ದೆಹಲಿ-ಪಂಜಾಬ್ ನಂತರ ಈ ರಾಜ್ಯದವರಿಗೆ ಸಿಗಲಿದೆ ಫ್ರೀ ವಿದ್ಯುತ್

ಆಮ್ ಆದ್ಮಿ ಪಕ್ಷವನ್ನು ಹುಟ್ಟು ಹಾಕಿ ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಜನಪರ ಕೆಲಸ ಮಾಡುತ್ತಿರುವ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಇದೀಗ ಮಹತ್ವದ ಘೋಷಣೆ ಒಂದನ್ನು ಮಾಡಿದ್ದಾರೆ. 

Written by - Yashaswini V | Last Updated : Jul 21, 2022, 02:18 PM IST
  • ಅರವಿಂದ್ ಕೇಜ್ರಿವಾಲ್ ಮಹತ್ವದ ಘೋಷಣೆ
  • ದೆಹಲಿ ಹರಿಯಾಣದ ಬಳಿಕ ಮತ್ತೊಂದು ರಾಜ್ಯದ ಮೇಲೆ ಆಪ್ ಕಣ್ಣು
  • ಈ ರಾಜ್ಯದಲ್ಲಿ ಸರ್ಕಾರ ರಚನೆಯಾದರೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕೇಜ್ರಿವಾಲ್ ಭರವಸೆ
ದೆಹಲಿ-ಪಂಜಾಬ್ ನಂತರ ಈ ರಾಜ್ಯದವರಿಗೆ ಸಿಗಲಿದೆ ಫ್ರೀ ವಿದ್ಯುತ್ title=
Free electricity

ಈ ರಾಜ್ಯದಲ್ಲೂ ಉಚಿತ ವಿದ್ಯುತ್ ಭರವಸೆ ನೀಡಿದ ಕೇಜ್ರಿವಾಲ್: ಆಮ್ ಆದ್ಮಿ ಪಕ್ಷ ಕಟ್ಟಿ ರಾಷ್ಟ್ರ ರಾಜಧಾನಿಯಲ್ಲಿ ಸತತ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ದೊಡ್ಡ ಘೋಷಣೆ ಮಾಡಿದ್ದಾರೆ. ದೆಹಲಿ-ಪಂಜಾಬ್ ನಂತರ ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯದ ಮೇಲೆ ಕಣ್ಣಿಟ್ಟಿರುವ ಕೇಜ್ರಿವಾಲ್, ಗುಜರಾತ್‌ನಲ್ಲಿ ಸರ್ಕಾರ ರಚನೆಯಾದರೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದಾರೆ.

ಗುಜರಾತ್ ಪ್ರವಾಸಕ್ಕೆ ಆಗಮಿಸಿದ್ದ ಕೇಜ್ರಿವಾಲ್ ಈಗ ಗುಜರಾತ್ ಬದಲಾವಣೆ ಬಯಸಿದೆ. ಗುಜರಾತಿನಲ್ಲಿ ಎಲ್ಲರನ್ನೂ ಭಯದಲ್ಲಿ ಇಡಲಾಗಿದೆ. 27 ವರ್ಷಗಳಿಂದ ಒಂದೇ ಪಕ್ಷ ಆಡಳಿತದಿಂದ ಬೇಸತ್ತಿರುವ ಜನರು ಬದಲಾವಣೆ ಬಯಸುತ್ತಿದ್ದಾರೆ. ಗುಜರಾತಿನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಇಲ್ಲಿ  24 ಗಂಟೆ ವಿದ್ಯುತ್ ನೀಡಲು ಪ್ರಯತ್ನಿಸುತ್ತೇವೆ. ದೆಹಲಿ, ಪಂಜಾಬ್‌ನಲ್ಲಿ ವಿದ್ಯುತ್ ಉಚಿತ ನೀಡಿದಂತೆ ಗುಜರಾತ್ ಜನತೆಗೂ ಉಚಿತ ವಿದ್ಯುತ್ ಲಭ್ಯವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ- 'ನಾನು ಇಂದಿರಾಯವರ ಸೊಸೆ, ನಾನು ಯಾರಿಗೂ ಹೆದರುವುದಿಲ್ಲ'

ನಮಗೆ ರಾಜಕೀಯ ಮಾಡುವುದು ಗೊತ್ತಿಲ್ಲ:
ಗುಜರಾತ್‌ನ ಸೂರತ್ ಪ್ರವಾಸದಲ್ಲಿರುವ ಅರವಿಂದ್ ಕೇಜ್ರಿವಾಲ್, ನಮಗೆ ರಾಜಕೀಯ ಮಾಡುವುದು ಗೊತ್ತಿಲ್ಲ, ಇದು ಪ್ರಾಮಾಣಿಕರ ಪಕ್ಷ, ಕೆಲಸ ಮಾಡದಿದ್ದರೆ ಮತ ಹಾಕಬೇಡಿ. ನಮ್ಮ ಸರ್ಕಾರ ಬಂದರೆ ಮೂರು ತಿಂಗಳಲ್ಲಿ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ನೀವು ದೆಹಲಿ-ಪಂಜಾಬ್‌ನಲ್ಲಿ ಉಚಿತ ವಿದ್ಯುತ್ ಲಭ್ಯವಿರುವಂತೆ ಗುಜರಾತ್‌ನಲ್ಲಿಯೂ ಲಭ್ಯವಿರುತ್ತದೆ. 24 ಗಂಟೆಗಳ ಕಾಲ ವಿದ್ಯುತ್ ಲಭ್ಯವಿರುತ್ತದೆ, ವಿದ್ಯುತ್ ಕಡಿತ ಇರುವುದಿಲ್ಲ. ಈ ಮ್ಯಾಜಿಕ್ ಮಾಡಲು ಮೇಲಿನವರು ನನಗೆ ಮಾತ್ರ ಮಾರ್ಗವನ್ನು ನೀಡಿದ್ದಾರೆ. ಈ ಮ್ಯಾಜಿಕ್ ಮಾಡುವುದು ಬೇರೆ ಯಾರಿಗೂ ತಿಳಿದಿಲ್ಲ ಎಂದರು.
 
ಇದನ್ನೂ ಓದಿ- ಲಕ್ನೋದಲ್ಲಿ 104 ಹಂದಿಗಳನ್ನು ಬಲಿ ತೆಗೆದುಕೊಂಡ ಆಫ್ರಿಕನ್ ಫ್ಲೂ

ಈ ಸಂದರ್ಭದಲ್ಲಿ ಆಡಳಿತ ಪಕ್ಷ ಬಿಜೆಪ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಅರವಿಂದ್ ಕೇಜ್ರಿವಾಲ್, ಹಲವು ಪಕ್ಷಗಳು ಚುನಾವಣೆಗೆ ಮುನ್ನ ಬಂದು "ಸಂಕಲ್ಪ ಪತ್ರ" ತೋರಿಸುತ್ತವೆ. ಚುನಾವಣೆಯ ನಂತರ ₹ 15 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದೀರಿ ಎಂದು ಕೇಳಿದರೆ ಜುಮ್ಲಾ ಎನ್ನುತ್ತಾರೆ. ನಾವು ಚುನಾವಣಾ ಗಿಮಿಕ್‌ಗಳನ್ನು ಹೇಳುವುದಿಲ್ಲ, ನಾವು ಏನು ಹೇಳುತ್ತೇವೆಯೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News