ಮುಂಬರುವ 45 ದಿನಗಳವರೆಗೆ ಹಣದಲ್ಲೇ ಮಿಂದೇಳಲಿದ್ದಾರೆ ಈ ರಾಶಿಯವರು ! ಮಾಡುವ ಕೆಲಸವೆಲ್ಲವೂ ಮಂಗಳವೇ

Mangal Gochar Effect 2023: ಮಂಗಳನು ಕರ್ಕ ರಾಶಿಯನ್ನು ಪ್ರವೇಶಿಸುತ್ತಿರುವುದು ಕೆಲವು ರಾಶಿಯವರ ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಇನ್ನು ಕೆಲವರ ಜೀವನದಲ್ಲಿ ಅದೃಷ್ಟವು ತೆರೆದುಕೊಳ್ಳುತ್ತದೆ. 

Written by - Ranjitha R K | Last Updated : May 17, 2023, 03:59 PM IST
  • ಪ್ರತಿಯೊಂದು ಗ್ರಹಗಳ ಸಂಚಾರಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ.
  • ಮೇ 10 ರಂದು ಮಂಗಳ ಕರ್ಕ ರಾಶಿಯನ್ನು ಪ್ರವೇಶಿಸಿದ್ದಾನೆ.
  • ಕೆಲವರ ಜೀವನದಲ್ಲಿ ಅದೃಷ್ಟವು ಬಾಗಿಲು ತೆರೆದುಕೊಳ್ಳುತ್ತದೆ.
ಮುಂಬರುವ 45 ದಿನಗಳವರೆಗೆ ಹಣದಲ್ಲೇ ಮಿಂದೇಳಲಿದ್ದಾರೆ ಈ ರಾಶಿಯವರು !  ಮಾಡುವ ಕೆಲಸವೆಲ್ಲವೂ ಮಂಗಳವೇ   title=

Mangal Gochar Effect 2023 : ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಗಳ ಸಂಚಾರಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಒಂದು ಗ್ರಹವು ಸಂಕ್ರಮಿಸಿದಾಗ, ಅದರ ಪರಿಣಾಮವನ್ನು ಎಲ್ಲಾ ರಾಶಿಯವರ ಜೀವನದಲ್ಲಿ ಕಾಣಬಹುದಾಗಿದೆ. ಮೇ 10 ರಂದು ಮಂಗಳ ಕರ್ಕ ರಾಶಿಯನ್ನು ಪ್ರವೇಶಿಸಿದ್ದಾನೆ. ಕರ್ಕ ರಾಶಿಯನ್ನು ಮಂಗಳನ ದುರ್ಬಲ ರಾಶಿ ಎಂದು ಕರೆಯಲಾಗುತ್ತದೆ. ಹೀಗಾಗಿ ಮಂಗಳನು ಕರ್ಕ ರಾಶಿಯನ್ನು ಪ್ರವೇಶಿಸಿರುವುದು ಕೆಲವು ರಾಶಿಯವರ ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಇನ್ನು ಕೆಲವರ ಜೀವನದಲ್ಲಿ ಅದೃಷ್ಟವು ತೆರೆದುಕೊಳ್ಳುತ್ತದೆ. 

ಮೇಷ ರಾಶಿ : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕಾಟಕ ರಾಶಿಯಲ್ಲಿ ಮಂಗಳನ ಸಂಚಾರವು ಮೇಷ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ, ಈ ರಾಶಿಯವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಇವರ ಆದಾಯದಲ್ಲಿ ಉತ್ತಮ ಏರಿಕೆ ಕಂಡುಬರಲಿದೆ. ವ್ಯಕ್ತಿಯ ಕಾರ್ಯಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಈ ಸಮಯದಲ್ಲಿ, ಪೋಷಕರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆಯಿದೆ.  

