12 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ ಶಿಕ್ಷಕ, ಗ್ರಾಮಸ್ಥರಿಂದ ಥಳಿತ

ತನ್ನ 12 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದಿದ್ದರಿಂದ ಶಾಲಾ ಶಿಕ್ಷಕನೊಬ್ಬನನ್ನು ಥಳಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮನ್ಪುರ್ ಗ್ರಾಮದಲ್ಲಿ ಶನಿವಾರ ನಡೆದಿದೆ.ವೈಭವ್ ನಾಯಕ್ ಎಂದು ಗುರುತಿಸಲ್ಪಟ್ಟ ಶಿಕ್ಷಕನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿ ಕಿರುಕುಳ ಪ್ರಕರಣ ದಾಖಲಿಸಲಾಗಿದೆ.

Written by - Zee Kannada News Desk | Last Updated : Jun 28, 2021, 12:23 AM IST
  • ತನ್ನ 12 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದಿದ್ದರಿಂದ ಶಾಲಾ ಶಿಕ್ಷಕನೊಬ್ಬನನ್ನು ಥಳಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮನ್ಪುರ್ ಗ್ರಾಮದಲ್ಲಿ ಶನಿವಾರ ನಡೆದಿದೆ.
  • ವೈಭವ್ ನಾಯಕ್ ಎಂದು ಗುರುತಿಸಲ್ಪಟ್ಟ ಶಿಕ್ಷಕನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿ ಕಿರುಕುಳ ಪ್ರಕರಣ ದಾಖಲಿಸಲಾಗಿದೆ.
12 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ ಶಿಕ್ಷಕ, ಗ್ರಾಮಸ್ಥರಿಂದ ಥಳಿತ title=
ಸಾಂದರ್ಭಿಕ ಚಿತ್ರ

ನವದೆಹಲಿ: ತನ್ನ 12 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದಿದ್ದರಿಂದ ಶಾಲಾ ಶಿಕ್ಷಕನೊಬ್ಬನನ್ನು ಥಳಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮನ್ಪುರ್ ಗ್ರಾಮದಲ್ಲಿ ಶನಿವಾರ ನಡೆದಿದೆ.ವೈಭವ್ ನಾಯಕ್ ಎಂದು ಗುರುತಿಸಲ್ಪಟ್ಟ ಶಿಕ್ಷಕನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿ ಕಿರುಕುಳ ಪ್ರಕರಣ ದಾಖಲಿಸಲಾಗಿದೆ.

"ಇಂದೋರ್‌ನ ಮನ್‌ಪುರ ಗ್ರಾಮದಲ್ಲಿ ವಾಸಿಸುತ್ತಿರುವ 12 ವರ್ಷದ ಬಾಲಕಿಗೆ ತನ್ನ ಸ್ವಂತ ಶಾಲಾ ಶಿಕ್ಷಕರಿಂದ ಪ್ರೇಮ ಪತ್ರವೊಂದನ್ನು ಕಳುಹಿಸಲಾಗಿದ್ದು, ಅದು ಬಾಲಕಿಯ ಕುಟುಂಬ ಮತ್ತು ಗ್ರಾಮಸ್ಥರ ಗಮನಕ್ಕೆ ಬಂದ ನಂತರ, ಆತನನ್ನು ಥಳಿಸಿದ್ದಾರೆ.

ಈಗ ಶಿಕ್ಷಕನನ್ನು ವೈಭವ್ ನಾಯಕ್ ಎಂದು ಗುರುತಿಸಲಾಗಿದೆ, ಅವರನ್ನು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.ಗ್ರಾಮಸ್ಥರ ವಿರುದ್ಧವೂ ಹಲ್ಲೆ ಪ್ರಕರಣ ದಾಖಲಿಸಲಾಗಿದೆ "ಎಂದು ಮನ್ಪುರ ಪೊಲೀಸ್ ಠಾಣೆ ಉಸ್ತುವಾರಿ ಹಿತೇಂದ್ರ ಸಿಂಗ್ ರಾಥೋಡ್ ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆ: ಆರ್‌ಜೆಡಿ ನಾಯಕ ತೇಜಶ್ವಿ ಯಾದವ್ ಮಹಾಮೈತ್ರಿ ಒಕ್ಕೂಟದ ಸಿಎಂ ಅಭ್ಯರ್ಥಿ

ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಗ್ರಾಮಸ್ಥರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಹುಡುಗಿಯ ತಂದೆಯ ಪ್ರಕಾರ, ಅವರ ಮಗಳು ಬೋಧನೆಗಾಗಿ ನಾಯಕ್‌ ನ ಹತ್ತಿರ ಹೋಗುತ್ತಿದ್ದಳು ಆದರೆ ಶಿಕ್ಷಕನ ಅನುಚಿತ ವರ್ತನೆಯಿಂದ 1.5 ವರ್ಷಗಳ ಹಿಂದೆ ತ್ಯಜಿಸಿದ್ದಳು ಎನ್ನಲಾಗಿದೆ.

'ಅವರು ಆರ್ಎಸ್ ಪಬ್ಲಿಕ್ ಶಾಲೆಯ ನಿರ್ದೇಶಕರು ಮತ್ತು ಶಿಕ್ಷಕರಾಗಿದ್ದಾರೆ. ಶಾಲೆಯನ್ನು ನಡೆಸುವ ಇಬ್ಬರು ಜನರಿದ್ದಾರೆ. ನನ್ನ ಮಗಳು ಸುಮಾರು 1.5 ವರ್ಷಗಳ ಹಿಂದೆ ಕೋಚಿಂಗ್ಗಾಗಿ ಅವನ ಬಳಿಗೆ ಹೋಗುತ್ತಿದ್ದಳು.ಆ ಸಮಯದಲ್ಲಿ ಅವನ ಕೆಲವು ವರ್ತನೆಗಳಿಂದಾಗಿ ಕೋಚಿಂಗ್ ತೊರೆದಿದ್ದಳು. ನಂತರ 2-3 ದಿನಗಳ ಹಿಂದೆ, ಅವರು 6 ವರ್ಷದ ಹುಡುಗಿಯ ಮೂಲಕ ಪತ್ರವೊಂದನ್ನು ಕಳುಹಿಸಿದ್ದರು.

ಇದನ್ನೂ ಓದಿ: Tejashwi Yadav: 'ಅನ್ನದಾತರಿಗಾಗಿ ನಾನು ಗಲ್ಲಿಗೇರಲೂ ಸಿದ್ಧ, ತಾಕತ್ತಿದ್ದರೆ ಅರೆಸ್ಟ್ ಮಾಡಿ'

ಇದನ್ನು ಕೇಳಿದ ನನ್ನ ಮಗಳು ಭಯಭೀತರಾಗಿದ್ದಳು ಮತ್ತು ಅವಳು ಎರಡು ಬಾರಿ ಪ್ರಜ್ಞಾಹೀನಳಾಗಿದ್ದಳು. ಅವಳು 2.5 ವರ್ಷದವಳಿದ್ದಾಗ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು.ಅವಳಿಗೆ ಎದೆ ನೋವು ಮತ್ತು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು ಎಂದು ಅವರ ತಂದೆ ತಿಳಿಸಿದ್ದಾರೆ.ಈ ವಿಷಯ ಬೆಳಕಿಗೆ ಬಂದಾಗ ಗ್ರಾಮಸ್ಥರು ಕಾನೂನು  ಕೈಗೆ ತೆಗೆದುಕೊಂಡರು ಎಂದು ಹೇಳಿದರು.

ಅವರು ಶಿಕ್ಷಕನನ್ನು ಹೊಡೆದರು, ಅವರ ತಲೆಯ ಅರ್ಧದಷ್ಟು ಕ್ಷೌರ ಮಾಡಿದರು, ಮುಖವನ್ನು ಕಪ್ಪಾಗಿಸಿದರು ಮತ್ತು ಮೆರವಣಿಗೆ ಮಾಡಿದರು, ಕುಟುಂಬ ಸದಸ್ಯರು ಈ ಘಟನೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ-ಮಕ್ಕಳಲ್ಲಿನ ಕಿರಿಕಿರಿ ತೊಡೆದುಹಾಕಲು ಬೈಬೇಡಿ, ಹೊಡೆಯಬೇಡಿ, ಈ ಸಿಂಪಲ್ ವಿಧಾನಗಳನ್ನು ಅನುಸರಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News