Green Cardamom : ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ ಏಲಕ್ಕಿ : ಹೇಗೆ? ಇಲ್ಲಿದೆ

ಏಲಕ್ಕಿ ನಿಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ ಮತ್ತು ಅದಕ್ಕಾಗಿ ನೀವು ಕೆಲವು ವಿಶೇಷ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ವ್ಯಕ್ತಿಯ ಜಾತಕದಲ್ಲಿ ಶುಕ್ರನು ಬಲಹೀನನಾಗಿದ್ದರೆ, ಏಲಕ್ಕಿಯ ಸಹಾಯದಿಂದ ಅದನ್ನು ಬಲಪಡಿಸಬಹುದು. ಇದಲ್ಲದೆ, ಸಣ್ಣ ಏಲಕ್ಕಿಯು ಆರ್ಥಿಕ ಸ್ಥಿತಿಯನ್ನು ಬಲಪಡಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.

Written by - Channabasava A Kashinakunti | Last Updated : Nov 24, 2022, 05:23 PM IST
  • ಏಲಕ್ಕಿ ಅಥವಾ ಹಸಿರು ಏಲಕ್ಕಿಯನ್ನು ಆಹಾರದ ರುಚಿ, ಸುವಾಸನೆಗೆ ಬಳಸಲಾಗುತ್ತದೆ
  • ಈ ಏಲಕ್ಕಿ ಜೀವನದ ಅನೇಕ ಪ್ರಮುಖ ಘಟ್ಟಗಳಲ್ಲಿ ಬಹಳ ಪ್ರಯೋಜನಕಾರಿ
  • ಸಣ್ಣ ಏಲಕ್ಕಿಯ ಪರಿಪೂರ್ಣ ಪರಿಹಾರ
Green Cardamom : ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ ಏಲಕ್ಕಿ : ಹೇಗೆ? ಇಲ್ಲಿದೆ title=

Green Cardamom : ಸಾಮಾನ್ಯವಾಗಿ, ಸಣ್ಣ ಏಲಕ್ಕಿ ಅಥವಾ ಹಸಿರು ಏಲಕ್ಕಿಯನ್ನು ಆಹಾರದ ರುಚಿ, ಸುವಾಸನೆಗೆ ಬಳಸಲಾಗುತ್ತದೆ. ಮತ್ತೊಂದೆಡೆ, ಜ್ಯೋತಿಷ್ಯದ ಪ್ರಕಾರ, ಈ ಏಲಕ್ಕಿ ಜೀವನದ ಅನೇಕ ಪ್ರಮುಖ ಘಟ್ಟಗಳಲ್ಲಿ ಬಹಳ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಲಾಗಿದೆ. ಏಲಕ್ಕಿ ನಿಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ ಮತ್ತು ಅದಕ್ಕಾಗಿ ನೀವು ಕೆಲವು ವಿಶೇಷ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ವ್ಯಕ್ತಿಯ ಜಾತಕದಲ್ಲಿ ಶುಕ್ರನು ಬಲಹೀನನಾಗಿದ್ದರೆ, ಏಲಕ್ಕಿಯ ಸಹಾಯದಿಂದ ಅದನ್ನು ಬಲಪಡಿಸಬಹುದು. ಇದಲ್ಲದೆ, ಸಣ್ಣ ಏಲಕ್ಕಿಯು ಆರ್ಥಿಕ ಸ್ಥಿತಿಯನ್ನು ಬಲಪಡಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.

