Karnataka Weather: ಈ ಭಾಗದಲ್ಲಿ ಭಾರೀ ಮಳೆ… ವಿವಿಧೆಡೆ ಏರಲಿದೆ ಬಿಸಿಲಿನ ತಾಪ! ಅಪಾಯದ ಬಗ್ಗೆ ಇಲಾಖೆ ಮುನ್ಸೂಚನೆ

Karnataka Weather Update 15-05-2023: ಮೇ 13 ರಿಂದ ಮೇ 16 ರವರೆಗೆ ಈಶಾನ್ಯ ಭಾರತದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಸೂಚಿಸಿದೆ. ಇನ್ನು ಮೇ 14-16 ನಡುವೆ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ, ಮೇ 13-16ರ ನಡುವೆ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Written by - Bhavishya Shetty | Last Updated : May 15, 2023, 07:30 AM IST
    • ಮೇ 15 ರಿಂದ ಪೂರ್ವ ಭಾರತದಲ್ಲಿ ಶಾಖದ ಅಲೆಯು ಮಿತಿ ಮೀರಲಿದೆ
    • ಮೇ 13 ರಿಂದ ಮೇ 16 ರವರೆಗೆ ಈಶಾನ್ಯ ಭಾರತದಲ್ಲಿ ಮಳೆಯಾಗುವ ಸಾಧ್ಯತೆಯಿದೆ
    • ಶಾಖದ ಅಲೆಯ ಹಿನ್ನೆಲೆಯಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿತ್ತು.
Karnataka Weather: ಈ ಭಾಗದಲ್ಲಿ ಭಾರೀ ಮಳೆ… ವಿವಿಧೆಡೆ ಏರಲಿದೆ ಬಿಸಿಲಿನ ತಾಪ! ಅಪಾಯದ ಬಗ್ಗೆ ಇಲಾಖೆ ಮುನ್ಸೂಚನೆ title=
Karnataka Weather Update

Karnataka Weather Update 15-05-2023: ಮುಂದಿನ ಮೂರು ದಿನಗಳಲ್ಲಿ ಭಾರತದ ಹಲವು ಭಾಗಗಳಲ್ಲಿ ಶಾಖದ ಅಲೆಗಳು ಹೆಚ್ಚಾಗಲಿವೆ ಎಂದು ಭಾರತೀಯ ಮಾಪನಶಾಸ್ತ್ರ ಅಥವಾ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಮೇ 12 ಮತ್ತು 13 ರಂದು ಪಶ್ಚಿಮ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಮಳೆಯಾಗಿದೆ. ಆದರೆ ಇಂದಿನಿಂದ ಅಂದರೆ ಮೇ 15 ರಿಂದ ಪೂರ್ವ ಭಾರತದಲ್ಲಿ ಶಾಖದ ಅಲೆಯು ಮಿತಿ ಮೀರಲಿದೆ ಎಂದು  ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Shani Jayanti 2023: ಈ ರಾಶಿಯವರನ್ನು ಎಂದೂ ಕೈಬಿಡದೆ ಮುನ್ನಡೆಸುತ್ತಾನೆ ಶನಿದೇವ! ಹೋದಲ್ಲೆಲ್ಲಾ ದುಡ್ಡು-ಗೌರವ ಖಚಿತ

ಮೇ 13 ರಿಂದ ಮೇ 16 ರವರೆಗೆ ಈಶಾನ್ಯ ಭಾರತದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಸೂಚಿಸಿದೆ. ಇನ್ನು ಮೇ 14-16 ನಡುವೆ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ, ಮೇ 13-16ರ ನಡುವೆ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಮೇ 15 ರಿಂದ 16ರವರೆಗೆ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಭಾರಿ ಬೀಳುವ ಸಾಧ್ಯತೆಯಿದೆ. ಇನ್ನುಳಿದಂತೆ ದೇಶದ ಉಳಿದ ಭಾಗಗಳಲ್ಲಿ ಯಾವುದೇ ಮಹತ್ವದ ಹವಾಮಾನ ಬದಲಾವಣೆ ಕಾಣುತ್ತಿಲ್ಲ.

ಬಿಸಿಗಾಳಿ ಎಚ್ಚರಿಕೆ:

ಮೇ 15 ಮತ್ತು 16 ರಂದು ಬಿಹಾರ, ಒಡಿಶಾ, ಗಂಗಾ ಪಶ್ಚಿಮ ಬಂಗಾಳ, ಕರಾವಳಿ ಆಂಧ್ರ ಪ್ರದೇಶ ಮತ್ತು ಯಾನಂನಲ್ಲಿ ಬಿಸಿಗಾಳಿ ಪ್ರಮಾಣ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ.

ತೇವಾಂಶವುಳ್ಳ ಗಾಳಿ ಮತ್ತು ಹೆಚ್ಚಿನ ತಾಪಮಾನದ ಕಾರಣದಿಂದಾಗಿ, ಮುಂದಿನ 2 ದಿನಗಳಲ್ಲಿ ಕೊಂಕಣದಲ್ಲಿ ಬಿಸಿ ಮತ್ತು ಅಸ್ವಸ್ಥತೆಯ ವಾತಾವರಣವು ತುಂಬಾ ಇರುತ್ತದೆ ಎಂದು IMD ಉಲ್ಲೇಖಿಸಿದೆ.

ಇದನ್ನೂ ಓದಿ: Horoscope: ಇಂದು ಈ ರಾಶಿಯವರಿಗೆ ವ್ಯಾಪಾರದಲ್ಲಿ ಅಪಾರ ಧನಲಾಭ; ಅಂದುಕೊಂಡ ಕಾರ್ಯ ಸಿದ್ಧಿಸುವುದು!

ಬಿಸಿಲಿಗೆ ಯೆಲ್ಲೋ ಅಲರ್ಟ್!

ಸೌರಾಷ್ಟ್ರ ಮತ್ತು ಕಚ್‌ನಲ್ಲಿ ಮೇ 13 ರವರೆಗೆ ತೀವ್ರವಾದ ಶಾಖದ ಅಲೆಯ ಹಿನ್ನೆಲೆಯಲ್ಲಿ ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಆದರೆ ಮೇ 14-16 ರವರೆಗೆ ಅತಿ ಹೆಚ್ಚು ಮಳೆಯಾಗುವ ದಕ್ಷಿಣ ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News