ಅಡುಗೆ ಮನೆಯಲ್ಲಿ ಅಂಟಿಕೊಂಡಿರುವ ಜಿಗುಟನ್ನು ಸುಲಭವಾಗಿ ಶುಚಿಗೊಳಿಸುವ ಸಿಂಪಲ್ ಹ್ಯಾಕ್ಸ್ ಇಲ್ಲಿದೆ

ಈ ಕೆಲಸ ಸುಲಭವಾಗಿ ಮತ್ತು ತ್ವರಿತವಾಗಿ ಪೂರ್ಣಗೊಳ್ಳಬೇಕಾದರೆ ಕೆಲವು ಹ್ಯಾಕ್ ಗಳ ಸಹಾಯ ತೆಗೆದುಕೊಳ್ಳಬಹುದು.ಅಂಥಹ ಕೆಲವು ಸಿಂಪಲ್ ಹ್ಯಾಕ್ ಗಳ ಮಾಹಿತಿ ಇಲ್ಲಿದೆ.

Written by - Ranjitha R K | Last Updated : Jan 18, 2024, 12:01 PM IST
  • ಪಾತ್ರೆಗಳ ಕಲೆಗಳನ್ನು ತೆಗೆದುಹಾಕುವ ವಿಧಾನ
  • ಕುದಿಯುವ ನಂತರ ಹಾಲು ಉಕ್ಕದಂತೆ ನೋಡಿಕೊಳ್ಳುವುದು ಹೇಗೆ?
  • ನೆನಪಿಡಲೇಬೇಕಾದ ಕೆಲವು ವಿಷಯಗಳು ಇಲ್ಲಿವೆ
ಅಡುಗೆ ಮನೆಯಲ್ಲಿ ಅಂಟಿಕೊಂಡಿರುವ ಜಿಗುಟನ್ನು ಸುಲಭವಾಗಿ ಶುಚಿಗೊಳಿಸುವ ಸಿಂಪಲ್ ಹ್ಯಾಕ್ಸ್ ಇಲ್ಲಿದೆ title=

ಬೆಂಗಳೂರು : ನಾವು ಅಡುಗೆ ಮನೆಯನ್ನು ಶುಚಿಗೊಳಿಸುವಾಗ, ಕೆಲವು ವಸ್ತುಗಳನ್ನು ಸ್ವಚ್ಛಗೊಳಿಸಲು ತುಂಬಾ ಕಷ್ಟವಾಗುತ್ತದೆ. ಎಣ್ಣೆಯ ಜಿಡ್ಡು, ಮಸಾಲೆ ಪದಾರ್ಥಗಳ ಅಂಟು ಹೀಗೆ ಅಡುಗೆ ಮನೆಯ ಸ್ಲ್ಯಾಬ್ ಗಳಲ್ಲಿ ಗೋಡೆ ಟೈಲ್ಸ್ ಗಳಲ್ಲಿ ಅಂಟಿಕೊಂಡಿರುತ್ತದೆ. ಇದನ್ನು ಶುಚಿಗೊಳಿಸುವ ಕೆಲಸ ಸುಲಭವಾದುದಲ್ಲ. ಹೀಗಾಗಿ ಅಡುಗೆ ಮನೆ ಶುಚಿಗೊಳಿಸುವ ಕೆಲಸ ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಈ ಕೆಲಸ ಸುಲಭವಾಗಿ ಮತ್ತು ತ್ವರಿತವಾಗಿ ಪೂರ್ಣಗೊಳ್ಳಬೇಕಾದರೆ ಕೆಲವು ಹ್ಯಾಕ್ ಗಳ ಸಹಾಯ ತೆಗೆದುಕೊಳ್ಳಬಹುದು. ಅಂಥಹ ಕೆಲವು ಸಿಂಪಲ್ ಹ್ಯಾಕ್ ಗಳ ಮಾಹಿತಿ ಇಲ್ಲಿದೆ. 

ಪಾತ್ರೆಗಳ ಕಲೆಗಳನ್ನು ತೆಗೆದುಹಾಕುವ ವಿಧಾನ :
ಹೆಚ್ಚಾಗಿ ಗಾಜಿನ ಪಾತ್ರೆಗಳು ಅಥವಾ ಪಾರದರ್ಶಕ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಕಲೆಗಳಾದರೆ ಅದನ್ನು ತೆಗೆದು ಹಾಕುವುದು ತುಂಬಾ ಕಷ್ಟ. ಅಂಥಹ ಕಲೆಗಳನ್ನು ಸ್ವಚ್ಛಗೊಳಿಸಲು, ಚಹಾ ತಯಾರಿಸಿದ ನಂತರ ಉಳಿಯುವ ಚಹಾ ಎಲೆಗಳನ್ನು ಮತ್ತೊಮ್ಮೆ ಕುದಿಸಿ, ಆ ನೀರಿಗೆ ಲಿಕ್ವಿಡ್ ಡಿಶ್ ವಾಶ್ ಸೇರಿಸಬೇಕು. ನೀವು ಸ್ವಚ್ಚಗೊಳಿಸಬೇಕು ಅಂದುಕೊಂಡಿರುವ ಪಾತ್ರೆಯ ಮೇಲೆ ಈ ಮಿಶ್ರಣವನ್ನು ಸುರಿದು ತೊಳೆದರೆ ಪಾತ್ರೆ ಸುಲಭವಾಗಿ ಸ್ವಚ್ಚವಾಗುತ್ತದೆ. 