ಸಣ್ಣ ಏಲಕ್ಕಿಯ ಪರಿಪೂರ್ಣ ಪರಿಹಾರ

ಯಾರ ಜಾತಕದಲ್ಲಿ ಶುಕ್ರನು ಬಲಹೀನನಾಗಿರುತ್ತಾನೋ ಮತ್ತು ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ಸು ಸಿಗುವುದಿಲ್ಲವೋ ಅವರು ಚಿಕ್ಕ ಏಲಕ್ಕಿಯ ವಿಶೇಷ ಪರಿಹಾರವನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ, ಮೊದಲು ಒಂದು ಲೋಟ ನೀರನ್ನು ಕುದಿಸಿ ಮತ್ತು ಅದರಲ್ಲಿ ಕೆಲವು ಸಣ್ಣ ಏಲಕ್ಕಿ ಬೀಜಗಳನ್ನು ಹಾಕಿ. ನಂತರ ನಿಮ್ಮ ಸ್ನಾನದ ನೀರಿನಲ್ಲಿ ಈ ನೀರನ್ನು ಬೆರೆಸಿ ಸ್ನಾನ ಮಾಡಿ. ಸ್ನಾನ ಮಾಡುವಾಗ 'ಜಯಂತಿ ಮಂಗಲ ಕಾಳಿ ಭದ್ರಕಾಳಿ ಕಪಾಲಿನಿ ದುರ್ಗಾ ಕ್ಷಮಾ ಶಿವ ಧಾತ್ರಿ ಸ್ವಾಹಾ ಸ್ವಧಾ ನಮೋಸ್ತುತೇ' ಎಂಬ ಮಂತ್ರವನ್ನು ಜಪಿಸುತ್ತಿರಿ. ಈ ಪರಿಹಾರವನ್ನು ಮಾಡುವುದರಿಂದ ಶುಕ್ರನ ಸ್ಥಾನವು ಬಲಗೊಳ್ಳುತ್ತದೆ.

ಇದನ್ನೂ ಓದಿ : ಮನೆಯ ಈ ದಿಕ್ಕಿನಲ್ಲಿ ನೆಟ್ಟರೆ ಈ ಬಳ್ಳಿ, ಲಕ್ಷ್ಮೀ ದೇವಿ ಬಿಡದೇ ಹರಿಸುತ್ತಾಳೆ ಕೃಪಾ ದೃಷ್ಟಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ಮತ್ತು ಪತಿ-ಪತ್ನಿಯರ ನಡುವೆ ಮನಸ್ತಾಪವಿದ್ದರೆ ಚಿಕ್ಕ ಏಲಕ್ಕಿಯಿಂದ ಮುಕ್ತಿ ಪಡೆಯಬಹುದು. ವೈವಾಹಿಕ ಜೀವನದಲ್ಲಿ ಸಂತೋಷಕ್ಕಾಗಿ, ಶುಕ್ರವಾರದಂದು 3 ಸಣ್ಣ ಏಲಕ್ಕಿಯನ್ನು ತೆಗೆದುಕೊಂಡು ಅದನ್ನು ನಿಮ್ಮ ದೇಹದಿಂದ ಸ್ಪರ್ಶಿಸಿ ನಂತರ ಅದನ್ನು ಸೀರೆ ಅಥವಾ ಇನ್ನಾವುದೇ ಬಟ್ಟೆಯಲ್ಲಿ ಕಟ್ಟಿಕೊಳ್ಳಿ ಮತ್ತು ಇಡೀ ದಿನ ನಿಮ್ಮೊಂದಿಗೆ ಇಟ್ಟುಕೊಳ್ಳಿ. ನಂತರ ಈ ಧಾನ್ಯಗಳನ್ನು ಪುಡಿಮಾಡಿ ಶನಿವಾರದ ಆಹಾರದಲ್ಲಿ ಮಿಶ್ರಣ ಮಾಡಿ. ಇದು ಪತಿ-ಪತ್ನಿಯರ ಜೀವನದಲ್ಲಿ ಮಧುರತೆಯನ್ನು ತರುತ್ತದೆ ಮತ್ತು ದಾಂಪತ್ಯ ಜೀವನವು ಸಂತೋಷದಾಯಕವಾಗಿರುತ್ತದೆ.

ಇದನ್ನೂ ಓದಿ : Panchaka 2022: ಆರಂಭಗೊಳ್ಳುತ್ತಿದೆ 'ಅಗ್ನಿ ಪಂಚಕ' ಮರೆತೂ ಕೂಡ ಈ ಕೆಲಸಗಳನ್ನು ಮಾಡಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News