ಗರ್ಭಿಣಿ ಹೆಂಡತಿ ಎದುರೇ ದಲಿತ ಯುವಕನ ಬರ್ಬರ ಹತ್ಯೆ

ಎರಡು ಒಪ್ಪಿತ ಮನಸ್ಸುಗಳು ಪ್ರೀತಿಯ ಮೂಲಕ ಮದುವೆಯಾದಾಗ ಅಂತಹ ಎರಡು ಸಂಬಂಧವನ್ನು ಕೊಲೆ ಮೂಲಕ  ಚಿವುಟಿ ಹಾಕುವ ಕಾಯಕವಿದೆಯಲ್ಲ  ಅದು ಎಂತವರ ಎದೆಯನ್ನು ಕೂಡ ಝೆಲ್ಲೆನಿಸುತ್ತದೆ. ಈಗ ಇಂತಹದ್ದೇ ಅಮಾನವೀಯ ಘಟನೆಯೊಂದು ತೆಲಂಗಾಣದ ಮಿರ್ಯಾಲ್ಗುಡಾ ಪಟ್ಟಣದಲ್ಲಿ ನಡೆದಿದೆ. 

Last Updated : Sep 15, 2018, 02:56 PM IST
ಗರ್ಭಿಣಿ ಹೆಂಡತಿ ಎದುರೇ ದಲಿತ ಯುವಕನ ಬರ್ಬರ ಹತ್ಯೆ  title=
Photo:facebook

ಹೈದರಾಬಾದ್: ಎರಡು ಒಪ್ಪಿತ ಮನಸ್ಸುಗಳು ಪ್ರೀತಿಯ ಮೂಲಕ ಮದುವೆಯಾದಾಗ ಅಂತಹ ಎರಡು ಸಂಬಂಧವನ್ನು ಕೊಲೆ ಮೂಲಕ  ಚಿವುಟಿ ಹಾಕುವ ಕಾಯಕವಿದೆಯಲ್ಲ  ಅದು ಎಂತವರ ಎದೆಯನ್ನು ಕೂಡ ಝೆಲ್ಲೆನಿಸುತ್ತದೆ. ಈಗ ಇಂತಹದ್ದೇ ಅಮಾನವೀಯ ಘಟನೆಯೊಂದು ತೆಲಂಗಾಣದ ಮಿರ್ಯಾಲ್ಗುಡಾ ಪಟ್ಟಣದಲ್ಲಿ ನಡೆದಿದೆ. 

22 ವರ್ಷ ವಯಸ್ಸಿನ ದಲಿತ ಪೆರುಮಲ್ಲಾ ಪ್ರಣವ್ ಎನ್ನುವ ಯುವಕನು ಮೇಲ್ಜಾತಿ ಯುವತಿಯನ್ನು ಮದುವೆಯಾಗಿದ್ದನು. ಏಳು ತಿಂಗಳ ಗರ್ಭಿಣಿಯಾಗಿದ್ದ ತನ್ನ ಪತ್ನಿ ಅಮೃತಾ ವರ್ಷಿಣಿಯನ್ನು ಮಿರ್ಯಾಲ್ಗುಡಾದಲ್ಲಿನ ಆಸ್ಪತ್ರೆಗೆ ದಾಖಲಿಸಿತ್ತು. ಆ ಸಂದರ್ಭದಲ್ಲಿ ಪ್ರಣಯ್ ರವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಕೊಲೆಯನ್ನು ಅಮೃತವರ್ಷಿಣಿಯ ತಂದೆ ಮತ್ತು ಅವರ ಅಂಕಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಆದರೆ ಈಗ ಅವರಿಬ್ಬರು ತಲೆಮೆರೆಸಿಕೊಂಡಿದ್ದಾರೆ ಎನ್ನಲಾಗಿದೆ. ಅವರಿಗಾಗಿ ಪೊಲೀಸರು ಇನ್ನು ಶೋಧ ನಡೆಸಿದ್ದಾರೆ ಎಂದು  ತಿಳಿದುಬಂದಿದೆ.

ಪ್ರಣವ್ ಮತ್ತು ಅಮೃತವರ್ಷಿಣಿ ಮದುವೆಗೆ ಹುಡುಗಿ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿತ್ತು ಎಂದು ಹೇಳಲಾಗಿದೆ. ಬಾಲ್ಯದಿಂದಲೂ ಸ್ನೇಹಿತರಾಗಿದ್ದ ಇಬ್ಬರು,  ಹುಡುಗಿಯ ತಂದೆ ಮಾರುತಿರಾವ್ ಅವರ ವಿರೋಧದ ನಡುವೆಯೂ ಇಬ್ಬರು ಮದುವೆಯಾಗಿದ್ದರು ಎಂದು ಹೇಳಲಾಗಿದೆ.

ಶುಕ್ರವಾರದಂದು ಪ್ರಣಯ್ ತನ್ನ ತಾಯಿಯೊಂದಿಗೆ 7 ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.ಸಿಸಿಟಿವಿಯಲ್ಲಿನ ದೃಶ್ಯದಲ್ಲಿ ಅವರು ಆಸ್ಪತ್ರೆಯ ಹೊರಗೆ ಬರುತ್ತಿರಬೇಕಾದರೆ ಅವನ ತೆಲೆಗೆ ಹೊಡೆದು ಹತ್ಯೆ ಮಾಡಿರುವ ದೃಶ್ಯ ಸೆರೆಯಾಗಿದೆ ಎಂದು ತಿಳಿದುಬಂದಿದೆ. 

 

Trending News