ಇದನ್ನೂ ಓದಿ : Custard Powder: ಫ್ರೂಟ್ ಸಲಾಡ್ ವಿತ್‌ ಕಸ್ಟರ್ಡ್‌ ಪೌಡರ್‌ ಮಿಕ್ಸ್‌ನ ಪ್ರಯೋಜನಗಳೇನು ಗೊತ್ತಾ?

ಕುದಿಯುವ ನಂತರ ಹಾಲು ಉಕ್ಕದಂತೆ ನೋಡಿಕೊಳ್ಳುವುದು ಹೇಗೆ? : 
ಹಾಲನ್ನು ಕುದಿಸುವುದಕ್ಕೆ ಗ್ಯಾಸ್ ಮೇಲೆ ಇಟ್ಟು ಸಾಮಾನ್ಯವಾಗಿ ನಾವು ಬೇರೆ ಕೆಲಸಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಹೀಗಾದಾಗ ಅನೇಕ ಬಾರಿ ಹಾಲು ಉಕ್ಕಿ ಹೊರಕ್ಕೆ ಚೆಲ್ಲುತ್ತದೆ. ಹೀಗೆ ಪಾತ್ರೆಯಿಂದ ಹೊರಗೆ ಚೆಲ್ಲಿ ಅಡುಗೆ ಮನೆ ಸ್ಲ್ಯಾಬ್ ತುಂಬಾ ಹರಡಿಕೊಂಡಿರುವ ಹಾಲನ್ನು ಶುಚಿಗೊಳಿಸುವುದು ಅಷ್ಟು ಸುಲಭವಲ್ಲ. ಹಾಲು ಉಕ್ಕಿ ಕೆಳಗೆ ಚೆಲ್ಲಬಾರದು ಎಂದಾದರೆ, ಹಾಲಿನ ಪಾತ್ರೆಯ ಮೇಲ್ಭಾಗದಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಹಾಲು ಕುದಿಯುವಾಗ ಒಂದು ರೀತಿಯ ಸದ್ದು ಕೇಳಿಸುತ್ತದೆ.ಆಗ ಬೇಗನೆ ಗ್ಯಾಸ್ ಅನ್ನು ಆಫ್ ಮಾಡಬಹುದು.

ಈ ವಿಷಯಗಳನ್ನು ನೆನಪಿನಲ್ಲಿಡಿ :
ಆಲೂಗಡ್ಡೆಯನ್ನು ಬೇಯಿಸುವಾಗ ಕುಕ್ಕರ್ ಒಳಗಿನ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುವುದನ್ನು ನೀವು ಗಮನಿಸಿರಬಹುದು. ಹಾಗಾಗಬಾರದು ಎಂದಾದರೆ ಮೊದಲು ಕುಕ್ಕರ್‌ನಲ್ಲಿ ಹೆಚ್ಚು ನೀರು ಹಾಕಬೇಡಿ.ಒಂದು ವೇಳೆ ಕುಕ್ಕರ್‌ನಲ್ಲಿ ನೀರು ಹಾಕಿದರೆ, ಅದರಲ್ಲಿ ಉಪ್ಪು ಮತ್ತು ನಿಂಬೆ ಸಿಪ್ಪೆಯನ್ನು ಸೇರಿಸಿ. ಹೀಗೆ ಮಾಡಿದಾಗ ಆಲೂಗಡ್ಡೆಯ ಸಿಪ್ಪೆ ಸುಲಿಯುವ ಕೆಲಸ ಕೂಡಾ ಸುಲಭವಾಗುತ್ತದೆ. ಅಲ್ಲದೆ ನಿಂಬೆ ಇರುವುದರಿಂದ ಕುಕ್ಕರ್ ಕಪ್ಪು ಬಣ್ಣಕ್ಕೆ ಕೂಡಾ ತಿರುಗುವುದಿಲ್ಲ.

ಇದನ್ನೂ ಓದಿ : ಚಳಿಗಾಲದ ಸಂಜೆಗೆ ಆರೋಗ್ಯಕರ ಸ್ನ್ಯಾಕ್ಸ್.. ತೂಕ ಇಳಿಕೆಗೆ ಹೇಳಿ ಮಾಡಿಸಿದ ತಿಂಡಿಗಳು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News