ಪಾಕ್ ಜೈಲಿನಲ್ಲಿ 4 ವರ್ಷ ಕಳೆದ ನಂತರ ಮನೆಗೆ ಬಂದ ಹೈದರಾಬಾದ್ ಟೆಕ್ಕಿ

ಏಪ್ರಿಲ್ 2017 ರಲ್ಲಿ ನಾಪತ್ತೆಯಾಗಿದ್ದ ತೆಲಂಗಾಣದ ಐಟಿ ವಲಯದ ಉದ್ಯೋಗಿ ಪ್ರಶಾಂತ್ ಅವರನ್ನು ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗುವ ದಾರಿಯಲ್ಲಿ ಅಕ್ರಮವಾಗಿ ಗಡಿ ದಾಟಿದ ನಂತರ ಅವರನ್ನು ಪಾಕಿಸ್ತಾನ ಬಂಧಿಸಿತ್ತು.

Last Updated : Jun 2, 2021, 11:32 PM IST
  • ಏಪ್ರಿಲ್ 2017 ರಲ್ಲಿ ನಾಪತ್ತೆಯಾಗಿದ್ದ ತೆಲಂಗಾಣ ವ್ಯಕ್ತಿಯೊಬ್ಬ ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗುವ ದಾರಿಯಲ್ಲಿ ಅಕ್ರಮವಾಗಿ ಗಡಿ ದಾಟಿದ ನಂತರ ಆತನನ್ನು ಪಾಕಿಸ್ತಾನ ಬಂಧಿಸಿತ್ತು.
ಪಾಕ್ ಜೈಲಿನಲ್ಲಿ 4 ವರ್ಷ ಕಳೆದ ನಂತರ ಮನೆಗೆ ಬಂದ ಹೈದರಾಬಾದ್ ಟೆಕ್ಕಿ title=
Photo Courtesy: Twitter

ನವದೆಹಲಿ: ಏಪ್ರಿಲ್ 2017 ರಲ್ಲಿ ನಾಪತ್ತೆಯಾಗಿದ್ದ ತೆಲಂಗಾಣದ ಐಟಿ ವಲಯದ ಉದ್ಯೋಗಿ ಪ್ರಶಾಂತ್ ಅವರನ್ನು ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗುವ ದಾರಿಯಲ್ಲಿ ಅಕ್ರಮವಾಗಿ ಗಡಿ ದಾಟಿದ ನಂತರ ಅವರನ್ನು ಪಾಕಿಸ್ತಾನ ಬಂಧಿಸಿತ್ತು.

ಈಗ ಅವರನ್ನು ಸೋಮವಾರ ಬಿಡುಗಡೆ ಮಾಡಿ ಪಂಜಾಬ್‌ನ ಅತ್ತಾರಿ-ವಾಗಾ ಗಡಿ ದಾಟುವಿಕೆಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.ಅವರು ಸೈಬರಾಬಾದ್ ಕಮಿಷನರೇಟ್ ಪೊಲೀಸ್ ತಂಡಕ್ಕೆ ಸಂಪರ್ಕಿಸಿದರು, ತದನಂತರ ಅವರನ್ನು ತೆಲಂಗಾಣದ ಮಾಧಾಪುರಕ್ಕೆ ಕರೆತರಲಾಯಿತು, ಇದಕ್ಕೂ ಮೊದಲು ಅವರ ಕುಟುಂಬವು ಏಪ್ರಿಲ್ 29, 2017 ರಂದು ಕಾಣೆಯಾದ ಬಗ್ಗೆ ದೂರು ನೀಡಿತ್ತು.

ಇದನ್ನೂ ಓದಿ-ಹೊರಗಿನಿಂದ ಮನೆಗೆ ಬರುವಾಗ ಈ ವಿಚಾರಗಳ ಬಗ್ಗೆ ಇರಲಿ ಎಚ್ಚರ..!

