Weight Loss: ತೂಕ ಇಳಿಕೆ ಸೇರಿದಂತೆ ಹಲವು ಕಾಯಿಲೆಗಳಿಗೆ ರಾಮಬಾಣ ತಾಮ್ರ ಜಲ, ಹೇಗೆ ಸೇವಿಸಬೇಕು?

Copper Vessel Water Benefits: ರಾತ್ರಿ ಹೊತ್ತು ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆ ಅದನ್ನು ಸೇವಿಸುವುದರಿಂದ ಹಲವು ಆರೋಗ್ಯಕರ ಲಾಭಗಳು ಸಿಗುತ್ತವೆ. ಬಹುತೇಕರಿಗೆ ಈ ಸಂಗತಿ ತಿಳಿದಿದೆ. ಆದರೆ, ಈ ನೀರು ತೂಕ ಇಳಿಕೆಗೆ ಮತ್ತು ಸೌಂದರ್ಯ ಹೆಚ್ಚಿಸಲು ಕೂಡ ಸಹಕಾರಿಯಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೇಗೆ ... ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Aug 28, 2022, 02:21 PM IST
  • ರೀರವನ್ನು ನಿರ್ವಿಷಗೊಳಿಸಲು ರಾತ್ರಿ ಇಡೀ ಒಂದು ತಾಮ್ರದ ಪಾತ್ರೆಯಲ್ಲಿರಿಸಿದ ನೀರು ಟಾನಿಕ್ ರೀತಿ ಕೆಲಸ ಮಾಡುತ್ತದೆ.
  • ರಾತ್ರಿ ಇಡೀ ಒಂದು ತಾಮ್ರದ ಜಗ್ ಅಥವಾ ಪಾತ್ರೆಯಲ್ಲಿ ನೀರನ್ನು ತುಂಬಿ ಇಡಿ ಮತ್ತು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸಿ.
  • ಇದರಿಂದ ಶರೀರದ ಕಾಪರ್ ಕೊರತೆ ನೀಗುತ್ತದೆ ಮತ್ತು ಶರೀರದಿಂದ ವಿಷಕಾರಿ ಪದಾರ್ಥಗಳು ಹೊರಹಾಕಲ್ಪಡುತ್ತವೆ.
Weight Loss: ತೂಕ ಇಳಿಕೆ ಸೇರಿದಂತೆ ಹಲವು ಕಾಯಿಲೆಗಳಿಗೆ  ರಾಮಬಾಣ ತಾಮ್ರ ಜಲ, ಹೇಗೆ ಸೇವಿಸಬೇಕು? title=
Copper Vessel Water Benefits

Copper Vessel Water Benefits: ಶರೀರವನ್ನು ನಿರ್ವಿಷಗೊಳಿಸಲು ರಾತ್ರಿ ಇಡೀ ಒಂದು ತಾಮ್ರದ ಪಾತ್ರೆಯಲ್ಲಿರಿಸಿದ  ನೀರು ಟಾನಿಕ್ ರೀತಿ ಕೆಲಸ ಮಾಡುತ್ತದೆ. ರಾತ್ರಿ ಇಡೀ ಒಂದು ತಾಮ್ರದ ಜಗ್ ಅಥವಾ ಪಾತ್ರೆಯಲ್ಲಿ ನೀರನ್ನು ತುಂಬಿ ಇಡಿ ಮತ್ತು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸಿ. ಇದರಿಂದ ಶರೀರದ ಕಾಪರ್ ಕೊರತೆ ನೀಗುತ್ತದೆ ಮತ್ತು ಶರೀರದಿಂದ ವಿಷಕಾರಿ ಪದಾರ್ಥಗಳು ಹೊರಹಾಕಲ್ಪಡುತ್ತವೆ. ಖಾಲಿ ಹೊಟ್ಟೆ ಈ ನೀರಿನ ಸೇವನೆಯು ಹೊಟ್ಟೆಯನ್ನು ಸ್ವಚ್ಛಗೊಳಿಸಲು ಲಾಭಕಾರಿಯಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವ ಯಾವ ರೀತಿಯಲ್ಲಿ ಈ ನೀರು ದೇಹಕ್ಕೆ ಲಾಭ ತಲುಪಿಸುತ್ತದೆ ಎಂಬುದನ್ನು ತಿಲಿದುಕೊಳೋಣ ಬನ್ನಿ

1. ತೂಕ ಇಳಿಕೆಗಾಗಿ- ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟ ನೀರು ಶರೀರದಲ್ಲಿ ಸಂಗ್ರಹಣೆಯಾದ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ. ಶರೀರವನ್ನು ನಿರ್ವಿಷಗೊಳಿಸಲು ಮತ್ತು ಆದರೆ ಆಂತರಿಕ ಸ್ವಚ್ಚತೆಗೆ ತಾಮ್ರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹೀಗಾಗಿ ಒಂದು ವೇಳೆ ನೀವು ಕೂಡ ನಿಮ್ಮ ಶರೀರದಲ್ಲಿ ಕೊಬ್ಬು ಸಂಗ್ರಹಣೆಯಾಗದಿರಲು ಬಯಸುತ್ತಿದ್ದರೆ ಮತ್ತು ತೂಕ ಇಳಿಕೆಯನ್ನು ಮಾಡಿಕೊಳ್ಳಲು ಬಯಸುತ್ತಿದ್ದರೆ, ಬೆಳಗ್ಗೆ ಖಾಲಿ ಹೊಟ್ಟೆ ತಾಮ್ರ ಜಲದ ಉಪಯೋಗ ಆರಂಭಿಸಿ.

