ರದ ವಸ್ತುಗಳಮಾರಾಟ ಮಾಡಬಾರದು ಎಂದು ಹೇಳಲಾಗುತ್ತದೆ. ಇದರಿಂದ ಸೂರ್ಯದೇವನ ಕೃಪೆ ನಿಂತು ಹೋಗುತ್ತದೆ ಎನ್ನಲಾಗಿದೆ.
>> ಈ ದಿನ ಕಪ್ಪು, ನೀಲಿ ಹಾಗೂ ಬೂದು ಬಣ್ಣದ ವಸ್ತ್ರಗಳನ್ನು ಧರಿಸಬಾರದು.
>> ಈ ದಿನ ಉಪ್ಪು ಸೇವನೆ ಕೂಡ ವರ್ಜಿತ ಎಂದು ಹೇಳಲಾಗುತ್ತದೆ. ಇದರಿಂದ ಮುಂದಕ್ಕೆ ಸಾಗಿಬರುತ್ತಿರುವ ನಿಮ್ಮ ಕೆಲಸಗಳು ನಿಂತುಹೋಗುತ್ತವೆ. ಜೊತೆಗೆ ಆರೋಗ್ಯ ಕೂಡ ಹದಗೆಡುತ್ತದೆ. ಸೂರ್ಯಾಸ್ತದ ಬಳಿಕ ಉಪ್ಪು ಸೇವನೆ ಬೇಡವೇ ಬೇಡ.
>> ಮಾಂಸ-ಮಧ್ಯಪಾನ (Alcohol) ಸೇವನೆ ಮಾಡಬಾರದು. ಇದರಿಂದ ಸೂರ್ಯದೇವ ಅಸಮಾಧಾನಗೊಳ್ಳುತ್ತಾನೆ ಎನ್ನಲಾಗಿದೆ. 
>> ಭಾನುವಾರ ಶಾರೀರಿಕ ಸಂಬಂಧ ಬೆಳೆಸುವುದರ ಮೇಲೂ ಕೂಡ ಶಾಸ್ತ್ರಗಳಲ್ಲಿ ನಿರ್ಬಂಧವಿದೆ.

ಇದನ್ನೂ ಓದಿ-Vastu : ಈ 5 ನೆರಳು ಮನೆಯ ಮೇಲೆ ಬೀಳಲೇ ಬಾರದು..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News