ಇದನ್ನೂ ಓದಿ : Shani Mahadasha ನೀಡಲಿದೆ ಬಂಪರ್ ಲಾಭ: ಮುಂದಿನ 19 ವರ್ಷಗಳವರೆಗೆ ಇವರಿಗೆ ರಾಜ ಯೋಗ!

ವೃಷಭ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಯವರಿಗೆ ಮಂಗಳನ ಸಂಕ್ರಮಣ ವು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ  ವೃಷಭ ರಾಶಿಯವರು ಒಳ್ಳೆಯ ಸುದ್ದಿಯನ್ನು ಕೇಳಲಿದ್ದಿರಿ. ವಾಹನ, ಜಮೀನು ಖರೀದಿಸುವ ಆಸೆ ಶೀಘ್ರದಲ್ಲೇ ಈಡೇರಲಿವೆ. ಅಷ್ಟೇ ಅಲ್ಲ, ಮಂಗಳನ ಸಂಚಾರವು ಉದ್ಯೋಗಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲಿದೆ.  ವೃತ್ತಿಗೆ ಸಂಬಂಧಿಸಿದಂತೆ ಎದುರಾಗಿದ್ದ ಸಮಸ್ಯೆಗಳು ದೂರವಾಗುತ್ತವೆ.

ಮಿಥುನ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಅವಧಿಯಲ್ಲಿ ಮಿಥುನ ರಾಶಿಯವರ ಧೈರ್ಯ ಮತ್ತು ಶೌರ್ಯ ಹೆಚ್ಚುತ್ತದೆ. ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗಬಹುದು. ಈ ಸಮಯದಲ್ಲಿ ಸಾಮಾಜಿಕ ಗೌರವ ಹೆಚ್ಚಾಗಲಿದೆ. ವಿರೋಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಹೋಗಿ ವಿಫಲರಾಗುತ್ತಾರೆ.  

ಇದನ್ನೂ ಓದಿ : Chanakya Niti: ಹಠಾತ್ ಆಗಿ ಸಿಗುವ ಹಣದಿಂದ ಎಂದಿಗೂ ಈ ಕೆಲಸಗಳನ್ನು ಮಾಡಲೇಬಾರದು

ಕನ್ಯಾರಾಶಿ :
ಮುಂಬರುವ 45 ದಿನಗಳು ಈ ರಾಶಿಯವರಿಗೆ ಅತ್ಯಂತ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. ಮಂಗಳನ ಸಂಚಾರವು ಈ ರಾಶಿಯ ಜನರ ಎಲ್ಲಾ ಆಸೆಗಳನ್ನು ಈಡೇರಿಸುತ್ತದೆ. ಈ ಸಮಯದಲ್ಲಿ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಅಷ್ಟೇ ಅಲ್ಲ ಈ ಅವಧಿಯಲ್ಲಿ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. 

ತುಲಾ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಸಮಯವು ತುಲಾ ರಾಶಿಯ ಜನರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. ಕುಟುಂಬ ಸದಸ್ಯರೊಂದಿಗಿನ ಸಂಬಂಧಗಳು ಬಲಗೊಳ್ಳುತ್ತವೆ. ಮಕ್ಕಳ ಪ್ರಗತಿಗೆ ದಾರಿಯಾಗುತ್ತದೆ. ಭೂಮಿ ಖರೀದಿಸಲು ಇದು ಉತ್ತಮ ಸಮಯ. ಈ ಸಮಯವು ಉದ್ಯಮಿಗಳಿಗೆ ಅತ್ಯುತ್ತಮವಾಗಿರಲಿದೆ. ವ್ಯವಹಾರದಲ್ಲಿ ಅಪಾರ ಯಶಸ್ಸು ಸಿಗುತ್ತದೆ. 

ಇದನ್ನೂ ಓದಿ : Gajakesari Yog: 48 ಗಂಟೆಗಳ ನಂತರ ಈ ಜನರಿಗೆ ದಿಢೀರ್ ಹಣ & ಅಪಾರ ಯಶಸ್ಸು ಸಿಗುತ್ತದೆ!

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

  

Trending News