ICC ODI Ranking ಪ್ರಕಟ : ಟೀಂ ಇಂಡಿಯಾದ ಈ ಆಟಗಾರ ಈಗ ವಿಶ್ವದ ನಂಬರ್ ಒನ್ ಬೌಲರ್

ICC Bowling Rankings: ಮೊಹಮ್ಮದ್ ಸಿರಾಜ್ ಐಸಿಸಿ ಪುರುಷರ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಅವರು ಏಕದಿನ ಪಂದ್ಯದಲ್ಲಿ ವಿಶ್ವದ  ನಂಬರ್-1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. 

Written by - Ranjitha R K | Last Updated : Sep 20, 2023, 03:51 PM IST
  • ಈ ಆಟಗಾರನೇ ವಿಶ್ವದ ನಂಬರ್ 1 ಬೌಲರ್
  • ಏಷ್ಯಾ ಕಪ್ 2023ರಲ್ಲಿ ಬಿರುಗಾಳಿ ಎಬ್ಬಿಸಿದ ಬೌಲರ್
  • ಫೈನಲ್ ಪಂದ್ಯದಲ್ಲಿ ಗೆಲುವಿನ ರೂವಾರಿ
ICC ODI Ranking ಪ್ರಕಟ : ಟೀಂ ಇಂಡಿಯಾದ ಈ ಆಟಗಾರ ಈಗ ವಿಶ್ವದ ನಂಬರ್ ಒನ್  ಬೌಲರ್  title=

ICC Bowling Rankings : ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಇತ್ತೀಚಿನ  ರ‍್ಯಾಂಕಿಂಗ್‌ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ಈ ಆಟಗಾರ ಏಕದಿನ ಪಂದ್ಯದಲ್ಲಿ  ವಿಶ್ವದ ನಂಬರ್ 1 ಬೌಲರ್ ಎನಿಸಿಕೊಂಡಿದ್ದಾರೆ. ಈ ಆಟಗಾರ ಇತ್ತೀಚೆಗೆ ಏಷ್ಯಾ ಕಪ್ 2023 ರಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದರು. ಏಷ್ಯಾ ಕಪ್ 2023ರ ಫೈನಲ್ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವಿನ  ರೂವಾರಿ ಆಗಿದ್ದರು. 

ಈ ಆಟಗಾರನೇ ವಿಶ್ವದ ನಂಬರ್ 1 ಬೌಲರ್ :
ಐಸಿಸಿ ಪುರುಷರ  ಒನ್ ಡೇ ಇಂಟರ್ ನ್ಯಾಷನಲ್ ಆಟಗಾರರ ಶ್ರೇಯಾಂಕದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದೆ. ಕೊಲಂಬೊದಲ್ಲಿ ಶ್ರೀಲಂಕಾವನ್ನು 50 ರನ್‌ಗಳಿಗೆ ಆಲೌಟ್ ಮಾಡಿದ ಮೊಹಮ್ಮದ್ ಸಿರಾಜ್ ಐಸಿಸಿ ಪುರುಷರ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಅವರು ಏಕದಿನ ಪಂದ್ಯದಲ್ಲಿ ವಿಶ್ವದ  ನಂಬರ್-1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. 

ಇದನ್ನೂ ಓದಿ : ಮದುವೆಯಾದ ಏಳೇ ತಿಂಗಳಿಗೆ ಮತ್ತೆ ಮದುವೆಯಾದ ಸ್ಟಾರ್ ಕ್ರಿಕೆಟಿಗ! ಫೋಟೋ ವೈರಲ್

ಏಷ್ಯಾ ಕಪ್ 2023ರಲ್ಲಿ ಬಿರುಗಾಳಿ ಎಬ್ಬಿಸಿದ ಬೌಲರ್ :  
ಏಷ್ಯಾ ಕಪ್ 2023ರಲ್ಲಿ ಮೊಹಮ್ಮದ್ ಸಿರಾಜ್ 12.2 ಸರಾಸರಿಯಲ್ಲಿ 10 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ಅವರು ಇತ್ತೀಚಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಎಂಟು ಸ್ಥಾನ ಮೇಲಕ್ಕೇರಿದ್ದಾರೆ. ಹೇಜಲ್‌ವುಡ್, ಟ್ರೆಂಟ್ ಬೌಲ್ಟ್, ರಶೀದ್ ಖಾನ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಬೌಲರ್‌ಗಳನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಏರಿದ್ದಾರೆ. 

ಫೈನಲ್ ಪಂದ್ಯದಲ್ಲಿ ಗೆಲುವಿನ ರೂವಾರಿ : 
ಮೊಹಮ್ಮದ್ ಸಿರಾಜ್ ಏಷ್ಯಾ ಕಪ್ 2023ರ ಫೈನಲ್ ಪಂದ್ಯದಲ್ಲಿ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರ ಹೊಮ್ಮಿದ್ದಾರೆ. 7 ಓವರ್ ನಲ್ಲಿ 21 ರನ್ ನೀಡಿ 6 ವಿಕೆಟ್  ಕಬಳಿಸಿದ್ದಾರೆ. ಇನ್ನು ಒಂದೇ ಓವರ್ ನಲ್ಲಿ 4 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಮೊಹಮ್ಮದ್ ಸಿರಾಜ್ ಈ ಪಂದ್ಯದಲ್ಲಿ ಪಾತುಮ್ ನಿಸ್ಸಾಂಕ, ಸದಿರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ್ ಡಿ ಸಿಲ್ವಾ, ದಸುನ್ ಶಾನಕ ಮತ್ತು ಕುಸಾಲ್ ಮೆಂಡಿಸ್ ಅವರನ್ನು ಪೆವಿಲಿಯನ್ ಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ 3 ಆಟಗಾರರದ್ದು ಶೂನ್ಯ ಸಂಪಾದನೆ ಎನ್ನುವುದು ಇಲ್ಲಿ ಗಮನಾರ್ಹ.  

ಇದನ್ನೂ ಓದಿ : “ಸಿರಾಜ್’ಗೆ ಸ್ಥಾನ ನೀಡದಿದ್ದರೆ ರಾಜೀನಾಮೆ”: ಅಂದು ಪಟ್ಟು ಹಿಡಿದ ಈ ಏಕೈಕ ವ್ಯಕ್ತಿಯಿಂದಲೇ ಇಂದು ಭಾರತ ಪರ ಆಡುತ್ತಿದ್ದಾರೆ ಸಿರಾಜ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News