Vastu Shastra : ಅಪ್ಪತಪ್ಪಿಯೂ ಇತರರ ಈ ವಸ್ತುಗಳನ್ನು ಬಳಸಬೇಡಿ, ಮನೆಯಲ್ಲಿ ದುರಾದೃಷ್ಟ ಬರುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ ಬೇರೆಯವರ ಕೈಗಡಿಯಾರವನ್ನು ಧರಿಸಬಾರದು. ಗಡಿಯಾರವು ಜೀವನದ ಸ್ಥಿತಿಯೊಂದಿಗೆ ಸಂಬಂಧಿಸಿದೆ ಮತ್ತು ಇನ್ನೊಬ್ಬರ ಗಡಿಯಾರವನ್ನು ಧರಿಸುವುದರಿಂದ ಅವನ ದುರದೃಷ್ಟವು ನಿಮ್ಮ ತಲೆಗೆ ಬರಬಹುದು ಎಂದು ನಂಬಲಾಗಿದೆ.

Written by - Channabasava A Kashinakunti | Last Updated : Nov 24, 2022, 08:19 PM IST
  • ಮನೆ ಅಥವಾ ಕೆಲಸದ ಸ್ಥಳದಲ್ಲಿ ವಾಸ್ತು ಶಾಸ್ತ್ರ
  • ನೀವು ಯಶಸ್ಸು ಮತ್ತು ಪ್ರಗತಿಯನ್ನು ಪಡೆಯುತ್ತೀರಿ
  • ಈ ವಿಷಯಗಳನ್ನು ಯಾರಿಂದಲೂ ಕೇಳಬೇಡಿ
Vastu Shastra : ಅಪ್ಪತಪ್ಪಿಯೂ ಇತರರ ಈ ವಸ್ತುಗಳನ್ನು ಬಳಸಬೇಡಿ, ಮನೆಯಲ್ಲಿ ದುರಾದೃಷ್ಟ ಬರುತ್ತದೆ title=

Vastu Shastra in Kannada : ಮನೆ ಅಥವಾ ಕೆಲಸದ ಸ್ಥಳದಲ್ಲಿ ವಾಸ್ತು ಶಾಸ್ತ್ರವನ್ನು ಮನಸ್ಸಿನಲ್ಲಿಟ್ಟುಕೊಂಡರೆ, ನೀವು ಯಶಸ್ಸು ಮತ್ತು ಪ್ರಗತಿಯನ್ನು ಪಡೆಯುತ್ತೀರಿ. ಆದರೆ ವಾಸ್ತು ಪ್ರಕಾರ ಮಾಡುವ ಕೆಲವು ತಪ್ಪುಗಳು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ನೀವು ಯಾರೊ ಬಳಸಿದ ಕೆಲವು ವಸ್ತುಗಳನ್ನು ಬಳಸಿದರೆ, ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ವಾಸ್ತುದಲ್ಲಿ ತಿಳಿಸಲಾಗಿದೆ. ಅದಕ್ಕಾಗಿಯೇ ನೀವು ಬೇರೆಯವರ ವಸ್ತುಗಳನ್ನು ತಪ್ಪಾಗಿಯೂ ಬಳಸಬಾರದು. ವಾಸ್ತು ಪ್ರಕಾರ ಇತರರು ಬಳಸಿದ ಯಾವ ವಸ್ತುಗಳನ್ನು ಬಳಸಬಾರದು? ಇಲ್ಲಿದೆ ನೋಡಿ ಮಾಹಿತಿ.

ವಾಸ್ತು ಶಾಸ್ತ್ರದ ಪ್ರಕಾರ, ಬೇರೆಯವರ ವಸ್ತುಗಳನ್ನು ನೀವು ಕೇಳಿ ಬಳಸಿದರೆ, ನೀವು ನಕಾರಾತ್ಮಕತೆಯನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ನೀವು ಆ ವ್ಯಕ್ತಿಯ ದುರದೃಷ್ಟವನ್ನು ಎದುರಿಸಬೇಕಾಗಬಹುದು. ಅದಕ್ಕಾಗಿಯೇ ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ.