'ತೆಲಂಗಾಣ (Telangana) ಸರ್ಕಾರವು ವಿದೇಶಾಂಗ ಮತ್ತು ಗೃಹ ಸಚಿವಾಲಯಗಳೊಂದಿಗೆ ನಿರಂತರವಾಗಿ ಅನುಸರಿಸಿದ ನಂತರ, ನಾಪತ್ತೆಯಾದ ವ್ಯಕ್ತಿಯನ್ನು ಬಿಡುಗಡೆ ಮಾಡಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ...ಪಂಜಾಬ್‌ನ ಅತ್ತಾರಿ ಗಡಿಯಲ್ಲಿರುವ ಮಾಧಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ ರವೀಂದ್ರ ಪ್ರಸಾದ್ ಅವರಿಗೆ ಹಸ್ತಾಂತರಿಸಲಾಗಿದೆ" ಎಂದು ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: Model Tenancy Act: ಮಾದರಿ ಹಿಡುವಳಿ ಕಾಯ್ದೆಗೆ ಕೇಂದ್ರ ಸರ್ಕಾರದ ಅನುಮತಿ

ಆಶ್ಚರ್ಯಕರ ಸಂಗತಿಯೆಂದರೆ, ಪ್ರಶಾಂತ್ ಅವರು ವೈಯಕ್ತಿಕ ಕಾರಣಗಳಿಗಾಗಿ ಸ್ವಿಟ್ಜರ್ಲೆಂಡ್ಗೆ ಪ್ರಯಾಣಿಸಲು ಬಯಸಿದ್ದರು, ಆದರೆ ಪ್ರವಾಸ ಮಾಡಲು ಹಣಕಾಸಿನ ಕೊರತೆ ಇದ್ದಿದ್ದರಿಂದಾಗಿ ಅವರು ನಡಿಗೆ ಮೂಲಕ ಅಲ್ಲಿಗೆ ಸಾಗಲು ನಿರ್ಧರಿಸಿದ್ದರು.ನಾಲ್ಕು ವರ್ಷಗಳ ಹಿಂದೆ ಏಪ್ರಿಲ್ 11 ರಂದು ಮನೆಯಿಂದ ಹೊರಟು ರಾಜಸ್ಥಾನದ ಬಿಕಾನೆರ್‌ಗೆ ರೈಲು ಹತ್ತಿದರು. ಅಲ್ಲಿಂದ ಅವರು ಬೇಲಿ ಹಾರಿ ಭಾರತ-ಪಾಕಿಸ್ತಾನ ಗಡಿಗೆ ತಲುಪಿದರು.ಅಕ್ರಮ ಪ್ರವೇಶದ ಆರೋಪದ ಮೇಲೆ ಪಾಕ್ ಅಧಿಕಾರಿಗಳು ಅವರನ್ನು ಬಂಧಿಸಿದರು..ಅವರು ನಾಪತ್ತೆಯಾದ ನಂತರ, ಆತಂಕಗೊಂಡ ಕುಟುಂಬ ಸದಸ್ಯರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದರು.

ಇದನ್ನೂ ಓದಿ- ಭೋಜನದ ನಂತರ ಸಾಮಾನ್ಯವಾಗಿ ಮಾಡುವ ಈ ತಪ್ಪನ್ನು ಸರಿಪಡಿಸಿಕೊಳ್ಳಿ

ನಂತರ ಪ್ರಶಾಂತ್ ಅವರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಲಾಯಿತು, ನಂತರ ಅವರು ತೆಲಂಗಾಣ ಸರ್ಕಾರ ಮತ್ತು ಕೇಂದ್ರಕ್ಕೆ ಸೂಚಿಸಿದರು.ಆಗ ಗೃಹ ಮತ್ತು ವಿದೇಶಾಂಗ ಸಚಿವಾಲಯಗಳು ಪಾಕಿಸ್ತಾನ ಸರ್ಕಾರವನ್ನು ಸಂಪರ್ಕಿಸಿದವು.ಈಗ ತಮ್ಮ ಮಗನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಕ್ಕಾಗಿ ಅವರ ಪೋಷಕರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಪಾಕಿಸ್ತಾನದ ಜೈಲಿನಲ್ಲಿದ್ದಾಗ ಸ್ವತಃ ಓದಲು ಕೆಲವು ಪುಸ್ತಕಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಮತ್ತು ಉದ್ಯೋಗ ಸಂದರ್ಶನಗಳನ್ನು ಎದುರಿಸಲು ಸಿದ್ಧನಾಗಿದ್ದೇನೆ, ಆದ್ದರಿಂದ ಹೊಸದಾಗಿ ಜೀವನವನ್ನು ಪ್ರಾರಂಭಿಸಬಹುದು ಎಂದು ಪ್ರಶಾಂತ್ ಹೇಳಿದರು.

ಇದನ್ನೂ ಓದಿ- Budh Vakri 2021: ಈ ದಿನದ ಮಧ್ಯರಾತ್ರಿಯಿಂದ ಈ ರಾಶಿಯ ಜನರು ಎಚ್ಚರದಿಂದಿರಬೇಕಾಗಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News