2. ತ್ವಚೆಯ ಅರೋಗ್ಯ ರಕ್ಷಣೆ- ದೇಹದಲ್ಲಿ ಮೇಲೆನಿನ್ ಉತ್ಪಾದನೆಗೆ ತಾಮ್ರ ಜಲ ಉತ್ತೇಜನ ನೀಡುತ್ತದೆ. ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಮೆಲನಿನ್ ಕೊಡೆಯಂತೆ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದಾಗಿ, ಚರ್ಮವು ಬೇಗನೆ ಸುಕ್ಕುಗಟ್ಟುವುದಿಲ್ಲ ಮತ್ತು ವಯಸ್ಸು ಚರ್ಮದ ಮೇಲೆ ಪ್ರಾಬಲ್ಯ ಸಾಧಿಸುವುದಿಲ್ಲ. ಇದಲ್ಲದೆ, ಕಣ್ಣುಗಳು ಮತ್ತು ಕೂದಲಿನ ಬಣ್ಣವನ್ನು ಕಾಪಾಡಿಕೊಳ್ಳಲು ದೇಹಕ್ಕೆ ಮೆಲನಿನ್ ಅಗತ್ಯವಿರುತ್ತದೆ.

3. ಸಂಧಿವಾತ ಸಮಸ್ಯೆ ನಿವಾರಣೆ- ನಿಮಗೆ ಸಂಧಿವಾತದ ಸಮಸ್ಯೆ ಇದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಸಂಧಿವಾತದ ಇತಿಹಾಸವಿದ್ದರೆ, ನೀವು ಖಂಡಿತವಾಗಿಯೂ ತಾಮ್ರದ ನೀರನ್ನು ಸೇವಿಸಬೇಕು. ಏಕೆಂದರೆ ತಾಮ್ರದ ಪಾತ್ರೆಯಲ್ಲಿ ಇರಿಸಲಾದ ನೀರು ಸಾಕಷ್ಟು ಪ್ರಮಾಣದಲ್ಲಿ ತಾಮ್ರದ ಅಂಶವನ್ನು ಹೊಂದಿರುತ್ತದೆ ಮತ್ತು ತಾಮ್ರವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಅಂದರೆ, ದೇಹ ಮತ್ತು ಕೀಲುಗಳಲ್ಲಿ ಉರಿಯೂತದ ಸಮಸ್ಯೆಯನ್ನು ಅದು ತಡೆಯುತ್ತದೆ. ತಾಮ್ರದ ನೀರು ದೇಹದಲ್ಲಿನ ಯೂರಿಕ್ ಆಮ್ಲದ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಯೂರಿಕ್ ಆಮ್ಲವು ಸರಿಯಾಗಿದ್ದರೆ, ಗೌಟ್ ಅರ್ಥರೈಟಿಸ್ ಸಮಸ್ಯೆಯ ಅಪಾಯ ಸಾಕಷ್ಟು ಕಡಿಮೆಯಾಗುತ್ತದೆ.

4. ರಕ್ತಹೀನತೆಯ ಸಮಸ್ಯೆ ನಿವಾರಣೆ- ದೇಹದಲ್ಲಿ ರಕ್ತದ ಕೊರತೆಯಿದ್ದರೆ, ಅಂದರೆ ರಕ್ತಹೀನತೆಯ ಸಮಸ್ಯೆ ಇದ್ದರೆ ತಾಮ್ರದ ನೀರನ್ನು ಸೇವಿಸಬೇಕು. ಈ ನೀರನ್ನು ಸೇವಿಸುವುದರಿಂದ ದೇಹದ ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ನೀವು ಸೇವಿಸುವ ಆಹಾರದಲ್ಲಿನ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ದೇಹವು ಹೀರಿಕೊಳ್ಳುತ್ತದೆ. ಇದರಿಂದ ಅಗತ್ಯವಿರುವ ಪ್ರಮಾಣದ ರಕ್ತವನ್ನು ಉತ್ಪಾದಿಸಲು ದೇಹವು ಈ ಪೋಷಕಾಂಶಗಳನ್ನು ಬಳಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ-Blood Sugar Level: ರಕ್ತದಲ್ಲಿನ ಸಕ್ಕರೆ ಮಟ್ಟ ಎಷ್ಟಿರಬೇಕು? ಮಧುಮೇಹ ಪತ್ತೆಗೆ ಇದೇ ಸುಲಭ ವಿಧಾನ

5. ಹೃದ್ರೋಗ ತಡೆಯುವಲ್ಲಿ ಪ್ರಯೋಜನಕಾರಿ- ತಾಮ್ರದ ನೀರು ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ, ಯಾರೊಬ್ಬರ ಕುಟುಂಬದ ಇತಿಹಾಸದಲ್ಲಿ ಯಾರಾದರೂ ಹೃದ್ರೋಗ ಅಥವಾ ಹೃದ್ರೋಗವನ್ನು ಹೊಂದಿದ್ದರೆ, ತಾಮ್ರದ ನೀರು ಸೇವನೆಯಿಂದ ನಿಮ್ಮ ದಿನವನ್ನು ಪ್ರಾರಂಭಿಸಿ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.

ಇದನ್ನೂ ಓದಿ-Chikoo Fruit: ಚಿಕ್ಕೂ ಹಣ್ಣು ಒಂದಲ್ಲ ಹಲವಾರು ರೋಗಗಳಿಗೆ ಪರಿಹಾರ ನೀಡುತ್ತದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News