ಇದನ್ನೂ ಓದಿ : Green Cardamom : ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ ಏಲಕ್ಕಿ : ಹೇಗೆ? ಇಲ್ಲಿದೆ

ಈ ವಿಷಯಗಳನ್ನು ಯಾರಿಂದಲೂ ಕೇಳಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ಬೇರೆಯವರ ಕೈಗಡಿಯಾರವನ್ನು ಧರಿಸಬಾರದು. ಗಡಿಯಾರವು ಜೀವನದ ಸ್ಥಿತಿಯೊಂದಿಗೆ ಸಂಬಂಧಿಸಿದೆ ಮತ್ತು ಇನ್ನೊಬ್ಬರ ಗಡಿಯಾರವನ್ನು ಧರಿಸುವುದರಿಂದ ಅವನ ದುರದೃಷ್ಟವು ನಿಮ್ಮ ತಲೆಗೆ ಬರಬಹುದು ಎಂದು ನಂಬಲಾಗಿದೆ.

ಇದಲ್ಲದೆ, ನೀವು ಬೇರೆಯವರ ಬಟ್ಟೆಗಳನ್ನು ಧರಿಸಬಾರದು. ಏಕೆಂದರೆ ಇದರಿಂದ ಇನ್ನೊಬ್ಬರ ದುರಾದೃಷ್ಟ ನಿಮ್ಮ ದುರಾದೃಷ್ಟವೂ ಆಗಬಹುದು ಮತ್ತು ಅದು ನಕಾರಾತ್ಮಕತೆಯನ್ನೂ ತರುತ್ತದೆ. ಅದಕ್ಕಾಗಿಯೇ ನೀವು ಇನ್ನೊಬ್ಬರ ಬಟ್ಟೆಗಳನ್ನು ಧರಿಸಬಾರದು.

ವಾಸ್ತು ಶಾಸ್ತ್ರದ ಪ್ರಕಾರ, ಯಾರಾದರೂ ನಿಮಗೆ ಉಡುಗೊರೆ ನೀಡಿದರೆ, ಆ ಉಡುಗೊರೆಯನ್ನು ಬೇರೆ ಯಾರಿಗೂ ಮಿಸ್ ಆಗಿಯೂ ನೀಡಬೇಡಿ. ಆ ಉಡುಗೊರೆಯನ್ನು ನೀವೇ ಬಳಸಿದರೆ ಉತ್ತಮ.

ಅನೇಕ ಬಾರಿ ಜನರು ತಮ್ಮ ಅದೃಷ್ಟ ಅಥವಾ ಮಂಗಳಕರ ವಸ್ತುಗಳನ್ನು ಇತರರಿಗೆ ಉಡುಗೊರೆಯಾಗಿ ನೀಡುತ್ತಾರೆ, ಇದು ವಾಸ್ತು ಪ್ರಕಾರ ಸಂಪೂರ್ಣವಾಗಿ ತಪ್ಪು. ನಿಮ್ಮ ಅದೃಷ್ಟವನ್ನು ನೀವು ಬೇರೆಯವರಿಗೆ ನೀಡುತ್ತಿದ್ದೀರಿ ಎಂದರ್ಥ.

ವಾಸ್ತು ಶಾಸ್ತ್ರದ ಪ್ರಕಾರ, ಯಾರೊಬ್ಬರ ಹಾಸಿಗೆಯ ಮೇಲೆ ಮಲಗುವುದು ವಾಸ್ತುದೋಷವನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ, ನೀವು ಆರ್ಥಿಕ ಬಿಕ್ಕಟ್ಟನ್ನು ಸಹ ಎದುರಿಸಬೇಕಾಗಬಹುದು. ಅದಕ್ಕಾಗಿಯೇ ಇತರರ ಹಾಸಿಗೆಯನ್ನು ಬಳಸುವುದನ್ನು ತಪ್ಪಿಸುವುದು ಉತ್ತಮ.

ನೀವು ಯಾರಿಗಾದರೂ ಪೆನ್ಸಿಲ್ ಅಥವಾ ಪೆನ್ ಅನ್ನು ಕೇಳಿದರೆ, ಕೆಲಸ ಮುಗಿದ ನಂತರ ಅದನ್ನು ಎಚ್ಚರಿಕೆಯಿಂದ ಹಿಂತಿರುಗಿಸಿ. ಏಕೆಂದರೆ ವಾಸ್ತು ಪ್ರಕಾರ, ಈ ಕಾರಣದಿಂದಾಗಿ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಇದನ್ನೂ ಓದಿ : Aquarium Vastu Tips : ಅಕ್ವೇರಿಯಂನಲ್ಲಿ ಮೀನು ಸಾಯುವುದು ಈ ಸಂಕೇತವಾಗಿದೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News