ಗೋರಕ್ಷಣೆ ಜಾಗೃತಿಗೆ ಅಷ್ಟಯಾಮ ಯಜ್ಞಕ್ಕೆ ಮುಂದಾದ ಬಿಜೆಪಿ !

ಭಾರತದಲ್ಲಿ ಜಾನುವಾರು ಸಂಖ್ಯೆಯನ್ನು ರಕ್ಷಿಸುವ ಉದ್ದೇಶದಿಂದ ಬಿಜೆಪಿ ಫೆಬ್ರವರಿ 2 ರಂದು ಬೆಂಗಳೂರಿನಲ್ಲಿ 24 ಗಂಟೆಗಳ 'ಗೋರಕ್ಷಾ ಅಷ್ಟಯಾಮ ಯಜ್ಞ' ಮಾಡಲು ಹೊರಟಿದೆ.    

Last Updated : Jan 30, 2018, 06:48 PM IST
ಗೋರಕ್ಷಣೆ ಜಾಗೃತಿಗೆ ಅಷ್ಟಯಾಮ ಯಜ್ಞಕ್ಕೆ ಮುಂದಾದ ಬಿಜೆಪಿ ! title=

ಬೆಂಗಳೂರು: ಗೋವಿನ ವಿವಿಧ ಉಪಯೋಗಗಳನ್ನು ಹಾಗೂ ಪ್ರಾಮುಖ್ಯತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಭಾರತದಲ್ಲಿ ಜಾನುವಾರು ಸಂಖ್ಯೆಯನ್ನು ರಕ್ಷಿಸುವ ಉದ್ದೇಶದಿಂದ ಬಿಜೆಪಿ ಫೆಬ್ರವರಿ 2 ರಂದು ಬೆಂಗಳೂರಿನಲ್ಲಿ 24 ಗಂಟೆಗಳ 'ಗೋರಕ್ಷಾ ಅಷ್ಟಯಾಮ ಯಜ್ಞ' ಮಾಡಲು ಹೊರಟಿದೆ.  

"ವಿವಿಧ ಉಪಯೋಗಗಳು ಮತ್ತು ಅದರ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಮತ್ತು  ಗ್ರಾಮೀಣ ಆರ್ಥಿಕತೆಯನ್ನು ಬಲವರ್ಧಿಸಲು ಜಾನುವಾರು ಸಂಖ್ಯೆಯನ್ನು ರಕ್ಷಿಸಲು ಈ ಯಜ್ಞ ಹಮ್ಮಿಕೊಳ್ಳಲಾಗುತ್ತಿದೆ. ಇದು 24 ಗಂಟೆಗಳ ಕಾಲ 'ಅಖಂಡ ರಾಮಾಯಣ' ವನ್ನು ಅನುಸರಿಸಲಿದೆ " ಎಂದು ಬಿಜೆಪಿಯ ಗೋ ಸಂರಕ್ಷಣಾ ಘಟಕದ ಸಂಚಾಲಕ ಸಿದ್ಧಾರ್ಥ ಗೋಯೆಂಕಾ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಇತರರು ಫೆಬ್ರವರಿ 3 ರಂದು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. 

Trending News